ದುಡ್ಡಿಗಾಗಿ ಕೆಕೆಆರ್​​ ತಂಡ ತೊರೆದ ಶ್ರೇಯಸ್​ ಅಯ್ಯರ್​​.. ಅಚ್ಚರಿ ವಿಚಾರ ಬಯಲು!

author-image
Ganesh Nachikethu
IPL Auction; ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆದ ಭಾರತದ ಮೂವರು ಸ್ಟಾರ್ ಪ್ಲೇಯರ್ಸ್?
Advertisment
  • 2024ರ ಇಂಡಿಯನ್​ ಪ್ರೀಮಿಯರ್​ ಲೀಗ್ ಟೂರ್ನಿ
  • ಕೆಕೆಆರ್​ ತಂಡದಿಂದ ಕ್ಯಾಪ್ಟನ್​ ಶ್ರೇಯಸ್​​ಗೆ ಕೊಕ್​!
  • ಶ್ರೇಯಸ್​ ಅಯ್ಯರ್​ಗೆ ಕೊಕ್​ ನೀಡಲು ಕಾರಣವೇನು?

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಚಾಂಪಿಯನ್ ತಂಡ ​​ಕೋಲ್ಕತ್ತಾ ನೈಟ್ ರೈಡರ್ಸ್. ಕೆಕೆಆರ್​​ ತಂಡ ಐಪಿಎಲ್​​​ ಚಾಂಪಿಯನ್​ ಆಗುವಲ್ಲಿ ಶ್ರೇಯಸ್​ ಅಯ್ಯರ್​​ ಪ್ರಮುಖ ಪಾತ್ರವಹಿಸಿದ್ದರು. ಮುಂದಿನ ಸೀಸನ್​ಗೆ ಕೆಕೆಆರ್​ ತಂಡದಿಂದ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​​ಗೆ ಕೊಕ್​ ನೀಡಲಾಗಿದೆ.

ಕೆಕೆಆರ್​​​ 2025ರ ರೀಟೈನ್​​ ಪಟ್ಟಿ ರಿಲೀಸ್​​​ ಮಾಡಿದೆ. ರಿಂಕು ಸಿಂಗ್ (13 ಕೋಟಿ), ಸುನಿಲ್ ನರೈನ್ (12 ಕೋಟಿ), ಆಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (12 ಕೋಟಿ ), ಹರ್ಷಿತ್ ರಾಣಾ (ರೂ. 4 ಕೋಟಿ) ಮತ್ತು ರಮಣದೀಪ್ ಸಿಂಗ್​ಗೆ 4 ಕೋಟಿ ನೀಡಿ ಕೆಕೆಆರ್​ ಉಳಿಸಿಕೊಂಡಿದೆ. ಆದರೆ, ಕೆಕೆಆರ್​​​ ತಂಡದಿಂದ ಶ್ರೇಯಸ್​ ಅಯ್ಯರ್​ ಅವರನ್ನು ಕೈ ಬಿಡಲಾಗಿದೆ.

ಶ್ರೇಯಸ್​ ಅಯ್ಯರ್​ಗೆ ಕೈ ಕೊಟ್ಟಿದ್ದೇಕೆ?

ಕೆಕೆಆರ್ ತಂಡದಿಂದ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲು ಕಾರಣವೇನು ಎಂದು ಸಿಇಒ ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ. ಐಪಿಎಲ್ 2025ರ ಟೂರ್ನಿಗಾಗಿ ಕೆಕೆಆರ್ ರೀಟೈನ್​​ ಲಿಸ್ಟ್​ನಲ್ಲಿ ಶ್ರೇಯಸ್ ಅಯ್ಯರ್ ಮೊದಲ ಆಯ್ಕೆಯಾಗಿದ್ದರು. ಅವರು ನಮ್ಮ ಕ್ಯಾಪ್ಟನ್​​. ಮುಂದೆ ಬಲಿಷ್ಠ ತಂಡ ಕಟ್ಟಲೇಬೇಕು ಅನ್ನೋ ಉದ್ದೇಶದಿಂದಲೇ ಅವರನ್ನು ಕ್ಯಾಪ್ಟನ್​​ ಮಾಡಿದ್ದೆವು ಎಂದರು.

ನಾವು 2025ರ ಐಪಿಎಲ್​ಗೆ ಅವರನ್ನು ರೀಟೈನ್​​ ಮಾಡಿಕೊಳ್ಳಲು ಮುಂದಾಗಿದ್ದೆವು. ಆದರೆ, ನಮಗೆ ಶ್ರೇಯಸ್​​ ಅಯ್ಯರ್​ ಗ್ರೀನ್​ ಸಿಗ್ನಲ್​ ನೀಡಲಿಲ್ಲ. ರಿಟೇನ್ ಪ್ರಕ್ರಿಯೆಗೆ ಪರಸ್ಪರ ಒಪ್ಪಿಗೆ ಬೇಕು. ಶ್ರೇಯಸ್ ಅಯ್ಯರ್ ಕಡೆಯಿಂದ ಯಾವುದೇ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಕೆಕೆಆರ್ ತಂಡದಿಂದ ಕೈ ಬಿಡಬೇಕಾಯ್ತು ಎಂದರು.

ಶ್ರೇಯಸ್ ಅವರೊಂದಿಗೆ ಈಗಲೂ ಕೆಕೆಆರ್​ಗೆ ಉತ್ತಮ ಬಾಂಧವ್ಯ ಇದೆ. ಆದರೆ, ಶ್ರೇಯಸ್​​​ ಅವರು ಹಣಕ್ಕಾಗಿ ಫ್ರಾಂಚೈಸಿ ಬಿಟ್ಟರು. ಹರಾಜಿನಲ್ಲಿ ತಮ್ಮ ಮೌಲ್ಯ ಎಷ್ಟು ಎಂದು ಚೆಕ್​​ ಮಾಡಲು ಮುಂದಾಗಿದ್ದಾರೆ. ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದರು ಸಿಇಒ ವೆಂಕಿ ಮೈಸೂರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment