ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್
  • ಹರಾಜಿಗೆ ಮುನ್ನ ಆರ್​​ಸಿಬಿ ಹೊಸ ರೀಟೈನ್​​ ಲಿಸ್ಟ್​ ಔಟ್!
  • ಐಪಿಎಲ್​​ ವಿನ್ನಿಂಗ್​ ಕ್ಯಾಪ್ಟನ್​ಗೆ ಆರ್​​ಸಿಬಿ ಬಿಗ್​ ಆಫರ್​​​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಹೇಗಾದ್ರೂ ಮಾಡಿ ಈ ಬಾರಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಜಿದ್ದಿಗೆ ಬಿದ್ದಿದೆ. ಈಗಾಗಲೇ ಎಲ್ಲಾ ಐಪಿಎಲ್​ ತಂಡಗಳಿಗೂ 6 ಆಟಗಾರರ ರೀಟೈನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ನೀಡಿದೆ.

ಇನ್ನು, ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ವಿರಾಟ್​ ಕೊಹ್ಲಿ ಅವರನ್ನು ಮೊದಲು ರೀಟೈನ್​ ಮಾಡಿಕೊಳ್ಳಲಿದೆ. ಆರ್​​​ಸಿಬಿ ತಂಡ ರೀಟೈನ್​​ ಮಾಡಿಕೊಳ್ಳೋ 2ನೇ ಪ್ಲೇಯರ್​​​​ ಫಾಫ್​​ ಡುಪ್ಲೆಸಿಸ್​​​. ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಸೇಂಟ್​​ ಲೂಯಿಸ್ ಕಿಂಗ್ಸ್ ತಂಡವನ್ನು ಚಾಂಪಿಯನ್​ ಮಾಡಿದ ಕಾರಣಕ್ಕೆ ಫಾಫ್​ ಅವರನ್ನು ಉಳಿಸಿಕೊಳ್ಳಲಾಗುತ್ತಿದೆ. ಜತೆಗೆ ಮೊಹಮ್ಮದ್​ ಸಿರಾಜ್​ ಹೆಸರು ಕೂಡ ಆರ್​​ಸಿಬಿ ರೀಟೈನ್​ ಲಿಸ್ಟ್​​ನಲ್ಲಿದೆ.

publive-image

ಶ್ರೇಯಸ್​ ಅಯ್ಯರ್​​ ಮೇಲೆ ಆರ್​​ಸಿಬಿ ಕಣ್ಣು

ವರ್ಷದ ಕೊನೆಗೆ ನಡೆಯಲಿರೋ ಮೆಗಾ ಹರಾಜಿನಲ್ಲಿ ಐಪಿಎಲ್​ ವಿನ್ನಿಂಗ್​ ಕ್ಯಾಪ್ಟನ್​ ಮೇಲೆ ಆರ್​​ಸಿಬಿ ಕಣ್ಣಿಟ್ಟಿದೆ. ಹೇಗಾದ್ರೂ ಸರಿ ಕೆಕೆಆರ್​ ತಂಡದ ಕ್ಯಾಪ್ಟನ್​​ ಶ್ರೇಯಸ್​ ಅಯ್ಯರ್​​ ಹರಾಜಿಗೆ ಬಂದ್ರೆ ಖರೀದಿ ಮಾಡಲೇಬೇಕು ಎನ್ನುವುದು ಆರ್​​ಸಿಬಿ ಪ್ಲಾನ್​​. ಇದಕ್ಕಾಗಿ ಎಷ್ಟು ಕೋಟಿ ಬೇಕಾದ್ರೂ ಸುರಿಯಲು ಆರ್​​ಸಿಬಿ ಸಜ್ಜಾಗಿದೆ. ಇದಕ್ಕೆ ಕಾರಣ ಆರ್​​ಸಿಬಿ ತಂಡಕ್ಕೆ ಮುಂದಿನ ಸೀಸನ್​ನಿಂದಲೇ ಒಳ್ಳೆಯ ಕ್ಯಾಪ್ಟನ್​ ಬೇಕಿರುವುದು.

ಕೆಕೆಆರ್​ ತಂಡದಿಂದ ಶ್ರೇಯಸ್​ ಅಯ್ಯರ್​ ಔಟ್​​

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಟ್ರೋಫಿ ವಿನ್ನಿಂಗ್​ ಕ್ಯಾಪ್ಟನ್​​ ಶ್ರೇಯಸ್​​. ಗಂಭೀರ್​​ ಮಾರ್ಗದರ್ಶನದಲ್ಲಿ ಶ್ರೇಯಸ್​ ಅಯ್ಯರ್​ ಕ್ಯಾಪ್ಟನ್ಸಿಯಲ್ಲೇ ಕೆಕೆಆರ್​ ತಂಡ ಐಪಿಎಲ್​ ಕಪ್​ ಗೆದ್ದಿದ್ದು. ಈ ತಂಡಕ್ಕೆ ಕ್ಯಾಪ್ಟನ್​ ಆಗಿ ಸೂರ್ಯಕುಮಾರ್​ ಯಾದವ್​ ಎಂಟ್ರಿ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಹಾಗಾಗಿ ಶ್ರೇಯಸ್​ ಅಯ್ಯರ್​​ ಕೆಕೆಆರ್​ ತಂಡದಿಂದ ಹೊರ ಬೀಳಬಹುದು.

ಇದನ್ನೂ ಓದಿ: ಅಮ್ಮನನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ಸುದೀಪ್​​​; ಕಿಚ್ಚನನ್ನು ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment