ಮಾಜಿ ಕ್ರಿಕೆಟರ್​​ S ಶ್ರೀಶಾಂತ್​ಗೆ ಭಾರೀ ಸಂಕಷ್ಟ.. ಕ್ರಿಕೆಟ್​ನಿಂದ ಮತ್ತಷ್ಟು ದೂರ ದೂರ, ಯಾಕೆ?

author-image
Bheemappa
Updated On
ಮಾಜಿ ಕ್ರಿಕೆಟರ್​​ S ಶ್ರೀಶಾಂತ್​ಗೆ ಭಾರೀ ಸಂಕಷ್ಟ.. ಕ್ರಿಕೆಟ್​ನಿಂದ ಮತ್ತಷ್ಟು ದೂರ ದೂರ, ಯಾಕೆ?
Advertisment
  • ಟೀಮ್ ಇಂಡಿಯಾದ ಮಾಜಿ ಆಟಗಾರ ಮತ್ತೆ ಏನು ಮಾಡಿದರು?
  • ಈ ಕಾರಣದಿಂದ ಎಸ್​ ಶ್ರೀಶಾಂತ್ ವಿರುದ್ಧ ಕ್ರಮ ಕೈಗೊಂಡ ಕೆಸಿಎ
  • ಮಾಜಿ ಪೇಸ್ ಬೌಲರ್ ಮಾಡಿರುವ ತಪ್ಪು ಆದರೂ ಏನು ಗೊತ್ತಾ?

ಟೀಮ್ ಇಂಡಿಯಾದ ಮಾಜಿ ಪೇಸ್ ಬೌಲರ್​ ಎಸ್​ ಶ್ರೀಶಾಂತ್ ಅವರನ್ನು ಕ್ರಿಕೆಟ್​ಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಿಂದ ಕೇರಳ ಕ್ರಿಕೆಟ್ ಅಸೋಷಿಯೇಷನ್ (ಕೆಸಿಎ) ಹೊರಗಿಟ್ಟಿದೆ. ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೆಸಿಎ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.

2025ರ ಚಾಂಪಿಯನ್ ಟ್ರೋಫಿ ವೇಳೆ ಭಾರತ ತಂಡದಿಂದ ಕೇರಳದ ಯುವ ಪ್ಲೇಯರ್​ ಸಂಜು ಸ್ಯಾಮ್ಸನ್​ ಅವರನ್ನು ಹೊರಗಿಡಲಾಗಿತ್ತು. ಈ ಸಂಬಂಧ ಕೆಸಿಎ ವಿರುದ್ಧ ಎಸ್​.ಶ್ರೀಶಾಂತ್ ಅವರು ಸುಳ್ಳು ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ತಿಳಿದು ಬಂದಿತ್ತು. ಇದೇ ಕಾರಣದಿಂದ ಶ್ರೀಶಾಂತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:RCB ಗೆಲುವಿನ ಹಿಂದಿನ ಹೀರೋಗಳು ಯಾರು..? ಕಿಂಗ್​ ಕೊಹ್ಲಿ, ಫಿಲ್ ಸಾಲ್ಟ್​ ಅಲ್ಲವೇ ಅಲ್ಲ!

publive-image

ಕೇರಳ ಕ್ರಿಕೆಟ್​ ಲೀಗ್​ನಲ್ಲಿ ಎಸ್​.ಶ್ರೀಶಾಂತ್ ಅವರು ಅರಿಯಾಸ್​ ಕೊಲ್ಲಂ ಸೈಲಾರ್ಸ್​ ಫ್ರಾಂಚೈಸಿಯ ಸಹ ಮಾಲೀಕತ್ವ ಹೊಂದಿದ್ದಾರೆ. ಶ್ರೀಶಾಂತ್ ಅವರು ನೀಡಿದ ಹೇಳಿಕೆ ಸಂಬಂಧ ಕೆಸಿಎ ಏಪ್ರಿಲ್​ 30 ರಂದು ಸಾಮಾನ್ಯ ಸಭೆಯನ್ನು ಕೈಗೊಂಡಿತ್ತು. ಇದೇ ಸಭೆಯಲ್ಲಿ ಎಸ್​.ಶ್ರೀಶಾಂತ್​ ಅವರನ್ನು 3 ವರ್ಷಗಳ ಕಾಲ ಕೆಸಿಎ ಸಂಬಂಧಿಸಿದ ಕ್ರಿಕೆಟ್​ನ ಎಲ್ಲ ​ ಚಟುವಟಿಕೆಗಳಿಂದ ಹೊರಗಿಡಲಾಗಿದೆ ಎನ್ನುವ ನಿರ್ಣಯ ತೆಗೆದುಕೊಳ್ಳಲಾಗಿದೆ.

ಯುವ ಕ್ರಿಕೆಟರ್​ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥ್, ರೇಜಿ ಲುಕೊಸ್ ಹಾಗೂ ಟ್ವಿಂಟಿ ಫೋರ್ ನ್ಯೂಸ್​ ಚಾನೆಲ್​ ನಿರೂಪಕ ಯಾವುದೇ ಆಧಾರ ಇಲ್ಲದೇ ಕೆಸಿಎ ವಿರುದ್ಧ ಆರೋಪಿಸಿದ್ದಾರೆ. ಹೀಗಾಗಿ ಕಾನೂನು ಕ್ರಮದ ಮೂಲಕ ಪರಿಹಾರ ಕೇಳಲಾಗುತ್ತದೆ ಎಂದು ಕೆಸಿಎ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment