Advertisment

ಆರ್​​ಸಿಬಿ, ಕೆಕೆಆರ್​ ನಡುವಿನ IPL​ ಪಂದ್ಯ ನಡೆಯೋದು ಡೌಟ್​; ಕಾರಣವೇನು?

author-image
Ganesh
Updated On
ಆರ್​​ಸಿಬಿ, ಕೆಕೆಆರ್​ ನಡುವಿನ IPL​ ಪಂದ್ಯ ನಡೆಯೋದು ಡೌಟ್​; ಕಾರಣವೇನು?
Advertisment
  • ಆರ್​ಸಿಬಿ vs ಕೆಕೆಆರ್​ ನಡುವೆ ಮೊದಲ ಪಂದ್ಯ
  • ಕೋಲ್ಕತ್ತದ ಈಡನ್ ಗಾರ್ಡನ್​​ನಲ್ಲಿ ಮುಖಾಮುಖಿ
  • ಮಳೆ ಬಾರದಿದ್ದರೆ ರನ್ ಹೊಳೆ ಹರಿಯೋದು ಪಕ್ಕಾ..!

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಕ್ಷಣಗಣನೆ ಶುರುವಾಗಿದೆ. ಇಂದು ನಡೆಯಲಿರೋ ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿ ಆಗಲಿವೆ.

Advertisment

ಕೆಕೆಆರ್​​, ಆರ್​​ಸಿಬಿ ಹೈವೋಲ್ಟೇಜ್​ ಪಂದ್ಯಕ್ಕಾಗಿ ಎದುರು ನೋಡುತ್ತಿವೆ. ವರದಿಗಳ ಪ್ರಕಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಬೇಕಿರೋ ಆರ್​​ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದೆ. ಹೀಗಾಗಿ ಪಂದ್ಯ ನಡೆಯುವುದು ಡೌಟ್​ ಆಗಿದೆ.

ಪಂದ್ಯಕ್ಕೆ ಮಳೆ ಅಡ್ಡಿ

ಮಾರ್ಚ್ 22ನೇ ತಾರೀಕು ಕೋಲ್ಕತ್ತಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಆರೆಂಜ್ ಅಲರ್ಟ್ ಘೋಷಸಿಲಾಗಿದೆ. ಹವಮಾನ ಇಲಾಖೆ ಮಾಹಿತಿ ಪ್ರಕಾರ 65% ಮಳೆ ಬರೋ ಸಾಧ್ಯತೆ ಇದೆ. ಮಳೆ ಬಂದ್ರೆ ಪಂದ್ಯ ರದ್ದಾಗಲಿದೆ. ಮಳೆ ಬರದಿದ್ರೆ ರನ್​ ಹೊಳೆ ಹರಿಯಲಿದೆ.
ಬಂಗಾಳಕೊಲ್ಲಿಯಿಂದ ಕೆಳ ಉಷ್ಣವಲಯದ ಮಟ್ಟದಲ್ಲಿ ಗಾಳಿ ಮತ್ತು ತೇವಾಂಶ ಇದೆ. ಇದರ ಪರಿಣಾಮ ಸತತ 2 ದಿನಗಳ ಕಾಲ ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳಲಿದ್ದು, ಐಪಿಎಲ್ 2025ರ ಉದ್ಘಾಟನಾ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಇದನ್ನೂ ಓದಿ: RCB ಸೇರಿದ ಫಿಲ್​ ಸಾಲ್ಟ್​ಗೆ ಜಾಕ್​ಪಾಟ್​​​; ತಂಡದಲ್ಲಿ ಮಹತ್ವದ ಜವಾಬ್ದಾರಿ

Advertisment

publive-image

ಈಡನ್​​ ಗಾರ್ಡನ್ಸ್​ನ ಪಿಚ್​​ ಬ್ಯಾಟ್ಸ್​​ಮನ್​ಗಳಿಗೆ ಹೆಚ್ಚು ಸಹಕಾರಿಯಾಗಿರಲಿದೆ. ಪಿಚ್​ ಕ್ಯುರೇಟರ್​ ಸುಜನ್​​ ಮುಖರ್ಜಿ ಹೇಳೋ ಪ್ರಕಾರ ಎರಡೂ ಇನ್ನಿಂಗ್ಸ್​ಗಳಲ್ಲಿ 200+ ಸ್ಕೋರ್​​ ಗಳಿಸೋದು ಸುಲಭವಂತೆ. ಸೀಸನ್​ 18ರ ಮೊದಲ ಪಂದ್ಯದಲ್ಲೇ ಫ್ಯಾನ್ಸ್​ಗೆ ಬೌಂಡರಿ, ಸಿಕ್ಸರ್​​ಗಳ ಭರ್ಜರಿ ಎಂಟರ್​ಟೈನ್​ಮೆಂಟ್​​ ಕಾದಿದೆ ಅಂತಾನೇ ಅರ್ಥ.

ಆರ್‌ಸಿಬಿ ತಂಡ ಹೀಗಿದೆ!

ರಜತ್ ಪಾಟಿದಾರ್ (ಕ್ಯಾಪ್ಟನ್​​), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ದಾರ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಂಡಾಗೆ, ಜಾಕೋಬ್ ಬೆಥೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರ, ಲುಂಗಿ ಎನ್‌ಗಿಡಿ, ಅಭಿನಂದನ್ ಸಿಂಗ್, ಮೋಹಿತ್ ರಾಠಿ.

ಇದನ್ನೂ ಓದಿ: ಆರ್​ಸಿಬಿಗೆ ಇದು ಸೇಡಿನ ಸಮರ.. ಮೊದಲ ಪಂದ್ಯಕ್ಕಾಗಿ ಕಿಂಗ್ ಕೊಹ್ಲಿ ತಯಾರಿ ಹೆಂಗಿದೆ..?

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment