ಮೊದಲ ಬ್ಯಾಟಿಂಗ್ ಮುಗಿದ ಬೆನ್ನಲ್ಲೇ ಪಂಜಾಬ್- ಕೋಲ್ಕತ್ತಾ ನಡುವಿನ ಪಂದ್ಯ ರದ್ದು.. ಯಾಕೆ?

author-image
Bheemappa
Updated On
ಮೊದಲ ಬ್ಯಾಟಿಂಗ್ ಮುಗಿದ ಬೆನ್ನಲ್ಲೇ ಪಂಜಾಬ್- ಕೋಲ್ಕತ್ತಾ ನಡುವಿನ ಪಂದ್ಯ ರದ್ದು.. ಯಾಕೆ?
Advertisment
  • ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯ ರದ್ದು
  • ಒಂದು ಓವರ್​​ನಲ್ಲಿ 7 ರನ್​ ಗಳಿಸಿದ್ದ ಕೋಲ್ಕತ್ತಾ ನೈಟ್​ ರೈಡರ್ಸ್​
  • ಭರ್ಜರಿ ಬ್ಯಾಟಿಂಗ್ ಮಾಡಿ ಅರ್ಧಶತಕ ಸಿಡಿಸಿದ್ದ ಪ್ರಭಸಿಮ್ರಾನ್

ಮಳೆಯ ಕಾರಣದಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಪಂಜಾಬ್​ ಕಿಂಗ್ಸ್ ನಡುವೆ ನಡೆದ 44ನೇ ಐಪಿಎಲ್​ ಪಂದ್ಯವನ್ನು ರದ್ದು ಮಾಡಲಾಗಿದೆ. 2025ರ ಸೀಸನ್​ನಲ್ಲಿ ಇದೇ ಮೊದಲ ಪಂದ್ಯ ಫಲಿತಾಂಶ ಇಲ್ಲದಾಗಿದ್ದು ಅಂಕಗಳನ್ನು ಎರಡು ತಂಡಗಳಿಗೆ ನೀಡಲಾಗಿದೆ

ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳು ಇಂದು ಸಂಜೆ 7:30ಕ್ಕೆ ಕಣಕ್ಕೆ ಇಳಿವೆ. ಪಂಜಾಬ್​ ಕಿಂಗ್ಸ್​ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡು ಪೂರ್ಣಗೊಳಿಸಿದ್ದರು. ಓಪನರ್ಸ್​ ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರನ್ ಅವರ ಅರ್ಧಶತಕದಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ​ 202 ರನ್​ಗಳ ಬೃಹತ್​ ಮೊತ್ತದ ಗುರಿ ನೀಡಲಾಗಿತ್ತು.

ಓಪನರ್ ಪ್ರಿಯಾಂಶ್ ಆರ್ಯ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿ ಕೆಕೆಆರ್​ ತಂಡಕ್ಕೆ ಕಾಡಿದರು. ಪಂದ್ಯದಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿದ ಸ್ಫೋಟಕ ಬ್ಯಾಟರ್​ 8 ಬೌಂಡರಿ, 4 ಅಮೋಘವಾದ ಸಿಕ್ಸರ್​ಗಳಿಂದ 69 ರನ್​ಗಳ ಕಾಣಿಕೆಯನ್ನ ಪಂಜಾಬ್​ ತಂಡಕ್ಕೆ ನೀಡಿದರು. ರಸೆಲ್​ ಬೌಲಿಂಗ್​ನಲ್ಲಿ ಕ್ಯಾಚ್​ ಕೊಟ್ಟು ಹೊರ ನಡೆದರು.

publive-image

ಪ್ರಿಯಾಂಶ್ ಆರ್ಯ ಜೊತೆ ಕ್ರೀಸ್​ಗೆ ಆಗಮಿಸಿದ್ದ ಓಪನರ್ ಪ್ರಭಾಸಿಮ್ರನ್ ಕೂಡ ಕೆಕೆಆರ್​ ಬೌಲರ್​ಗಳ ವಿರುದ್ಧ ಗುಡುಗಿದರು. ಆರ್ಯಗಿಂತ ತುಸು ಜೋರಾಗಿಯೇ ಬ್ಯಾಟ್​ ಬೀಸಿದ ಪ್ರಭಾಸಿಮ್ರನ್ ಸ್ಫೋಟಕ 83 ರನ್​ಗಳನ್ನು ಬಾರಿಸಿದರು. ಕೇವಲ 49 ಬಾಲ್​ಗಳನ್ನು ಆಡಿದ ಪ್ರಭಾಸಿಮ್ರನ್ 6 ಬೌಂಡರಿ 6 ಆಕಾಶದೆತ್ತರ ಸಿಕ್ಸರ್​ಗಳನ್ನು ಸಿಡಿಸಿದರು.

ಆದರೆ ಕೆಕೆಆರ್​​ನ 2ನೇ ಇನ್ನಿಂಗ್ಸ್​ನಲ್ಲಿ ಆರಂಭವಾಗಿ ಸುನಿಲ್ ನೈರನ್​​ ಹಾಗೂ ರಹಮಾನುಲ್ಲಾ ಗುರ್ಬಾಜ್ ಬ್ಯಾಟಿಂಗ್ ಆರಂಭಿಸಿ ಒಂದು ಓವರ್​ ಆಡಿ 7 ರನ್​​ಗಳನ್ನು ಗಳಿಸಿದ್ದರು. ಇನ್ನೊಂದು ಓವರ್​ ಆರಂಭಿಸಬೇಕು ಎನ್ನುವಷ್ಟರಲ್ಲಿ ಈಡನ್​ ಗಾರ್ಡನ್ಸ್ ಮೈದಾನದಲ್ಲಿ ಮಳೆ ಜೊತೆ ಕೆಟ್ಟದಾದ ವಾತಾವರಣ ಏರ್ಪಟ್ಟಿದೆ. ಇದರಿಂದ ಕೆಕೆಆರ್ ಹಾಗೂ ಪಂಜಾಬ್​ ನಡುವಿನ ಪಂದ್ಯವನ್ನು ರದ್ದು ಮಾಡಿ ತಲಾ ಒಂದೊಂದು ಅಂಕ ನೀಡಲಾಗಿದೆ ಎಂದು ಹೇಳಲಾಗಿದೆ.

ಮ್ಯಾಚ್ ನಡೆಯುವಾಗ ವೇಳೆ ಮಳೆ ಬಂದಿದ್ದರಿಂದ ಮೈದಾನದಿಂದ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್​​ನತ್ತ ಓಡಿ ಹೋದರು. ಕೆಕೆಆರ್ ಸೆಕೆಂಡ್​ ಬ್ಯಾಟಿಂಗ್​ ಅನ್ನು ಆರಂಭಿಸಿತ್ತು. ಆದರೆ ಬ್ಯಾಡ್​ ವೆದರ್ ಹಾಗೂ ಮಳೆ ಇದ್ದಿದ್ದರಿಂದ ಪಂದ್ಯವನ್ನೇ ರದ್ದು ಎಂದು ಘೋಷಣೆ ಮಾಡಿ ಒಂದೊಂದು ಪಾಯಿಂಟ್ ನೀಡಲಾಗಿದೆ. ಪಂದ್ಯದಲ್ಲಿ ಒಂದು ಓವರ್​ ಮಾತ್ರ ಆಡಿದ್ದ ಕೆಕೆಆರ್​ ಇನ್ನು 19 ಓವರ್​ಗಳಲ್ಲಿ 195 ರನ್​ಗಳನ್ನು ಗಳಿಸಬೇಕಿತ್ತು. ಮಳೆಯಿಂದ ಮ್ಯಾಚ್ ಅನ್ನು ನಿಲ್ಲಿಸಲಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment