newsfirstkannada.com

ಬಿಗ್​ಬಾಸ್​ ಬಗ್ಗೆ ಗೌರವ ಇಲ್ಲದ ವ್ಯಕ್ತಿಯನ್ನ ಕರೆಸಿದ್ದೇಕೆ?; ವೇದಿಕೆ ಮೇಲೆಯೇ ಸ್ಪರ್ಧಿ ವಿರುದ್ಧ ಸುದೀಪ್ ಕಿಡಿ​​

Share :

Published September 30, 2024 at 6:23am

    ಬಹುನಿರೀಕ್ಷಿತ ಜನಮೆಚ್ಚಿದ ಕನ್ನಡ ಬಿಗ್​​ಬಾಸ್ ರಿಯಾಲಿಟಿ ಶೋ ಶುರು

    ಮೊದಲ ದಿನವೇ ವೇದಿಕೆ ಮೇಲೆ ಸ್ಪರ್ಧಿ ವಿರುದ್ಧ ಕೆಂಡಕಾರಿದ ಸುದೀಪ್​​

    ಬಿಗ್​​ಬಾಸ್​ ಮೇಲೆ ಗೌರವ ಇಲ್ಲದ ಮೇಲೆ ಯಾಕೆ ಬಂದ್ರಿ ಎಂದು ಪ್ರಶ್ನೆ!

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರೋ ಮೂಲಕ ಸುದ್ದಿಯಾಗಿರೋ ಧನರಾಜ್​​​ ಆಚಾರ್​​. ಇವರು ಬಿಗ್​​ಬಾಸ್ ಕನ್ನಡ ಸೀಸನ್ 11ಕ್ಕೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಧನರಾಜ್​​ ಸದಾ ಹೆಂಡತಿ ಜೊತೆ ರೀಲ್ಸ್​ ಮಾಡುತ್ತಾ ಜನರನ್ನು ಎಂಟರ್ಟೈನ್​​ ಮಾಡುತ್ತಾರೆ. ಇವರು ಹೆಚ್ಚು ಆದ್ಯತೆ ನೀಡುವುದು ಕಾಮಿಡಿ ವಿಡಿಯೋಗಳಿಗೆ. ಅದರಲ್ಲೂ ಈ ಹಿಂದೆ ಧನರಾಜ್​​​ ಬಿಗ್​ಬಾಸ್​ ಬಗ್ಗೆಯೇ ಒಂದು ಮಾಡಿದ್ದು, ಈಗ ಕಿಚ್ಚ ಸುದೀಪ್​​ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಡಿಯದಲ್ಲೇನಿದೆ?

ಬಿಗ್ ಬಾಸ್’ ಬಗ್ಗೆ ಧನರಾಜ್ ಮಾಡಿದ ವಿಡಿಯೋದಲ್ಲಿ ಜಗಳ ನಡೆಯೋದು ಟಿಆರ್​ಪಿಗಾಗಿ ಎಂದು ವ್ಯಂಗ್ಯವಾಡಿದ್ದರು. ಧನರಾಜ್​​ ಆಚಾರ್​ ಎಂಟ್ರಿ ಕೊಟ್ಟಾಗ ವೇದಿಕೆ ಮೇಲೆಯೇ ಸುದೀಪ್​​ ಈ ವಿಡಿಯೋ ಪ್ಲೇ ಮಾಡಿಸಿದ್ರು. ಬಳಿಕ ಈ ವಿಚಾರವಾಗಿ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು.

ಕಿಚ್ಚ ಸುದೀಪ್​​ ಕ್ಲಾಸ್​​​​

ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್​ಪಿಗಾ? ಗೌರವ ಇಲ್ಲದ ವ್ಯಕ್ತಿಯನ್ನೇಕೆ ಬಿಗ್​​ಬಾಸ್​ಗೆ ಕರೆಸಿದ್ರಿ ಎಂದು ಸುದೀಪ್​​ ಪ್ರಶ್ನೆ ಮಾಡಿದ್ರು. ಇದಕ್ಕೆ ಧನರಾಜ್​​ ನಾನು ತಮಾಷೆಗಾಗಿ ಈ ವಿಡಿಯೋ ಮಾಡಿದ್ದು ಎಂದರು. ಆಗ ಸುದೀಪ್​​​​ ನಕ್ಕರು. ಬಳಿಕ ಧನರಾಜ್ ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: BBK11: ಗೋಲ್ಡ್​ ಸುರೇಶ್​ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್​; ಚಿನ್ನದ ಸರದಾರ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಬಗ್ಗೆ ಗೌರವ ಇಲ್ಲದ ವ್ಯಕ್ತಿಯನ್ನ ಕರೆಸಿದ್ದೇಕೆ?; ವೇದಿಕೆ ಮೇಲೆಯೇ ಸ್ಪರ್ಧಿ ವಿರುದ್ಧ ಸುದೀಪ್ ಕಿಡಿ​​

https://newsfirstlive.com/wp-content/uploads/2024/09/Sudeep-BiggBoss-Kannada.jpg

    ಬಹುನಿರೀಕ್ಷಿತ ಜನಮೆಚ್ಚಿದ ಕನ್ನಡ ಬಿಗ್​​ಬಾಸ್ ರಿಯಾಲಿಟಿ ಶೋ ಶುರು

    ಮೊದಲ ದಿನವೇ ವೇದಿಕೆ ಮೇಲೆ ಸ್ಪರ್ಧಿ ವಿರುದ್ಧ ಕೆಂಡಕಾರಿದ ಸುದೀಪ್​​

    ಬಿಗ್​​ಬಾಸ್​ ಮೇಲೆ ಗೌರವ ಇಲ್ಲದ ಮೇಲೆ ಯಾಕೆ ಬಂದ್ರಿ ಎಂದು ಪ್ರಶ್ನೆ!

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರೋ ಮೂಲಕ ಸುದ್ದಿಯಾಗಿರೋ ಧನರಾಜ್​​​ ಆಚಾರ್​​. ಇವರು ಬಿಗ್​​ಬಾಸ್ ಕನ್ನಡ ಸೀಸನ್ 11ಕ್ಕೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ಧನರಾಜ್​​ ಸದಾ ಹೆಂಡತಿ ಜೊತೆ ರೀಲ್ಸ್​ ಮಾಡುತ್ತಾ ಜನರನ್ನು ಎಂಟರ್ಟೈನ್​​ ಮಾಡುತ್ತಾರೆ. ಇವರು ಹೆಚ್ಚು ಆದ್ಯತೆ ನೀಡುವುದು ಕಾಮಿಡಿ ವಿಡಿಯೋಗಳಿಗೆ. ಅದರಲ್ಲೂ ಈ ಹಿಂದೆ ಧನರಾಜ್​​​ ಬಿಗ್​ಬಾಸ್​ ಬಗ್ಗೆಯೇ ಒಂದು ಮಾಡಿದ್ದು, ಈಗ ಕಿಚ್ಚ ಸುದೀಪ್​​ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಿಡಿಯದಲ್ಲೇನಿದೆ?

ಬಿಗ್ ಬಾಸ್’ ಬಗ್ಗೆ ಧನರಾಜ್ ಮಾಡಿದ ವಿಡಿಯೋದಲ್ಲಿ ಜಗಳ ನಡೆಯೋದು ಟಿಆರ್​ಪಿಗಾಗಿ ಎಂದು ವ್ಯಂಗ್ಯವಾಡಿದ್ದರು. ಧನರಾಜ್​​ ಆಚಾರ್​ ಎಂಟ್ರಿ ಕೊಟ್ಟಾಗ ವೇದಿಕೆ ಮೇಲೆಯೇ ಸುದೀಪ್​​ ಈ ವಿಡಿಯೋ ಪ್ಲೇ ಮಾಡಿಸಿದ್ರು. ಬಳಿಕ ಈ ವಿಚಾರವಾಗಿ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು.

ಕಿಚ್ಚ ಸುದೀಪ್​​ ಕ್ಲಾಸ್​​​​

ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್​ಪಿಗಾ? ಗೌರವ ಇಲ್ಲದ ವ್ಯಕ್ತಿಯನ್ನೇಕೆ ಬಿಗ್​​ಬಾಸ್​ಗೆ ಕರೆಸಿದ್ರಿ ಎಂದು ಸುದೀಪ್​​ ಪ್ರಶ್ನೆ ಮಾಡಿದ್ರು. ಇದಕ್ಕೆ ಧನರಾಜ್​​ ನಾನು ತಮಾಷೆಗಾಗಿ ಈ ವಿಡಿಯೋ ಮಾಡಿದ್ದು ಎಂದರು. ಆಗ ಸುದೀಪ್​​​​ ನಕ್ಕರು. ಬಳಿಕ ಧನರಾಜ್ ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ: BBK11: ಗೋಲ್ಡ್​ ಸುರೇಶ್​ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್​; ಚಿನ್ನದ ಸರದಾರ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More