/newsfirstlive-kannada/media/post_attachments/wp-content/uploads/2024/10/Jagadish_Sudeep.jpg)
ಬಹುನಿರೀಕ್ಷಿತ ಬಿಗ್ಬಾಸ್ ಕನ್ನಡ ಸೀಸನ್ ಆರಂಭವಾಗಿ ಬರೋಬ್ಬರಿ 1 ವಾರ ಕಳೆದಿದೆ. ಇತ್ತೀಚೆಗೆ ಶನಿವಾರ ನಡೆದ ಕಿಚ್ಚನ ಜೊತೆ ವಾರದ ಕಥೆ ಕಾರ್ಯಕ್ರಮದಲ್ಲಿ ಲಾಯರ್ ಜಗದೀಶ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳಲಾಗಿದೆ. ಇಡೀ ವಾರ ಬಿಗ್ಬಾಸ್ ಮನೆಯಲ್ಲಿ ಕಿರುಚಾಡಿದ್ದ ಲಾಯರ್ ಜಗದೀಶ್ ಅವರ ಕುರಿತು ಕಿಚ್ಚ ಸುದೀಪ್ ಇಂಚಿಂಚೂ ಮಾಹಿತಿ ಪಡೆದರು.
ಇಷ್ಟೇ ಅಲ್ಲ ಎಲ್ಲಾ ಮಾಹಿತಿ ಪಡೆದ ಮೇಲೆ ಅವರದ್ದೇ ಶೈಲಿಯಲ್ಲಿ ಬಿಗ್ಬಾಸ್ ಕುರಿತು ಜದೀಶ್ ಅವರಿಗೆ ಕಿಚ್ಚ ಸುದೀಪ್ ಅವರು ಅರ್ಥ ಮಾಡಿಸಿದ್ರು. ಈ ಸಂದರ್ಭದಲ್ಲಿ ನಾನು ಬೇಕಂತಲೇ ಹಾಗೇ ಮಾಡಿದ್ದು. ಎಲ್ಲರೂ ಮುಖವಾಡ ಹಾಕಿಕೊಂಡು ಗೇಮ್ ಆಡುತ್ತಿದ್ದಾರೆ. ನನಗೆ ಇದೆಲ್ಲೋ ಸ್ಕ್ರಿಪ್ಟೆಡ್ ಅಂದು ಅನಿಸಿದ್ದು ನಿಜ. ಹಾಗಾಗಿ ಹೀಗೆ ಮಾತಾಡಿದ್ದೆ ಕ್ಷಮಿಸಿ ಎಂದು ಜಗದೀಶ್ ತಪ್ಪೊಪ್ಪಿಕೊಂಡರು.
ಮನೆಯಲ್ಲಿ ಒಂದು ವಾರ ಬಿಗ್ಬಾಸ್ ರೂಲ್ಸ್ ವೈಲೇಟ್ ಮಾಡಿದ್ದರ ಜತೆಗೆ ಕೆಟ್ಟ ಪದ ಬಳಸಿದ ಬಗ್ಗೆ ಕೂಡ ಲಾಯರ್ ಜಗದೀಶ್ ಅವರಿಗೆ ಸುದೀಪ್ ಚೆನ್ನಾಗಿ ಕ್ಲಾಸ್ ತೆಗೆದುಕೊಂಡರು.
ಸುದೀಪ್ ಏನಂದ್ರು?
ನಾನು ಕಾನೂನು ಗೌರವಿಸುತ್ತೇನೆ. ದೇಶದ ಕಾನೂನು ಪಾಲಿಸುತ್ತೇನೆ. ಮುಂದೆ ಸಿಎಂ ಆಗಬೇಕು ಎನ್ನುತ್ತೀರಿ. ಬಿಗ್ಬಾಸ್ ನಿಯಮ ಏಕೆ ಉಲ್ಲಂಘಿಸುತ್ತೀರಿ. ಅದು ಕೂಡ ಒಂದು ಕಾನೂನು. ನೀವು ಅದು ಫಾಲೋ ಮಾಡಬೇಕು ಎಂದರು ಸುದೀಪ್.
ಲವ್ಯೂ ಜಗದೀಶ್ ಸಾರ್ ಎಂದ ಸುದೀಪ್.
ಕ್ಲಾಸ್ ತೆಗೆದುಕೊಂಡ ಬಳಿಕ ಕೊನೆಗೆ ನಿಮ್ಮನ್ನು ಕಂಡ್ರೆ ಇಡೀ ಮನೆಗೆ ಗೌರವ ಇದೆ. ನನಗೆ ನಿಮ್ಮ ಮೇಲೆ ಅಷ್ಟೇ ಪ್ರೀತಿ ಗೌರವ ಇದೆ. ವಿ ಲವ್ಯೂ ಸಾರ್ ಎಂದು ಜಗದೀಶ್ ಅವರಿಗೆ ಕಿಚ್ಚ ಸುದೀಪ್ ಕೊನೆಗೆ ಹೇಳಿದ್ರು. ಹಾರ್ಟ್ ತೋರಿಸಿ ಲವ್ಯೂ ಎಂದಿದ್ದ ಸುದೀಪ್ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್; ಸ್ವರ್ಗದಲ್ಲಿ ಇರೋ ಜಗದೀಶ್ ನೇರವಾಗಿ ನರಕಕ್ಕೆ ಎಂಟ್ರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ