newsfirstkannada.com

ವೇದಿಕೆ ಮೇಲೆ ರಕ್ಷಕ್ ಬುಲೆಟ್​ಗೆ ಕೌಂಟರ್​ ಕೊಟ್ಟ ಕಿಚ್ಚ ಸುದೀಪ್​; ಏನದು ಗೊತ್ತಾ?​​

Share :

Published January 27, 2024 at 8:40pm

Update January 27, 2024 at 8:41pm

    ಎದುರುಗಡೆ ಇದ್ದರೆ ಸ್ವಲ್ಪ ರೆಸ್ಪೆಕ್ಟ್ ಜಾಸ್ತಿ ಅಣ್ಣ ಎಂದ ರಕ್ಷಕ ಬುಲೆಟ್​

    ಎಲಿಮಿನೇಟ್​ ಆದ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದ ಕಿಚ್ಚ

    ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಯಾರ ಕೈಗೆ ಸೇರಲಿದೆ ಗೊತ್ತಾ?

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​​ ಫಿನಾಲೆ ನಡೆಯುತ್ತಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಗ್ರ್ಯಾಂಡ್​ ವೇದಿಕೆಗೆ ಕಿಚ್ಚ ಸುದೀಪ್​ ಅವರ ಖಡಕ್​ ಎಂಟ್ರಿಯಾಗಿದೆ. ಬಿಗ್​ ವೇದಿಕೆಗೆ ಬರುತ್ತಿದ್ದಂತೆ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದ್ದರು.

 

ಈ ವೇಳೆ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಿದ್ದ ಬಳಿಕ ಹೇಗಿದೆ ನಿಮ್ಮ ರೆಸ್ಪಾನ್ಸ್ ಹೇಗಿತ್ತು ಅಂತಾ ಹೇಳಿದ್ದಾರೆ. ಆಗ ಒಬ್ಬರಾದ ಮೇಲೆ ಒಬ್ಬರು ಅವರಿಗೆ ಆದ ರೆಸ್ಪಾನ್ಸ್ ಬಗ್ಗೆ ಮಾತಾಡುತ್ತಾ ಇರುತ್ತಾರೆ. ಆಗ ರಕ್ಷಕ ಬುಲೆಟ್​ ಸರದಿ ಬಂದ ಕೂಡಲೇ ಹೇಗಿದ್ದೀರಿ ಅಂತಾ ಕೇಳುತ್ತಾರೆ. ಆಗ ರಕ್ಷಕ ಚೆನ್ನಾಗಿದ್ದೀನಿ ಅಣ್ಣ ಅಂತಾ ಹೇಳುತ್ತಾರೆ. ಎಲ್ಲರೂ ನನ್ನನ್ನೂ ಗುರುತಿಸುತ್ತಿದ್ದಾರೆ ಎಂದು ರಕ್ಷಕ ಹೇಳುತ್ತಾರೆ.

 

 

ಆಗ ಕಿಚ್ಚ ಸುದೀಪ್ ಅವರು ಇಂಟರ್ವ್ಯೂನಲ್ಲಿ ಬರೋ ಸೌಂಡ್​ ಇಲ್ಲಿ ಬರುತ್ತಿಲ್ಲ ಏಕೆ ಎಂದು ಕೇಳುತ್ತಾರೆ. ಆಗ ರಕ್ಷಕ ಇಲ್ಲ ಅಣ್ಣ ನಾನು ಎಲ್ಲರಿಗೂ ಗೌರವ ಕೊಡುತ್ತೇನೆ. ಅದಕ್ಕೆ ಕ್ಷಮೆ ಕೂಡ ಕೇಳುತ್ತೇನೆ ಅಂತಾ ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ಅವರು, ಯಾರು ಯಾರ ಕ್ಷಮೆಗೂ ಇಲ್ಲಿ ಕಾಯುವುದಿಲ್ಲ ಅಂತಾ ಹೇಳುತ್ತಾರೆ. ಯಾರು ಯಾರ ಬಗ್ಗೆ ಆದರೂ ಮಾತಾಡುವ ಅಧಿಕಾರ ಇದೆ ಅಂತಾ ಕಿಚ್ಚ ಹೇಳುತ್ತಾರೆ. ಆಗ ರಕ್ಷಕ್​ ಎದುರುಗಡೆ ಇದ್ದರೆ ಸ್ವಲ್ಪ ರೆಸ್ಪೆಕ್ಟ್ ಜಾಸ್ತಿ ಅಣ್ಣ ಅಂತಾ ಹೇಳುತ್ತಾರೆ.

ರಕ್ಷಕ್​ ಬುಲೆಟ್​​ ಹೇಳಿದ್ದೇನು?

ನ್ಯೂಸ್‌ ಫಸ್ಟ್‌ಗೆ ನೀಡಿದ್ದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ರಕ್ಷಕ್ ಬುಲೆಟ್ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟ ಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲೋವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ ಎಂದು ಹೇಳಿಕೆ ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೇದಿಕೆ ಮೇಲೆ ರಕ್ಷಕ್ ಬುಲೆಟ್​ಗೆ ಕೌಂಟರ್​ ಕೊಟ್ಟ ಕಿಚ್ಚ ಸುದೀಪ್​; ಏನದು ಗೊತ್ತಾ?​​

https://newsfirstlive.com/wp-content/uploads/2024/01/bigg-boss-2024-01-27T203604.978.jpg

    ಎದುರುಗಡೆ ಇದ್ದರೆ ಸ್ವಲ್ಪ ರೆಸ್ಪೆಕ್ಟ್ ಜಾಸ್ತಿ ಅಣ್ಣ ಎಂದ ರಕ್ಷಕ ಬುಲೆಟ್​

    ಎಲಿಮಿನೇಟ್​ ಆದ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದ ಕಿಚ್ಚ

    ಬಿಗ್​ಬಾಸ್​ ಸೀಸನ್​ 10ರ ಟ್ರೋಫಿ ಯಾರ ಕೈಗೆ ಸೇರಲಿದೆ ಗೊತ್ತಾ?

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10 ಗ್ರ್ಯಾಂಡ್​​ ಫಿನಾಲೆ ನಡೆಯುತ್ತಿದೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ 6 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಗ್ರ್ಯಾಂಡ್​ ವೇದಿಕೆಗೆ ಕಿಚ್ಚ ಸುದೀಪ್​ ಅವರ ಖಡಕ್​ ಎಂಟ್ರಿಯಾಗಿದೆ. ಬಿಗ್​ ವೇದಿಕೆಗೆ ಬರುತ್ತಿದ್ದಂತೆ ಕಿಚ್ಚ ಸುದೀಪ್​ ಅವರು ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿಗಳ ಜೊತೆ ಮಾತುಕತೆ ನಡೆಸಿದ್ದರು.

 

ಈ ವೇಳೆ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಿದ್ದ ಬಳಿಕ ಹೇಗಿದೆ ನಿಮ್ಮ ರೆಸ್ಪಾನ್ಸ್ ಹೇಗಿತ್ತು ಅಂತಾ ಹೇಳಿದ್ದಾರೆ. ಆಗ ಒಬ್ಬರಾದ ಮೇಲೆ ಒಬ್ಬರು ಅವರಿಗೆ ಆದ ರೆಸ್ಪಾನ್ಸ್ ಬಗ್ಗೆ ಮಾತಾಡುತ್ತಾ ಇರುತ್ತಾರೆ. ಆಗ ರಕ್ಷಕ ಬುಲೆಟ್​ ಸರದಿ ಬಂದ ಕೂಡಲೇ ಹೇಗಿದ್ದೀರಿ ಅಂತಾ ಕೇಳುತ್ತಾರೆ. ಆಗ ರಕ್ಷಕ ಚೆನ್ನಾಗಿದ್ದೀನಿ ಅಣ್ಣ ಅಂತಾ ಹೇಳುತ್ತಾರೆ. ಎಲ್ಲರೂ ನನ್ನನ್ನೂ ಗುರುತಿಸುತ್ತಿದ್ದಾರೆ ಎಂದು ರಕ್ಷಕ ಹೇಳುತ್ತಾರೆ.

 

 

ಆಗ ಕಿಚ್ಚ ಸುದೀಪ್ ಅವರು ಇಂಟರ್ವ್ಯೂನಲ್ಲಿ ಬರೋ ಸೌಂಡ್​ ಇಲ್ಲಿ ಬರುತ್ತಿಲ್ಲ ಏಕೆ ಎಂದು ಕೇಳುತ್ತಾರೆ. ಆಗ ರಕ್ಷಕ ಇಲ್ಲ ಅಣ್ಣ ನಾನು ಎಲ್ಲರಿಗೂ ಗೌರವ ಕೊಡುತ್ತೇನೆ. ಅದಕ್ಕೆ ಕ್ಷಮೆ ಕೂಡ ಕೇಳುತ್ತೇನೆ ಅಂತಾ ಹೇಳುತ್ತಾರೆ. ಆಗ ಕಿಚ್ಚ ಸುದೀಪ್ ಅವರು, ಯಾರು ಯಾರ ಕ್ಷಮೆಗೂ ಇಲ್ಲಿ ಕಾಯುವುದಿಲ್ಲ ಅಂತಾ ಹೇಳುತ್ತಾರೆ. ಯಾರು ಯಾರ ಬಗ್ಗೆ ಆದರೂ ಮಾತಾಡುವ ಅಧಿಕಾರ ಇದೆ ಅಂತಾ ಕಿಚ್ಚ ಹೇಳುತ್ತಾರೆ. ಆಗ ರಕ್ಷಕ್​ ಎದುರುಗಡೆ ಇದ್ದರೆ ಸ್ವಲ್ಪ ರೆಸ್ಪೆಕ್ಟ್ ಜಾಸ್ತಿ ಅಣ್ಣ ಅಂತಾ ಹೇಳುತ್ತಾರೆ.

ರಕ್ಷಕ್​ ಬುಲೆಟ್​​ ಹೇಳಿದ್ದೇನು?

ನ್ಯೂಸ್‌ ಫಸ್ಟ್‌ಗೆ ನೀಡಿದ್ದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ರಕ್ಷಕ್ ಬುಲೆಟ್ ಅವರು ಬಿಗ್‌ಬಾಸ್ ಸ್ಪರ್ಧಿಗಳ ಬಗ್ಗೆ ಮಾತನಾಡಿದ್ದರು. ಬಿಗ್‌ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟ ಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲೋವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ ಎಂದು ಹೇಳಿಕೆ ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More