ಕಾಶ್ಮೀರ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ -ಟ್ರಂಪ್​ಗೆ ಭಾರತ ಸ್ಪಷ್ಟ ಸಂದೇಶ

author-image
Ganesh
Updated On
ಕಾಶ್ಮೀರ ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯೂ ಬೇಕಾಗಿಲ್ಲ -ಟ್ರಂಪ್​ಗೆ ಭಾರತ ಸ್ಪಷ್ಟ ಸಂದೇಶ
Advertisment
  • ಅಕ್ರಮವಾಗಿ ಆಕ್ರಮಿಸಿರುವ ಕಾಶ್ಮೀರದಿಂದ ಬಿಟ್ಟು ತೊಲಗಿ -ಪಾಕ್​ಗೆ ಎಚ್ಚರಿಕೆ
  • ಜಮ್ಮು-ಕಾಶ್ಮೀರ ಭಾರತ ಮತ್ತು ಪಾಕ್ ನಡುವಿನ ವಿಷಯ ಮಾತ್ರ
  • ಪಾಕ್ ಭಯೋತ್ಪಾದನೆಯನ್ನು ಕೈಗಾರಿಕೆಯ ರೀತಿ ಬೆಳೆಸುತ್ತಿದೆ

ಭಾರತ ಮತ್ತು ಪಾಕಿಸ್ತಾನ ಉದ್ವಿಗ್ನತೆಯ ಮಧ್ಯೆ ಕಾಶ್ಮೀರದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿದೇಶಾಂಗ ಸಚಿವಾಲಯವು ಮಂಗಳವಾರ ಕಾಶ್ಮೀರದ ವಿಚಾರದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ.. ಕಾಶ್ಮೀರದಲ್ಲಿ ಯಾರ ಮಧ್ಯಸ್ಥಿಕೆಯನ್ನೂ ಭಾರತ ಸ್ವೀಕರಿಸುವುದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯ ಮಾತ್ರ ಎಂದು ಗುಡುಗಿದ್ದಾರೆ.
ಭಾರತದ ನಿಲುವು ಸ್ಪಷ್ಟ ಮತ್ತು ದೃಢವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ವಿಷಯವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಷಯ. ಭಾರತದ ಈ ನೀತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು (ಪಿಒಕೆ)ಯನ್ನು ಬಿಟ್ಟು ತೊಲಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿಗೆ ಬಿಸಿ ಮುಟ್ಟಿಸಿದ ಭಾರತೀಯರು.. ಬಾಯ್ಕಾಟ್ ಯುದ್ಧ ಆರಂಭ

ಪಾಕಿಸ್ತಾನ ಭಯೋತ್ಪಾದನೆಯನ್ನು ಕೈಗಾರಿಕೆಯ ರೀತಿ ಬೆಳೆಸುತ್ತಿದೆ. ಜಮ್ಮು ಕಾಶ್ಮೀರ ವಿಷಯವನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲಾಗುತ್ತದೆ. ಪಾಕಿಸ್ತಾನವು ಕದನ ವಿರಾಮ ಉಲಂಘಿಸಿದರೆ, ನಮ್ಮ ಸೇನೆ ಪ್ರತಿ ದಾಳಿ ಮಾಡುತ್ತದೆ. ಸಿಂಧೂ ನದಿ ನೀರು ಹಂಚಿಕೆಯ ಒಪ್ಪಂದ ಸಸ್ಪೆಂಡ್​ನಲ್ಲಿದೆ. ಈಗಿನ ವಿಷಯ ಪಿಓಕೆ ಬಗ್ಗೆ ಮಾತ್ರ. ಪಾಕಿಸ್ತಾನವು ಭಯೋತ್ಪಾದನೆಯನ್ನು ನಿಲ್ಲಿಸುವವರೆಗೂ ಸಿಂಧೂ ನದಿ ಒಪ್ಪಂದ ಸಸ್ಪೆಂಡ್ ಆಗಿರಲಿದೆ ಎಂದಿದ್ದಾರೆ.

ಇದನ್ನೂ ಓದಿ: ಐಪಿಎಲ್​​ಗೆ ಕೈಕೊಟ್ಟ ಇಂಗ್ಲೆಂಡ್​ನ ಐದು ಸ್ಟಾರ್ ಆಟಗಾರರು.. ಆರ್​ಸಿಬಿಗೂ ಆಘಾತ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment