/newsfirstlive-kannada/media/post_attachments/wp-content/uploads/2025/05/karna7.jpg)
ಅಂದುಕೊಂಡಂತೆ ಜೂನ್ 16ರಂದು ಕರ್ಣ ಧಾರಾವಾಹಿ ಪ್ರಸಾರ ಕಂಡಿದ್ದರೇ ಇಂದಿಗೆ 17 ದಿನಗಳು ಕಳೆಯುತ್ತಿದ್ದವು. ಅಂದು ಅಭಿಮಾನಿಗಳು ಅಂದುಕೊಂಡಂತೆ ಸೀರಿಯಲ್ ಪ್ರಸಾರ ಕಂಡಿರಲಿಲ್ಲ.
View this post on Instagram
ಆದ್ರೆ ಇದೀಗ ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ನಾಳೆಯಿಂದಲೇ ಕರ್ಣ! ಬರ್ತಿದ್ದಾನೆ. ಹೌದು, ಬರೋಬ್ಬರಿ ಎರಡು ವರ್ಷಗಳ ನಂತರ ನಟ ಕಿರಣ್ ರಾಜ್ ಅವರನ್ನು0 ಕಣ್ತುಂಬಿಕೊಳ್ಳಬೇಕು ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ, ಕೆಲವು ಕಾರಣಾಂತರಗಳಿಂದ ಕರ್ಣ ಸೀರಿಯಲ್ ಜೂನ್ 16ರಂದು ಪ್ರಸಾರ ಕಂಡಿರಲಿಲ್ಲ. ಹೀಗಾಗಿ ವೀಕ್ಷಕರು ಹಾಗೂ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು.
ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?
ಇದೀಗ ಕೊಟ್ಟ ಮಾತಿನಂತೆ ಕರ್ಣ ಬರ್ತಿದ್ದಾನೆ. ಅಂದ್ರೆ ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ ಕರ್ಣ ಸೀರಿಯಲ್ ಪ್ರಸಾರವಾಗಲಿದೆ. ಈ ಬಗ್ಗೆ ಖುದ್ದು ಜೀ ಕನ್ನಡ ತನ್ನ ಅಫೀಷಿಯಲ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ದಿಢೀರ್ ಅಂತ ಕರ್ಣ ಡೇಟ್ ಮುಂದೂಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದರು. ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು ಕಿರಣ್ ರಾಜ್. ಅದೇ ರೀತಿ ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ಗೌಡ ಅವರು ಕೂಡ ಕ್ಷಮೆ ಕೇಳಿದ್ದರು. ಆದಷ್ಟು ಬೇಗ ನಿಮ್ಮ ಮುಂದೆ ಬಂದೇ ಬರ್ತಿವಿ ಅಂತ ಕೂಡ ಭರವಸೆ ಕೊಟ್ಟಿದ್ದರು. ಜೊತೆಗೆ ನಿಧಿ ಪಾತ್ರ ಮಾಡ್ತಿರೋ ಭವ್ಯಾ ಗೌಡ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದರು. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಆಗೋದಲ್ಲ ಒಳ್ಳೆಯದಕ್ಕೆ ಎಂಬ ಅರ್ಥದಲ್ಲಿ ಟ್ರಸ್ಟ್ ದಿ ಪ್ರೋಸಸ್ ಎಂದು ಬರೆದುಕೊಂಡಿದ್ದರು.
ಸದ್ಯ ಕೊಟ್ಟ ಮಾತಿನಂತೆ ನಾಳೆಯಿಂದ ಜೀ ಕನ್ನಡದಲ್ಲಿ ರಾತ್ರಿ 8.00 ಗಂಟೆಗೆ ಕರ್ಣ ಸೀರಿಯಲ್ ಪ್ರಸಾರವಾಗಲಿದೆ. ಇನ್ನೂ, ಈ ಹಿಂದೆ ಕರ್ಣ ಸೀರಿಯಲ್ ತಂಡಕ್ಕೆ ಕಾನೂನು ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ವಾಹಿನಿ ಸ್ಪಷ್ಟ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಇಂಟರ್ನಲ್ ಸಮಸ್ಸೆ ಆಗಿದ್ದರಿಂದ ವೀಕ್ಷಕರ ಮುಂದೆ ಬರೋದಕ್ಕೆ ತಡವಾಗಿತ್ತು. ಈಗ ಎಲ್ಲಾ ಸವಾಲುಗಳನ್ನ ಮೀರಿ ಕರ್ಣ ಧಾರಾವಾಹಿ ನಾಳೆ ಪ್ರಸಾರ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ