/newsfirstlive-kannada/media/post_attachments/wp-content/uploads/2025/02/KUMBHA_MELA-2.jpg)
ಕೊಪ್ಪಳ; ಮಹಾ ಕುಂಭಮೇಳವನ್ನು ಮುಗಿಸಿ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲು ತೆರಳುವಾಗ ವಿದ್ಯುತ್ ತಂತಿ ತಗುಲಿ ಕರ್ನಾಟಕದ ಯುವಕ ಜೀವ ಕಳೆದುಕೊಂಡ ಘಟನೆ ಗೋರಖ್ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಕೊಪ್ಪಳದ ಕಾರಟಗಿಯ ಸಿದ್ದಾಪುರ ಗ್ರಾಮದ ಪ್ರವೀಣ್ ಹೊಸಮನಿ (27) ಪ್ರಾಣ ಕಳೆದುಕೊಂಡ ಯುವಕ. ಮಹಾ ಕುಂಭಮೇಳ ಹಿನ್ನೆಲೆಯಲ್ಲಿ ಪವಿತ್ರ ಸ್ನಾನ ಮಾಡಲೆಂದು ಕಳೆದ 15 ದಿನಗಳ ಹಿಂದೆಯೇ ಪ್ರವೀಣ್ ಪ್ರಯಾಗ್ರಾಜ್ಗೆ ತೆರಳಿದ್ದನು. ಅಲ್ಲಿ ಸ್ನಾನ, ಪೂಜೆ, ದರ್ಶನ ಎಲ್ಲ ಮುಗಿಸಿಕೊಂಡು ಬಳಿಕ ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯಲೆಂದು ಪ್ರಯಾಣ ಬೆಳೆಸಿದ್ದನು. ಇದಕ್ಕಾಗಿ ಗೋರಖ್ಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದನು.
ಇದನ್ನೂ ಓದಿ: ಐತಿಹಾಸಿಕ ದಿನ; ಪ್ರಪ್ರಥಮ ದೇವಸ್ಥಾನ ನಿರ್ಮಿಸಿ ಪ್ರಾಣಪ್ರತಿಷ್ಠಾಪನೆ.. ಗ್ರಾಮದಲ್ಲಿ ಸಡಗರ, ಸಂಭ್ರಮ
ಆದರೆ ವಿಧಿಯಾಟವೇ ಬೇರೆ ಆಗಿತ್ತು. ಗೋರಖ್ಪುರ ರೈಲ್ವೆ ನಿಲ್ದಾಣದಲ್ಲಿ ವಿದ್ಯುತ್ ತಂತಿ ತಗುಲಿದ ಕಾರಣ ಪ್ರವೀಣ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು ಮೃತದೇಹ ರವಾನೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ಸಿದ್ದಾಪುರ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ