/newsfirstlive-kannada/media/post_attachments/wp-content/uploads/2025/05/kendasampige-kavya1.jpg)
ಇದೇ ಮೊದಲ ಬಾರಿಗೆ ಕಿರುತೆರೆಯಿಂದ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದ್ದಾರೆ ಕೆಂಡಸಂಪಿಗೆ ಸೀರಿಯಲ್ ನಟಿ ಕಾವ್ಯ ಶೈವ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಹಾಗೂ ಅರುಣ್ ಕುಮಾರ್ ಅವರು ನಿರ್ಮಿಸಿರೋ ಪಿಎ ಪ್ರೊಡಕ್ಷನ್ಸ್ ಅಡಿಯಲ್ಲಿ ಹೀರೋಯಿನ್ ಆಗಿ ಲಾಂಚ್ ಆಗಿದ್ದಾರೆ.
ಇದನ್ನೂ ಓದಿ:ಕೆಂಡ ಸಂಪಿಗೆ ಸೀರಿಯಲ್ ನಟಿ ಕಾರ್ಯಕ್ಕೆ ಭಾರೀ ಮೆಚ್ಚುಗೆ; ಅಂಥದ್ದೇನು ಮಾಡಿದ್ರು ಕಾವ್ಯ ಶೈವ?
ಹೌದು, ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಟಾಪ್ ಧಾರಾವಾಹಿ ಕೆಂಡಸಂಪಿಗೆಯಲ್ಲಿ ನಟಿ ಕಾವ್ಯಾ ನಟಿಸಿದ್ದಾರೆ. ಕೆಂಡಸಂಪಿಗೆ ಸೀರಿಯಲ್ ಪರಿಣಿತ ಪ್ರೊಡಕ್ಷನ್ಸ್ನಡಿ ಉದಯ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿತ್ತು. ಈ ಸೀರಿಯಲ್ನಲ್ಲಿ ಸುಮನಾ ಪಾತ್ರದಲ್ಲಿ ಮೂಲಕವೇ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು ನಟಿ ಕಾವ್ಯ ಶೈವ. ಸೀರಿಯಲ್ ಮುಗಿಯುತ್ತಿದ್ದಂತೆ ಡಿಕೆಡಿಯಲ್ಲೂ ಡ್ಯಾನ್ಸ್ ಮಾಡಿ ಸೈ ಎನಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಡಿಕೆಡಿ ವಿನ್ನರ್ ಆಗಿ ಕೂಡ ಹೊರ ಹೊಮ್ಮಿದ್ದರು. ಈಗ ನಟ ಪೃಥ್ವಿ ಅಂಬರ್ ಜೊತೆಗೆ ನಟಿಯಾಗಿ ಕಾವ್ಯಾ ಶೈವ ಅಭಿನಯಿಸುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಹಾಗೂ ತಂದೆಯವರು ಪಿಎ ಪ್ರೊಡಕ್ಷನ್ಸ್ ಶುರು ಮಾಡಿದ್ದಾರೆ. ಆ ಚಿತ್ರಕ್ಕೆ ಕೊತ್ತಲವಾಡಿ ಎಂದು ಹೆಸರನ್ನು ಇಟ್ಟಿದ್ದಾರೆ. ಈಗಾಗಲೇ ನಿನ್ನೆ ಕೊತ್ತಲವಾಡಿ ಸಿನಿಮಾದ ಟೀಸರ್ ಲಾಂಚ್ ಕೂಡ ಮಾಡಲಾಗಿತ್ತು. ಇನ್ನೂ ಇದೇ ವೇಳೆ ತನಗೆ ಸಿಕ್ಕ ಆಫರ್ ಬಗ್ಗೆ ಮಾತಾಡಿದ್ದಾರೆ ನಟಿ ಕಾವ್ಯಾ, ಮೊದಲು ನನಗೆ ಈ ಅವಕಾಶ ಕೊಟ್ಟಿರು ಡೈರೆಕ್ಟರ್ ಸರ್ಗೆ ಥ್ಯಾಂಕ್ಸು.. ಈ ಸಿನಿಮಾ ನಾನು ಮಾಡಬಹುದು ಅಂತ ನನಗೆ ಭರವಸೆ ಇರಲಿಲ್ಲ. ಆದ್ರೆ ಕಥೆ ಬರೆಯುವಾಗ ಒಂದು ಇಮ್ಯಾಜಿನೇಷನ್ನಲ್ಲಿ ಬರೆದಿದ್ದೀನಿ. ಈ ಕ್ಯಾರೆಕ್ಟರ್ಗೆ ಸೂಟ್ ಆಗ್ತೀರಾ ಅಂತ ಅವರು ಹೇಳಿದ್ರು. ಆದ್ರೆ ನಾನು ಮಿಸ್ ಆಗಿ ನನಗೆ ಆಗೋದಿಲ್ಲ ಸರ್ ಅಂತ ಹೇಳಿದ್ದರೇ ನಾನು ಇಲ್ಲಿ ಇರ್ತಾ ಇರಲಿಲ್ಲ ಎಂದರು.
ಇದಾದ ಬಳಿಕ ಯಶ್ ತಾಯಿ ಅವರ ಬಗ್ಗೆ ಮಾತಾಡಿದ ನಟಿ, ಎಲ್ಲರೂ ಹೇಳ್ತಾ ಇದ್ದಾರೆ ಸರ್ಪ್ರೈಸ್ ಅಂತ. ಆ ಸೀಕ್ರೆಟ್ ಹಂಗೆ ಕಾಪಾಡಿಕೊಂಡು ಬಂದಿದ್ದಾರೆ. ಸೆಟ್ನಲ್ಲಿ ಯಾರಿಗೂ ತೊಂದರೆ ಆಗಬಾರದು, ಕೆಲಸ ಆಗಿದ್ದೇ ಗೊತ್ತಾಗಬಾರದು ಅಂತ ಹೇಳಿದ್ರು, ಅದು ಎಷ್ಟು ಬೇಗ ಬೇಗ ಮುಗಿತು ಅಂದ್ರೆ ನಂಬೋಕೆ ಆಗ್ತೀಲ್ಲ ಎಂದರು. ಆಗ ಯಶ್ ಅವರ ತಾಯಿ ನಿರಊಪಕಿ ಅನುಶ್ರೀಗೆ ನೀವು ಅವರಿಗೆ ಕೇಳ್ತಾ ಇದ್ರಿ ಅಲ್ವಾ ಯಾವುದೋ ಸಿನಿಮಾ ಮಾಡ್ತಾ ಇದ್ದೀಯಾ ಅಲ್ವಾ, ನೋಡು ಕಾವ್ಯಾ ಇದೇ ಸಿನಿಮಾ ಮಾಡ್ತಾ ಇದ್ದಾರೆ ಅಂತ ಹೇಳದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ