ಕಾಂತಾರ ಸ್ಟೈಲ್​​ನಲ್ಲೇ KL ರಾಹುಲ್​​ರ ಕಾಲೆಳೆದ ಕೊಹ್ಲಿ.. ಹೃದಯ ಗೆದ್ದ ಇಬ್ಬರ ಆತ್ಮೀಯತೆ.. VIDEO

author-image
Ganesh
Updated On
ಕಾಂತಾರ ಸ್ಟೈಲ್​​ನಲ್ಲೇ KL ರಾಹುಲ್​​ರ ಕಾಲೆಳೆದ ಕೊಹ್ಲಿ.. ಹೃದಯ ಗೆದ್ದ ಇಬ್ಬರ ಆತ್ಮೀಯತೆ.. VIDEO
Advertisment
  • ಚಿನ್ನಸ್ವಾಮಿಯಲ್ಲಿ ಕಾಂತಾರ ಸ್ಟೈಲ್​ನಲ್ಲಿ ರಾಹುಲ್ ಸೆಲೆಬ್ರೇಷನ್
  • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುತ್ತಿದ್ದಂತೆಯೇ ಕೊಹ್ಲಿ ಏನ್ಮಾಡಿದ್ರು..?
  • ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆರ್​ಸಿಬಿಗೆ 6 ವಿಕೆಟ್​ಗಳ ಭರ್ಜರಿ ಗೆಲುವು

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಅನ್ನು 6 ವಿಕೆಟ್​ಗಳಿಂದ ಸೋಲಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.

ಈ ಗೆಲುವಿನ ಬೆನ್ನಲ್ಲೇ ಡೆಲ್ಲಿ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಕೊಹ್ಲಿ ಆಡ್ಕೊಂಡಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆ.ಎಲ್​.ರಾಹುಲ್, ಅದ್ಭುತವಾಗಿ ಆಡಿದ್ದರು. ಕೊನೆಯವರೆಗೂ ಕ್ರೀಸ್​ನಲ್ಲಿದ್ದ ರಾಹುಲ್, ಗೆದ್ದ ಬಳಿಕ ಕಾಂತಾರ ಸ್ಟೈಲ್​​ನಲ್ಲಿ ಸೆಲೆಬ್ರೇಷನ್ ಮಾಡಿದ್ದರು. ಇದು ನನ್ನ ಮೈದಾನ, ನನ್ನ ತವರು, ನನಗಾಗಿ ಬಂದಿರುವ ಕರ್ನಾಟಕದ ಅಭಿಮಾನಿಗಳು ನನ್ನ ಹೃದಯದಲ್ಲಿದ್ದೀರಿ ಎಂದು ರಾಹುಲ್ ಹೇಳಿದ್ದರು.

ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಸಿಡಿಲಬ್ಬರದ ಅರ್ಧಶತಕ​.. ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ RCB, ಟಾಪ್​ಗೆ ಹೋದ ಬೆಂಗಳೂರು

publive-image

ಅರುಣ್ ಜೇಟ್ಲಿ ಮೈದಾನ, ವಿರಾಟ್ ಕೊಹ್ಲಿ ಅವರ ಹೋಂ ಗ್ರೌಂಡ್. ಅಲ್ಲದೇ, ಮೈದಾನದ ಪೆವಿಲಿಯನ್​ಗೆ ಕೊಹ್ಲಿಯ ಹೆಸರು ಕೂಡ ಇದೆ. ಅಂತೆಯೇ ನಿನ್ನೆಯ ಪಂದ್ಯಕ್ಕೂ ಮೊದಲು ಕೊಹ್ಲಿ, ಕೆ.ಎಲ್.ರಾಹುಲ್ ಅವರ ಕಾಂತಾರ ಸ್ಟೈಲ್​ಗೆ ಉತ್ತರ ನೀಡುತ್ತಾರೆ ಅಂತಲೇ ಚರ್ಚೆ ಆಗಿತ್ತು. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಇನ್ನೇನು ತಂಡ ಗೆಲ್ಲುತ್ತೆ ಅನ್ನುವಷ್ಟರಲ್ಲಿ 51 ರನ್​ಗಳಿಸಿ ಔಟ್ ಆದರು. ಕೊನೆಗೂ ಆರ್​ಸಿಬಿ ಗೆದ್ದು ಬೀಗಿತು. ಬಳಿಕ ಕೊಹ್ಲಿ ಪೆವಿಲಿಯನ್​ನಲ್ಲಿ ಜೋರಾಗಿ ಸಂಭ್ರಮಿಸಿದ್ದರು.

ಇದನ್ನೂ ಓದಿ: RCBಗೆ ಆರಂಭಿಕ ಬ್ಯಾಟಿಂಗ್​ ವಿಘ್ನ.. ಯಂಗ್​ ಬ್ಯಾಟರ್ ಬೆನ್ನಲ್ಲೇ ಕನ್ನಡಿಗ, ಕ್ಯಾಪ್ಟನ್​ ಬ್ಯಾಕ್​ ಟು ಬ್ಯಾಕ್​​ ಔಟ್​

publive-image

ರಾಹುಲ್-ಕೊಹ್ಲಿ ಮುಖಾಮುಖಿ

ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಮತ್ತೆ ಮುಖಾಮುಖಿ ಆದರು. ಕೆ.ಎಲ್.ರಾಹುಲ್, ಕನ್ನಡಿಗರಾದ ದೇವದತ್ತ ಪಡಿಕ್ಕಲ್, ಕರುಣ್ ನಾಯರ್​ ಜೊತೆ ನಿಂತು ಮಾತನಾಡುತ್ತಿದ್ದರು. ಅಲ್ಲಿಗೆ ಆಗಮಿಸಿದ ವಿರಾಟ್, ರಾಹುಲ್ ಅಂದು ಮಾಡಿದ್ದ ಕಾಂತಾರ ಸ್ಟೈಲ್​ನ ಸೆಲೆಬ್ರೇಷನ್ ಮಾಡಿ ತಮಾಷೆ ಮಾಡಿದರು. ಅದಕ್ಕೆ ಕೆ.ಎಲ್.ರಾಹುಲ್, ಅದು ಅಲ್ಲಿ ಅನ್ನೋ ರೀತಿಯಲ್ಲಿ ಕೈತೋರಿಸಿ ನಕ್ಕರು. ಆಗ ಕೊಹ್ಲಿ ಜೋರಾಗಿ ನಕ್ಕು ರಾಹುಲ್​ರನ್ನು ಆತ್ಮೀಯವಾಗಿ ತಬ್ಬಿಕೊಂಡರು. ಕೊಹ್ಲಿ ಮತ್ತು ರಾಹುಲ್ ನಡುವಿನ ಆತ್ಮೀಯ ಸಂಭಾಷಣೆ ಎಲ್ಲರ ಮನಗೆದ್ದಿದೆ.

ಇದನ್ನೂ ಓದಿ: ಎಲ್ಲರ ಕಣ್ಣಲ್ಲೂ ನೀರು ತರಿಸಿದ ಸುನಿಲ್ ಹಾಡು.. ಅಪ್ಪನ ನೆನೆದು ಕಣ್ಣೀರಿಟ್ಟ ಗಾಯಕ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment