newsfirstkannada.com

ಅನ್ಯಕೋಮಿನ ಯುವಕನಿಂದ ಅತಿಥಿ ಶಿಕ್ಷಕಿ ಕಿಡ್ನ್ಯಾಪ್ ಆರೋಪ; ಹುಬ್ಬಳ್ಳಿಯಲ್ಲಿ ದೂರು ದಾಖಲು

Share :

Published April 23, 2024 at 1:37pm

    ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೋದ ಯುವತಿ ವಾಪಸ್ಸಾಗಿಲ್ಲ

    ಗ್ರಾಮದ ಮಠದ ಹತ್ತಿರದಿಂದ ಯುವತಿಯನ್ನು ಕಿಡ್ನಾಪ್ ಮಾಡಿದ ದೂರು

    ಮಗಳನ್ನು ಎಲ್ಲಿ ಇದ್ದಳೋ ಎಂದು ಆತಂಕದಲ್ಲಿರುವ ಕುಟುಂಬಸ್ಥರು

ಹುಬ್ಬಳ್ಳಿ‌: ಯುವಕನೊಬ್ಬ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ ಎಂದು ತಂದೆ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ತಂದೆ ಮನವಿ ಮಾಡಿದ್ದಾರೆ.

ತಾಲೂಕಿನ ಕಳಸ ಗ್ರಾಮದ ಅಕ್ಷತಾ ಕಳಸೂರು ಎನ್ನುವರು ಅಪಹರಣಕ್ಕೆ ಒಳಗಾದವರು. ಇವರು ವೃತ್ತಿಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಹಾವೇರಿಯ ಆಲದಕಟ್ಟಿ ಗ್ರಾಮದ ಸುಬಾನಿ ಮಾಬುಸಾಬ ದೊಡ್ಡಮನಿ ಎಂಬ ಯುವಕ ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: 2 ಹೆಲಿಕಾಪ್ಟರ್ ನಡುವೆ ಭಯಾನಕ ಡಿಕ್ಕಿ.. ಆಗಸದಲ್ಲೇ ಉಸಿರು ಚೆಲ್ಲಿದ 10 ಸಿಬ್ಬಂದಿ

ಇದನ್ನೂ ಓದಿ: ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸ್ತಿರೋ SRH.. ಸೂಪರ್​ ಪವರ್​ ಬ್ಯಾಟಿಂಗ್​​ನ ಸಿಕ್ರೇಟ್​ ಏನು?

ಕಳಸ ಗ್ರಾಮದ ಅಖಂಡೇಶ್ವರ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಯುವತಿ ಮನೆಯಿಂದ ಹೊರ ಹೋಗಿದ್ದಳು. ಆದರೆ ಏಪ್ರಿಲ್ 18 ರಂದು ಯಾವುದೋ ದುರುದ್ದೇಶದಿಂದ ಗ್ರಾಮದ ಮಠದ ಹತ್ತಿರದಿಂದ ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಸುಬಾನಿ ಹೋಗಿದ್ದಾನೆಂದು ಪ್ರಕರಣದಲ್ಲಿ ಉಲ್ಲೇಖ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ಯಕೋಮಿನ ಯುವಕನಿಂದ ಅತಿಥಿ ಶಿಕ್ಷಕಿ ಕಿಡ್ನ್ಯಾಪ್ ಆರೋಪ; ಹುಬ್ಬಳ್ಳಿಯಲ್ಲಿ ದೂರು ದಾಖಲು

https://newsfirstlive.com/wp-content/uploads/2024/04/HBL_GIRL_KIDNAP_NEW.jpg

    ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಹೋದ ಯುವತಿ ವಾಪಸ್ಸಾಗಿಲ್ಲ

    ಗ್ರಾಮದ ಮಠದ ಹತ್ತಿರದಿಂದ ಯುವತಿಯನ್ನು ಕಿಡ್ನಾಪ್ ಮಾಡಿದ ದೂರು

    ಮಗಳನ್ನು ಎಲ್ಲಿ ಇದ್ದಳೋ ಎಂದು ಆತಂಕದಲ್ಲಿರುವ ಕುಟುಂಬಸ್ಥರು

ಹುಬ್ಬಳ್ಳಿ‌: ಯುವಕನೊಬ್ಬ ಮಗಳನ್ನು ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ ಎಂದು ತಂದೆ ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗಳನ್ನು ಪತ್ತೆ ಮಾಡಿಕೊಡುವಂತೆ ಪೊಲೀಸರಿಗೆ ತಂದೆ ಮನವಿ ಮಾಡಿದ್ದಾರೆ.

ತಾಲೂಕಿನ ಕಳಸ ಗ್ರಾಮದ ಅಕ್ಷತಾ ಕಳಸೂರು ಎನ್ನುವರು ಅಪಹರಣಕ್ಕೆ ಒಳಗಾದವರು. ಇವರು ವೃತ್ತಿಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಹಾವೇರಿಯ ಆಲದಕಟ್ಟಿ ಗ್ರಾಮದ ಸುಬಾನಿ ಮಾಬುಸಾಬ ದೊಡ್ಡಮನಿ ಎಂಬ ಯುವಕ ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: 2 ಹೆಲಿಕಾಪ್ಟರ್ ನಡುವೆ ಭಯಾನಕ ಡಿಕ್ಕಿ.. ಆಗಸದಲ್ಲೇ ಉಸಿರು ಚೆಲ್ಲಿದ 10 ಸಿಬ್ಬಂದಿ

ಇದನ್ನೂ ಓದಿ: ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸ್ತಿರೋ SRH.. ಸೂಪರ್​ ಪವರ್​ ಬ್ಯಾಟಿಂಗ್​​ನ ಸಿಕ್ರೇಟ್​ ಏನು?

ಕಳಸ ಗ್ರಾಮದ ಅಖಂಡೇಶ್ವರ ಜಾತ್ರೆಗೆ ಹೋಗಿ ಬರುತ್ತೇನೆ ಎಂದು ಯುವತಿ ಮನೆಯಿಂದ ಹೊರ ಹೋಗಿದ್ದಳು. ಆದರೆ ಏಪ್ರಿಲ್ 18 ರಂದು ಯಾವುದೋ ದುರುದ್ದೇಶದಿಂದ ಗ್ರಾಮದ ಮಠದ ಹತ್ತಿರದಿಂದ ಯುವತಿಯನ್ನು ಕಿಡ್ನಾಪ್ ಮಾಡಿಕೊಂಡು ಸುಬಾನಿ ಹೋಗಿದ್ದಾನೆಂದು ಪ್ರಕರಣದಲ್ಲಿ ಉಲ್ಲೇಖ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More