ಕೊನೆಗೂ ಕನ್ನಡಿಗನಿಗೆ ನ್ಯಾಯ ಒದಗಿಸಿದ BCCI.. ಕರುಣ್ ಎದುರಿಸಿದ 7 ವರ್ಷಗಳ ಅಗ್ನಿ ಪರೀಕ್ಷೆ ಹೇಗಿತ್ತು..?

author-image
Ganesh
Updated On
ಕೊನೆಗೂ ಕನ್ನಡಿಗನಿಗೆ ನ್ಯಾಯ ಒದಗಿಸಿದ BCCI.. ಕರುಣ್ ಎದುರಿಸಿದ 7 ವರ್ಷಗಳ ಅಗ್ನಿ ಪರೀಕ್ಷೆ ಹೇಗಿತ್ತು..?
Advertisment
  • 7 ವರ್ಷಗಳ ಬಳಿಕ ಕರುಣ್ ನಾಯರ್​ ಕಮ್​ಬ್ಯಾಕ್
  • ಕನ್ನಡಿಗ ಕರುಣ್​ ನಾಯರ್​ಗೆ ಸಿಕ್ತು ಪುನರ್ಜನ್ಮ
  • ಕರುಣ್ ಪರಿಶ್ರಮಕ್ಕೆ ಕೊನೆಗೂ ಸಿಕ್ತು ಪ್ರತಿಫಲ..!

ಕರುಣ್ ನಾಯರ್ ಮತ್ತು ಶ್ರೇಯಸ್ ಅಯ್ಯರ್. ಇಂಗ್ಲೆಂಡ್ ಪ್ರವಾಸಕ್ಕೆ ಯಾರು ಇರ್ತಾರೋ ಇಲ್ವೋ.. ಇವರಿಬ್ಬರ ಆಯ್ಕೆ ಬಹುತೇಕ ಫಿಕ್ಸ್ ಅಂತಾನೇ ಎಲ್ಲರ ನಿರೀಕ್ಷೆಯಾಗಿತ್ತು. ಈ ಪೈಕಿ ಒಬ್ಬರಿಗೆ ನ್ಯಾಯ ಮಾಡಿದ ಸೆಲೆಕ್ಷನ್ ಕಮಿಟಿ, ಮತ್ತೊಬ್ಬರಿಗೆ ಅನ್ಯಾಯ ಮಾಡಿದೆ.

ಟೆಸ್ಟ್​ನಲ್ಲಿ ತ್ರಿಶತಕ ಸಿಡಿಸಿದ ಹೊರತಾಗಿಯೂ ದೇಶಿ ಕ್ರಿಕೆಟ್​ನಲ್ಲಿ ರನ್ ಗಳಿಸಿದರು. ಸ್ಥಾನ ಸಿಗದ ಹತಾಶೆರಾಗಿದ್ದ ಕರುಣ್ ನಾಯರ್​​​, ಡಿಯರ್​ ಟೆಸ್ಟ್​ ಕ್ರಿಕೆಟ್​ ಗಿವ್​ ಮಿ ಒನ್​ ಮೋರ್​ ಚಾನ್ಸ್​ ಎಂದು ಅಂಗಲಾಚಿ ಮಾಡಿದ್ದ ಟ್ವೀಟ್. ಆದ್ರೀಗ ಅದೇ ಕರುಣ್ ನಾಯರ್ ಟ್ವೀಟ್ ಮತ್ತೆ ವೈರಲ್ ಆಗ್ತಿದೆ. ಇದಕ್ಕೆ ಕಾರಣ ಕರುಣ್ ನಾಯರ್ ಕಮ್​ಬ್ಯಾಕ್​.

ಇದನ್ನೂ ಓದಿ: ಟೀಂ ಇಂಡಿಯಾಗೆ ಗುಜರಾತ್ ತಂಡದಿಂದ 5 ಸ್ಟಾರ್​ಗಳು ಆಯ್ಕೆ.. RCBಯಿಂದ ಎಷ್ಟು ಮಂದಿ ಸೆಲೆಕ್ಟ್..?

publive-image

ಟೀಮ್ ಇಂಡಿಯಾಗೆ ಡೆಬ್ಯು ಮಾಡಿದ 3ನೇ ಇನ್ನಿಂಗ್ಸ್​ನಲ್ಲೇ ತ್ರಿಶತಕ ಸಿಡಿಸಿದ್ರು. ದಿಗ್ಗಜ ಕ್ರಿಕೆಟರ್​ಗಳೇ ಮಾಡದ ಸಾಧನೆಯನ್ನ ಮಾಡಿ ತೋರಿಸಿದ್ದ ಕರುಣ್​ಗೆ ಟೆಸ್ಟ್ ತಂಡದಲ್ಲಿ ಖಾಯಂ ಸ್ಥಾನ ಫಿಕ್ಸ್ ಅನ್ನೋ ಭರವಸೆ ಇತ್ತು. ಈ ತ್ರಿಶತಕ ವೀರ ನಾಲ್ಕೇ ನಾಲ್ಕು ಇನ್ನಿಂಗ್ಸ್​ಗಳ ನಂತರ ಟೀಮ್ ಇಂಡಿಯಾದಿಂದಲೇ ಆಗಿದ್ದು ಕಿಕ್​ಔಟ್​.

7 ವರ್ಷಗಳ ಬಳಿಕ ಕಮ್​ಬ್ಯಾಕ್

ಕರುಣ್ ಟೀಮ್ ಇಂಡಿಯಾ ಪರ ಕೊನೆ ಪಂದ್ಯವನ್ನಾಡಿ ಬರೋಬ್ಬರಿ 7 ವರ್ಷಗಳೇ ಕಳೆದಿವೆ. ಇನ್ನೇನು ಕರಿಯರ್​ ಮುಗುದೋಯ್ತು ಎಂಬ ಸ್ಥಿತಿಯಲ್ಲಿದ್ದ ಕರುಣ್​​ ನಾಯರ್​ಗೆ ಮತ್ತೆ ಕ್ರಿಕೆಟ್ ಕೈ ಹಿಡಿದಿದೆ. ಕರಣ್​, ಕಮ್​ಬ್ಯಾಕ್​ ಕನಸು ನನಸಾಗಿದೆ. ಕನ್ನಡಿಗ ಕೇವಲ ಕನಸನ್ನಷ್ಟೇ ಕಂಡಿರಲಿಲ್ಲ. ಇದಕ್ಕೆ ಬೇಕಾದ ಕಠಿಣ ಶ್ರಮದ ಜೊತೆ ನೂರರಷ್ಟು ಎಫರ್ಟ್.. ಕಲ್ಲು ಮುಳ್ಳಿನ ಹಾದಿಯೇ ಇದೆ.

ಇದನ್ನೂ ಓದಿ: SRH ವಿರುದ್ಧ ಸೋಲಿನಿಂದ ಅಂಕಪಟ್ಟಿಯಲ್ಲಿ ಕುಸಿತ.. ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಶಾಕ್..!

publive-image

ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ಕರುಣ್​ಗೆ ಕರ್ನಾಟಕದ ತಂಡದಲ್ಲೂ ಸ್ಥಾನ ಸಿಗದಂತಾಯ್ತು. ಇದರಿಂದ ವಿದರ್ಭಕ್ಕೆ ವಲಸೆ ಹೋದ ಕರುಣ್, ನಂತರ ರನ್​ಭೂಮಿಯಲ್ಲಿ ಸೃಷ್ಟಿಸಿದ್ದು ರನ್ ಶಿಖರ.. ಒಂದಲ್ಲ.. ಎರಡಲ್ಲ.. ರಣಜಿ ಟೂರ್ನಿ, ವಿಜಯ್​ ಹಜಾರೆ, ಮುಷ್ತಾಕ್​ ಅಲಿ ಟೂರ್ನಿಯಲ್ಲಿ ರನ್ ಹೊಳೆಯನ್ನೇ ಕರುಣ್ ನಾಯರ್ ಹರಿಸಿದ್ದರು.

ದೇಶಿ ಕ್ರಿಕೆಟ್​ನಲ್ಲಿ ಕರುಣ್ ನಾಯರ್ ಆಟ

2023-24ರ ರಣಜಿಯಲ್ಲಿ 10 ಪಂದ್ಯಗಳನ್ನಾಡಿದ ಕರುಣ್, 40.58ರ ಬ್ಯಾಟಿಂಗ್ ಸರಾಸರಿಯಲ್ಲಿ 690 ರನ್ ಸಿಡಿಸಿದ್ದರು. 2 ಶತಕ, 3 ಅರ್ಧಶತಕ ದಾಖಲಿಸಿದ್ದ ಕರುಣ್​​, ವಿದರ್ಭ ಪರ ಟಾಪ್ ಸ್ಕೋರರ್ ಆಗಿ ಮರೆದಾಡಿದ್ದರು. ನಂತರದ 2024-25ರ ರಣಜಿ ಟ್ರೋಫಿಯಲ್ಲೂ ಅದ್ಬುತ ಆಟವಾಡಿದ್ದ ಕರುಣ್, 9 ಪಂದ್ಯಗಳಿಂದ 53.93 ಸರಾಸರಿಯಲ್ಲಿ 863 ರನ್ ಚಚ್ಚಿದ್ದರು. 4 ಶತಕ, 2 ಅರ್ಧಶತಕ ಸಿಡಿಸಿದ್ದ ಕರುಣ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಿಂದ 389.5ರ ಬ್ಯಾಟಿಂಗ್ ಅವರೇಜ್​ನಲ್ಲಿ 779 ರನ್ ಗಳಿಸಿದರು. ಅಷ್ಟೇ ಅಲ್ಲ.! 5 ಶತಕ, 1 ಅರ್ಧಶತಕ ಸಿಡಿಸಿದ ಮಿಂಚಿದ್ರು. ಕರುಣ್ ರನ್ ಪ್ರವಾಹ ಇಲ್ಲಿಗೆ ನಿಲ್ಲಲಿಲ್ಲ. ಕೌಂಟಿ ಕ್ರಿಕೆಟ್​ ಆಡಲು ಇಂಗ್ಲೆಂಡ್​ಗೆ ತೆರಳಿದ ಕನ್ನಡಿಗ ನಾರ್ಥಾಂಪ್ಟನ್‌ಶೈರ್‌ ಪರ 2023 ಹಾಗೂ 2024ರ ಎರಡೂ ಸೀಸನ್​ಗಳಲ್ಲೂ ರನ್ ಮಳೆ ಹರಿಸಿದರು.

publive-image

ಕೌಂಟಿಯಲ್ಲಿ ಕರುಣ್ ನಾಯರ್ ಬ್ಯಾಟಿಂಗ್

2023ರ ಸೀಸನ್​ನಲ್ಲಿ ಕೇವಲ 3 ಪಂದ್ಯಗಳನ್ನಾಡಿದ ಕರುಣ್ ನಾಯರ್, 83ರ ಸರಾಸರಿಯಲ್ಲಿ 249 ರನ್ ಕಲೆಹಾಕಿದ್ರೆ. ತಲಾ 1 ಶತಕ, 1 ಅರ್ಧಶತಕ ಸಿಡಿಸಿದ್ರು. ಇನ್ನು ಈ ವರ್ಷವೂ ಅದೇ ಫಾರ್ಮ್​ ಮುಂದುವರಿಸಿದ ಕರುಣ್​ , 7 ಪಂದ್ಯಗಳಿಂದ 49ರ ಸರಾಸರಿಯಲ್ಲಿ 487 ರನ್ ಕಲೆಹಾಕಿದ್ದರು. ಈ ಪೈಕಿ 1 ಶತಕ, 3 ಅರ್ಧಶತಕಗಳಿವೆ.

ಕರುಣ್ ನಾಯರ್​​ ರ ಈ ಅದ್ಬುತ ಆಟಕ್ಕೀಗ ಪ್ರತಿಫಲ ಸಿಕ್ಕಿದೆ. ಅಂದು ಯಾವ ಇಂಗ್ಲೆಂಡ್ ಎದುರು ಡೆಬ್ಯ ಮಾಡಿದ್ರೋ, ಅದೇ ತಂಡದ ಎದುರು ಕ್ರಿಕೆಟ್​​ನ ಪುನಜನ್ಮ ಸಿಕ್ಕಿದೆ.

ಇದನ್ನೂ ಓದಿ: ಇವತ್ತು ಗುಜರಾತ್ ಸೋತರೆ.. ಆರ್​ಸಿಬಿಗೆ ಇದೆ ಇನ್ನೊಂದು ಚಾನ್ಸ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment