Advertisment

ರೇಣುಕಾಸ್ವಾಮಿ ಕಿಡ್ನಾಪ್ ವೇಳೆಯೂ ಫೋಟೋ ಕ್ಲಿಕ್ಕಿಸಿದ್ದ ಕಿಡ್ನಾಪರ್ಸ್​; ಕೊನೆ ಕ್ಷಣದ ಫೋಟೋ

author-image
AS Harshith
Updated On
ರೇಣುಕಾಸ್ವಾಮಿ ಕಿಡ್ನಾಪ್ ವೇಳೆಯೂ ಫೋಟೋ ಕ್ಲಿಕ್ಕಿಸಿದ್ದ ಕಿಡ್ನಾಪರ್ಸ್​; ಕೊನೆ ಕ್ಷಣದ ಫೋಟೋ
Advertisment
  • ಜೂನ್​ 7 ರಂದು ಕಿಡ್ನಾಪ್​ ಆಗಿದ್ದ ರೇಣುಕಾಸ್ವಾಮಿ
  • ರೇಣುಕಾಸ್ವಾಮಿಗಳು ಹಿಂಬಾಲಿಸುತ್ತಿದ್ದ ಕಿರಾತಕರು
  • ರೇಣುಕಾಸ್ವಾಮಿ ಮತ್ತೊಂದು ಫೋಟೋ ವೈರಲ್​

ಚಿತ್ರದುರ್ಗ: ರೇಣುಕಾಸ್ವಾಮಿಯ ಮತ್ತೊಂದು ಫೋಟೋ ಇದೀಗ ವೈರಲ್​ ಆಗಿದೆ. ಆರೋಪಿಗಳು ಕೊಲೆಗೂ ಮುನ್ನ ರೇಣುಕಾಸ್ವಾಮಿ ಚಲನವಲನಗಳನ್ನು ಹಿಂಬಾಲಿಸಿ ತೆಗೆದಿದ್ದ ಫೋಟೋ ಇದೀಗ ನ್ಯೂಸ್​​ಫಸ್ಟ್​ ಸಿಕ್ಕಿದೆ.

Advertisment

ರೇಣುಕಾಸ್ವಾಮಿ ಕಿಡ್ನಾಪ್ ದಿನ ತನ್ನ ಸ್ಕೂಟಿಗೆ ಗಾಳಿ ಹಿಡಿಸಿದ್ದನು. KEB ಕಲ್ಯಾಣ ಮಂಟಪ ರಸ್ತೆಯಲ್ಲಿನ ಪಂಕ್ಷರ್ ಶಾಪ್​ನಲ್ಲಿ ಗಾಳಿ ಹಿಡಿಸಿದ್ದನು. ಗಾಳಿ ಹಿಡಿಸಿದ್ದನ್ನ ಕಿಡ್ನಾಪರ್ಸ್ ಆಟೋದಲ್ಲಿ ಕುಳಿತು ಫೋಟೋ ತೆಗೆದಿದ್ದರು. ಇದೀಗ ರೇಣುಕಾಸ್ವಾಮಿಯ ಫೋಟೋ ವೈರಲ್ ಆಗಿದೆ.​

ಇದನ್ನೂ ಓದಿ: ಗೌರಿ ಹಬ್ಬದ ದಿನ ಭೀಕರ ದುರಂತ.. ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 13 ಮಂದಿ ಸಾವು

ಇತ್ತ ಫೋಟೋ ವೈರಲ್​ ಆದಂತೆ ಪಂಕ್ಷರ್ ಶಾಪ್​​ನ ಮಾಲೀಕ ವಜೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪ್ರತಿ ನಿತ್ಯದಂತೆ ಕೆಲಸ ಮಾಡುತ್ತಿದ್ದೆ, ಫೋಟೋ ತೆಗೆದಿದ್ದು ಗೊತ್ತಿಲ್ಲ. ನಾನು ಕೂಡಾ ಅವರು ಫೋಟೋ ತೆಗೆದಿದ್ದು ಗಮನಸಿಲ್ಲ. ನನಗೆ ರೇಣುಕಾಸ್ವಾಮಿ ಪರಿಚಯ ಇಲ್ಲ, ಬಂದು ಕೆಲಸ ಮಾಡಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

Advertisment

publive-image

ಇದನ್ನೂ ಓದಿ: ಮಂಕಾದ ದರ್ಶನ್, ಸಹೋದರ ದಿನಕರ ಎದುರು ಬೇಸರ.. ತೋಡಿಕೊಂಡ ಅಳಲು ಏನು?

ಬಳಿಕ ಮಾತನಾಡಿದ ವಜೀರ್ ಖಾನ್, ಈ ಮೊದಲು ನಾನು ನೋಡಿದ್ರೆ ಅವರನ್ನ ಗುರುತು ಹಿಡಿಯುತ್ತಿದ್ದೆ‌. ಆ ಸ್ಕೂಟಿಗೆ ಗಾಳಿ ಹಿಡಿದಿದ್ದು ನಾನೇ. ಅವರು ಬಂದು ಗಾಳಿ ಹಿಡಿಸಿದ್ದಾರೆ. ಈ ಫೋಟೋ ನೋಡಿದಾಗ ನನಗೆ ಗೊತ್ತಾಯ್ತು, ಮುಂಚೆ ನಾನು ನೋಡಿಲ್ಲ. ಘಟನೆ ನಡೆದ ಬಳಿಕವೇ ನನಗೆ ಈ ಮಾಹಿತಿ ತಿಳಿದು ಬಂದಿದ್ದು. ಈ ಹಿಂದೆ ಯಾವತ್ತೂ ಕೂಡಾ ನಾನು ನೋಡಿಲ್ಲ, ಘಟನೆ ಬಳಿಕ ಗೊತ್ತಾಯ್ತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment