/newsfirstlive-kannada/media/post_attachments/wp-content/uploads/2025/06/kiccha5.jpg)
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ಬಾಸ್.. ಕಳೆದ 11 ಸೀಸನ್ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿದ್ದಾರೆ ಕಿಚ್ಚ ಸುದೀಪ್. ಆದ್ರೆ ಬಿಗ್ಬಾಸ್ ಸೀಸನ್ 11 ನಡೆಯುತ್ತಿದ್ದಾಗಲೇ ಕಿಚ್ಚ ಸುದೀಪ್ ಅವರು ವಿದಾಯ ಹೇಳಿದ್ದರು. ಇದು ನನ್ನ ಕೊನೆಯ ಶೋ ಅಂತ ಹೇಳಿ ಶಾಕ್ ಕೊಟ್ಟಿದ್ದರು. ಈ ಮಾತು ಅಭಿಮಾನಿಗಳ ಕಿವಿಗೆ ಬಿಳುತ್ತಿದ್ದಂತೆ ತೀವ್ರವಾಗಿ ಬೇಸರಗೊಂಡಿದ್ದರು.
ಅಲ್ಲದೇ ಮುಂದಿನ ಸೀಸನ್ ಕೂಡ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ಬೇಕು, ಇಲ್ಲವಾದರೇ ನಾವು ಬಿಗ್ಬಾಸ್ ನೋಡೋದಿಲ್ಲ ಅಂತ ಅಭಿಮಾನಿಗಳು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಈ ಬಾರಿ ಬಿಗ್ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ ಅನ್ನೋದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಹೋಸ್ಟ್ ಆಗಿ ವಾಪಸ್ ಬರ್ತಾರಾ? ಅಥವಾ ಇಲ್ವಾ ಎಂಬ ಡೌಟ್ ವೀಕ್ಷಕರಿಗೆ ಕಾಡುತ್ತಿತ್ತು.
ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಮಾನಸಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಹಾಸ್ಯನಟ ರಾಘವೇಂದ್ರ.. ಏನದು ನೀವೇ ನೋಡಿ!
ಅಲ್ಲದೇ ವಾಹಿನಿ ಕಡೆಯಿಂದ ಎಷ್ಟೇ ಮನವೊಲಿಸುವ ಪ್ರಯತ್ನ ನಡೆದಿದ್ರೂ ಕಿಚ್ಚ ಒಪ್ಪಿಲ್ಲ ಎಂಬ ಮಾತುಗಳು ಕೆಳಿ ಬಂದಿದ್ದವು. ಇದೀಗ ಕೊನೆಗೂ ಬಿಗ್ಬಾಸ್ ವೀಕ್ಷಕರಿಗೆ ಖುಷಿ ಸುದ್ದಿ ಕೊಟ್ಟಿದೆ ತಂಡ. ಈ ಬಾರಿಯ ಬಿಗ್ಬಾಸ್ ಸೀಸನ್ 12 ನಿರೂಪಣೆ ಸಾರಥ್ಯವನ್ನು ಕಿಚ್ಚ ಸುದೀಪ್ ಅವರೇ ವಹಿಸಿಕೊಳ್ಳುತ್ತಿದ್ದಾರೆ. ಇದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ, ಬಿಗ್ಬಾಸ್ ವೀಕ್ಷಕರಿಗೆ ಖುಷಿ ಕೊಟ್ಟಿದೆ.
ಹೌದು, ಕನ್ನಡ ರಿಯಾಲಿಟಿ ಶೋ ಬಿಗ್ಬಾಸ್ 12 ಸೀಸನ್ ಆರಂಭಕ್ಕೆ ಸಜ್ಜಾಗಿದ್ದು, ಸದ್ಯ ಡೇಟ್ ರಿಲೀಸ್ ಬಗ್ಗೆ ಬಿಗ್ಬಾಸ್ ತಂಡ ಬಿಟ್ಟು ಕೊಟ್ಟಿಲ್ಲ. ಇನ್ನು, ಬಿಗ್ಬಾಸ್ ಹೊಸ ಸೀಸನ್ ಆರಂಭಕ್ಕೆ 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಬಿಗ್ಬಾಸ್ ತಂಡ ನಿನ್ನೆ ಆಯೋಜನೆ ಮಾಡಿದ ಪ್ರೆಸ್ ಮೀಟ್ನಲ್ಲಿ ಮುಂದಿನ ಸೀಸನ್ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದು ಅನೌನ್ಸ್ ಮಾಡಿದೆ.
ಇನ್ನೂ, ಸುದೀಪ್ ಅವರಿಗೆ ಬಿಗ್ಬಾಸ್ ತಂಡದ ಬಗ್ಗೆ ಕೆಲವು ಅಸಮಾಧಾನ ಇದೆಯಾ ಎಂಬ ಅನುಮಾನ ಮೂಡಿತ್ತು. ಆ ಕಾರಣದಿಂದಲೇ ಅವರು ಶೋ ನಿರೂಪಣೆ ಮಾಡಲ್ಲ ಎಂದು ಕಳೆದ ಸೀಸನ್ ಅಂತ್ಯದಲ್ಲಿ ಘೋಷಿಸಿರಬಹುದು ಅಂತ ಪ್ರಶ್ನೆ ಮೂಡಿತ್ತು. ಹೀಗಾಗಿ ಈ ಬಗ್ಗೆ ಮಾತಾಡಿದ ಕಿಚ್ಚ ಸುದೀಪ್, ನಮ್ಮ ಮೂಲ ಕನ್ನಡ. ಕನ್ನಡಕ್ಕೆ ಪ್ರೀತಿ ತೋರಿಸಿ ಸ್ವಲ್ಪ. ವಾಹಿನಿಯಿಂದ ನಮಗೆ ಕೊರತೆ ಬಂದಿಲ್ಲ. ನನಗೆ ಆ ಪ್ರೀತಿ ಕಾಣಿಸುತ್ತಾ ಇರಲಿಲ್ಲ. ನಾನು ಯಾರ ಮೇಲು ಆರೋಪ ಮಾಡುತ್ತಿಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ಬೇರೆ ಭಾಷೆಗಳಲ್ಲೂ ಶೋ ಚೆನ್ನಾಗಿ ನಡೀತಾ ಇದೆ ನಡೀಲಿ. ಆದ್ರೆ, ನನಗೆ ಎಲ್ಲೋ ಒಂದು ಕಡೆ ಬರ್ತಾ ಬರ್ತಾ ಕನ್ನಡದಲ್ಲಿ ಇರುವಂತಹ ವಾಹಿನಿ, ತಂಡದವರು ತೋರುಸುವಂತ ಪ್ರೀತಿ ಮೇಲಿಂದ ಕಾಣಿಸುತ್ತಿರಲಿಲ್ಲ. ಹೀಗಾಗಿ ನಾನು ತುಂಬಾ ತಿದ್ದೋ ವ್ಯಕ್ತಿಯಲ್ಲ. ತಿದ್ದಿಕೊಳ್ಳುವ ವ್ಯಕ್ತಿ. ಅದಕ್ಕೆ ನಾವು ಕೆಲವೊಂದು ಸಾರಿ ನೆನೆಪಿಸಬೇಕಾಗುತ್ತೆ. ಅದಕ್ಕೆ ನಮ್ಮ ಸ್ಪರ್ಧಿಗಳಿಗೂ ಪ್ರೀತಿ ತೋರಿಸಿ, ನನ್ನ ವೇದಿಕೆ ನನ್ನ ಗತ್ತು. ಅದಕ್ಕೆ ಆ ವೇದಿಗೆ ಚೆನ್ನಾಗಿ ಇರಬೇಕು. ನಾವು ಯಾವತ್ತು ಮರೆಯಬಾರದು ರೆಟಿಂಗ್ ಬರ್ತಾ ಇರೋದು ನಮ್ಮ ಜನತೆಯಿಂದ. ಅಲ್ಲದೇ ನಾ ಶೋ ಬಿಡೋದಕ್ಕೂ ನನ್ನ ತಾಯಿ ವಿಚಾರ ಒಂದು ಕಾರಣ. ನಮ್ಮ ತಾಯಿ ಅವರೇ ಇಲ್ಲ ನಾನು ಇದ್ದು ಏನ್ ಮಾಡ್ಲಿ ಅನಿಸಿತು. ಇದಾದ ಬಳಿಕ ನಮ್ಮ ಮನೆಯವರೆಲ್ಲ ಸೇರಿ ನೀವು ಮಾಡಿ ಅಂತ ಹೇಳಿದ್ದು, ಅಭಿಮಾನಿಗಳ ಪ್ರೀತಿ ಮತ್ತೆ ವಾಪಸ್ ಬರುವಂತೆ ಮಾಡಿದೆ ಅಂತ ಹೇಳಿದ್ದಾರೆ.
ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12 ಯಾವಾಗಿನಿಂದ ಪ್ರಸಾರ ಆಗಲಿದೆ ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು ಎಂದು ಕಲರ್ಸ್ ಕನ್ನಡ ತಿಳಿಸಿದೆ. ಯಾವೆಲ್ಲ ಸ್ಪರ್ಧಿಗಳು ಬರುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ