ಕ್ಲಾಸಿಕ್ ಕೆ.ಎಲ್ ರಾಹುಲ್ ಬ್ಯಾಟಿಂಗ್ ಉಗ್ರವತಾರ ಹೇಗಿದೆ ಗೊತ್ತಾ?
ಸ್ಥಾನ ಬೇಕಂದರೆ ರಾಹುಲ್ ಭರ್ಜರಿ ಪರ್ಫಾಮೆನ್ಸ್ ನೀಡಬೇಕಿದೆ!
ಕ್ಯಾಪ್ಟನ್ ರಾಹುಲ್ಗೆ ಗೇಟ್ಪಾಸ್ ನೀಡುತ್ತಾ ಲಕ್ನೋ ಫ್ರಾಂಚೈಸಿ?
ಸಿಂಹಳೀಯರ ನಾಡಿನ ಸವಾಲಿಗೆ ಕನ್ನಡಿಗನ ಭರ್ಜರಿ ತಯಾರಿ ಆರಂಭವಾಗಿದೆ. ನೆಟ್ಸ್ನಲ್ಲಿ ಆರ್ಭಟಿಸಿರೋ ಚಿಕ್ಕ ವಿಡಿಯೋ ಹಂಚಿಕೊಂಡಿರೋ ರಾಹುಲ್, ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಹಿಂದೆ ಅನುಭವಿಸಿದ ಟೀಕೆಗಳಿಗೆ ಖಡಕ್ ಆನ್ಸರ್ ನೀಡೋ ಪಣ ತೊಟ್ಟಿದ್ದಾರೆ. ಕ್ಲಾಸಿಕ್ ಕೆ.ಎಲ್ ರಾಹುಲ್ ಉಗ್ರವತಾರ ಹೇಗಿದೆ ಗೊತ್ತಾ?.
ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
17 ಮೇ 2024… ಇಂದಿಗೆ ಸರಿಯಾಗಿ 70 ದಿನಗಳ ಹಿಂದೆ ಮೈದಾನಕ್ಕಿಳಿದಿದ್ದು. ಅಂದು ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಅರ್ಧಶತಕ ಸಿಡಿಸಿ ಐಪಿಎಲ್ ಕ್ಯಾಂಪೇನ್ ಅಂತ್ಯಗೊಳಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಇದೀಗ ಕಮ್ಬ್ಯಾಕ್ಗೆ ಸಜ್ಜಾಗಿದ್ದಾರೆ. ಕಳೆದ 2 ತಿಂಗಳುಗಳಿಂದ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದ, ರಾಹುಲ್ ಸುತ್ತಾಟಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಫೀಲ್ಡ್ಗಿಳಿಯಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಸಿಂಹಳೀಯರ ಎದುರು ತೊಡೆತಟ್ಟಲು ರಾಹುಲ್ ರೆಡಿ.!
ಕಳೆದ 2 ತಿಂಗಳಿಂದ ಮೈದಾನದಿಂದ ದೂರ ಉಳಿದಿದ್ದ ಕೆ.ಎಲ್ ರಾಹುಲ್, ಮತ್ತೆ ಮೈದಾನಕ್ಕಿಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿ ಬೀಡು ಬಿಟ್ಟಿರುವ ರಾಹುಲ್ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ. ನೆಟ್ಸ್ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ.
ಬದಲಾಯ್ತು ಆಟ.., ನೆಟ್ಸ್ನಿಂದಲೇ ಸಂದೇಶ.!
ನೆಟ್ಸ್ನಲ್ಲಿ ಅಭ್ಯಾಸ ಮಾಡ್ತಿರೋ ಚಿಕ್ಕ ವಿಡಿಯೋವನ್ನ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದಿದ್ದ ರಾಹುಲ್ಗೂ, ಸಿಂಹಳೀಯರ ನಾಡಲ್ಲಿ ತೊಡೆತಟ್ಟಲು ಸಜ್ಜಾಗ್ತಿರೋ ರಾಹುಲ್ಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನೋ ದೊಡ್ಡ ಸಂದೇಶ ಈ ಚಿಕ್ಕ ವಿಡಿಯೋ ನೀಡ್ತಿದೆ. ಕ್ಲಾಸಿಕ್ ಆಟದಿಂದಲೇ ಹೆಸರುವಾಸಿಯಾಗಿರೋ ರಾಹುಲ್, ಇಲ್ಲಿ ಅಗ್ರೆಸ್ಸಿವ್ ಅವತಾರ ಎತ್ತಿದ್ದಾರೆ. ಪ್ರತಿ ಎಸೆತವನ್ನೂ ಬೌಂಡರಿ, ಸಿಕ್ಸರ್ ಗಡಿ ದಾಟಿಸೋ ಯತ್ನ ಮಾಡಿದ್ದಾರೆ.
ನಿಧಾನಗತಿಯ ಬ್ಯಾಟಿಂಗ್.., ಸಾಧಾರಣ ಸ್ಟ್ರೈಕ್ರೇಟ್.!
ಕೆ.ಎಲ್ ರಾಹುಲ್ ಬ್ಯಾಟಿಂಗ್ ಶೈಲಿ ಬದಲಾಗಿರೋದಕ್ಕೆ ಕಾರಣವೂ ಇದೆ. ಐಪಿಎಲ್ ಸೀಸನ್ 18ಕ್ಕೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಆರಂಭವಾಗಿದ್ದು, ರಿಟೈನ್, ರಿಲೀಸ್ ಲೆಕ್ಕಾಚಾರ ಜೋರಾಗಿದೆ. ರಾಹುಲ್ ನಾಯಕನಾಗಿರೋ ಲಕ್ನೋ ಸೂಪರ್ ಜೈಂಟ್ಸ್ ಕೂಡ ಸಿದ್ಧತೆಯನ್ನ ಆರಂಭಿಸಿದೆ. ಆದ್ರೆ, ಕ್ಯಾಪ್ಟನ್ ರಾಹುಲ್ಗೆ ಗೇಟ್ಪಾಸ್ ನೀಡೋ ಚಿಂತನೆಯಲ್ಲಿದೆ. ಇದಕ್ಕೆ ಕಾರಣ ಏನು ಗೊತ್ತಾ ಸಾಧಾರಣ ಸ್ಟ್ರೈಕ್ರೇಟ್.
ಲಕ್ನೋ ಸೂಪರ್ ಜೈಂಟ್ಸ್ ಮಾತ್ರವಲ್ಲ.. ಟೀಮ್ ಇಂಡಿಯಾದ ಟಿ20 ತಂಡದಿಂದಲೂ ಕೆ.ಎಲ್ ರಾಹುಲ್ ದೂರಾಗಿದ್ದಾರೆ. ಇದಕ್ಕೂ ನಿಧಾನಗತಿಯ ಬ್ಯಾಟಿಂಗ್ ಹಾಗೂ ಸಾಧಾರಣ ಸ್ಟ್ರೈಕ್ರೇಟ್ ಕಾರಣವಾಗಿದೆ. ಈ ಕಾರಣದಿಂದಲೇ ಕ್ಲಾಸಿಕ್ ಆಟವಾಡ್ತಿದ್ದ ಕೆ.ಎಲ್ ರಾಹುಲ್ ಉಗ್ರಾವತಾರ ಎತ್ತಿದ್ದಾರೆ. ತನ್ನ ತಾಕತ್ತನ್ನ ನಿರೂಪಿಸಲು ಅಭ್ಯಾಸದ ಅಖಾಡದಲ್ಲಿ ಭರ್ಜರಿ ತಯಾರಿ ನಡೆಸೋ ಮೂಲಕ ಕನ್ನಡಿಗ ಸಜ್ಜಾಗ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?
ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡೋದೆ ರಾಹುಲ್ ಟಾರ್ಗೆಟ್.!
ಭಾರತ ತಂಡ ಆಡಿದ ಬಹುತೇಕ ಪ್ರಮುಖ ಟೂರ್ನಿಗಳಲ್ಲಿ ಆಡಿದ್ದ ರಾಹುಲ್, 2024ರ ಟಿ20 ವಿಶ್ವಕಪ್ ತಂಡದಿಂದ ಹೊರ ಬಿದ್ದಿದ್ರು. ತಂಡದಲ್ಲಿ ಸ್ಥಾನ ಸಿಗದ ಬೇಸರ ರಾಹುಲ್ರನ್ನ ಕಾಡಿತ್ತು. ಇದೀಗ ಮುಂದಿನ ವರ್ಷ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಆ ಬಳಿಕ 2026ರಲ್ಲಿ T20 ವಿಶ್ವಕಪ್ ಟೂರ್ನಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2027ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಗಳನ್ನ ಆಡಲಿದೆ. ಈ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪರ ಆಡೋದು ರಾಹುಲ್ ಕನಸಾಗಿದೆ.
ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಸಾವು.. ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಪೋಷಕರು
— K L Rahul (@klrahul) July 24, 2024
ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪರ ಆಡಬೇಕಂದ್ರೆ, ಮುಂದಿರೋ ಎಲ್ಲಾ ಪಂದ್ಯಗಳು ಡು ಆರ್ ಡೈ ಪಂದ್ಯಗಳೇ. ಲಂಕಾ ಸರಣಿಯಂತೂ ಕರಿಯರ್ನ ಭವಿಷ್ಯವನ್ನೇ ನಿರ್ಧರಿಸಲಿದೆ. ಪೈಪೋಟಿಯ ನಡುವೆ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ರಾಹುಲ್ ಭರ್ಜರಿ ಪರ್ಫಾಮೆನ್ಸ್ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಕ್ಲಾಸಿಕ್ ಕೆ.ಎಲ್ ರಾಹುಲ್ ಬ್ಯಾಟಿಂಗ್ ಉಗ್ರವತಾರ ಹೇಗಿದೆ ಗೊತ್ತಾ?
ಸ್ಥಾನ ಬೇಕಂದರೆ ರಾಹುಲ್ ಭರ್ಜರಿ ಪರ್ಫಾಮೆನ್ಸ್ ನೀಡಬೇಕಿದೆ!
ಕ್ಯಾಪ್ಟನ್ ರಾಹುಲ್ಗೆ ಗೇಟ್ಪಾಸ್ ನೀಡುತ್ತಾ ಲಕ್ನೋ ಫ್ರಾಂಚೈಸಿ?
ಸಿಂಹಳೀಯರ ನಾಡಿನ ಸವಾಲಿಗೆ ಕನ್ನಡಿಗನ ಭರ್ಜರಿ ತಯಾರಿ ಆರಂಭವಾಗಿದೆ. ನೆಟ್ಸ್ನಲ್ಲಿ ಆರ್ಭಟಿಸಿರೋ ಚಿಕ್ಕ ವಿಡಿಯೋ ಹಂಚಿಕೊಂಡಿರೋ ರಾಹುಲ್, ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಹಿಂದೆ ಅನುಭವಿಸಿದ ಟೀಕೆಗಳಿಗೆ ಖಡಕ್ ಆನ್ಸರ್ ನೀಡೋ ಪಣ ತೊಟ್ಟಿದ್ದಾರೆ. ಕ್ಲಾಸಿಕ್ ಕೆ.ಎಲ್ ರಾಹುಲ್ ಉಗ್ರವತಾರ ಹೇಗಿದೆ ಗೊತ್ತಾ?.
ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?
17 ಮೇ 2024… ಇಂದಿಗೆ ಸರಿಯಾಗಿ 70 ದಿನಗಳ ಹಿಂದೆ ಮೈದಾನಕ್ಕಿಳಿದಿದ್ದು. ಅಂದು ಮುಂಬೈ ಇಂಡಿಯನ್ಸ್ ಎದುರು ಭರ್ಜರಿ ಅರ್ಧಶತಕ ಸಿಡಿಸಿ ಐಪಿಎಲ್ ಕ್ಯಾಂಪೇನ್ ಅಂತ್ಯಗೊಳಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಇದೀಗ ಕಮ್ಬ್ಯಾಕ್ಗೆ ಸಜ್ಜಾಗಿದ್ದಾರೆ. ಕಳೆದ 2 ತಿಂಗಳುಗಳಿಂದ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದ, ರಾಹುಲ್ ಸುತ್ತಾಟಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಫೀಲ್ಡ್ಗಿಳಿಯಲು ರೆಡಿಯಾಗಿದ್ದಾರೆ.
ಇದನ್ನೂ ಓದಿ: ಕಾರ್ಗಿಲ್ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ
ಸಿಂಹಳೀಯರ ಎದುರು ತೊಡೆತಟ್ಟಲು ರಾಹುಲ್ ರೆಡಿ.!
ಕಳೆದ 2 ತಿಂಗಳಿಂದ ಮೈದಾನದಿಂದ ದೂರ ಉಳಿದಿದ್ದ ಕೆ.ಎಲ್ ರಾಹುಲ್, ಮತ್ತೆ ಮೈದಾನಕ್ಕಿಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿ ಬೀಡು ಬಿಟ್ಟಿರುವ ರಾಹುಲ್ ಬ್ಯಾಟ್ ಹಿಡಿದು ಘರ್ಜಿಸಿದ್ದಾರೆ. ನೆಟ್ಸ್ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ.
ಬದಲಾಯ್ತು ಆಟ.., ನೆಟ್ಸ್ನಿಂದಲೇ ಸಂದೇಶ.!
ನೆಟ್ಸ್ನಲ್ಲಿ ಅಭ್ಯಾಸ ಮಾಡ್ತಿರೋ ಚಿಕ್ಕ ವಿಡಿಯೋವನ್ನ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದಿದ್ದ ರಾಹುಲ್ಗೂ, ಸಿಂಹಳೀಯರ ನಾಡಲ್ಲಿ ತೊಡೆತಟ್ಟಲು ಸಜ್ಜಾಗ್ತಿರೋ ರಾಹುಲ್ಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನೋ ದೊಡ್ಡ ಸಂದೇಶ ಈ ಚಿಕ್ಕ ವಿಡಿಯೋ ನೀಡ್ತಿದೆ. ಕ್ಲಾಸಿಕ್ ಆಟದಿಂದಲೇ ಹೆಸರುವಾಸಿಯಾಗಿರೋ ರಾಹುಲ್, ಇಲ್ಲಿ ಅಗ್ರೆಸ್ಸಿವ್ ಅವತಾರ ಎತ್ತಿದ್ದಾರೆ. ಪ್ರತಿ ಎಸೆತವನ್ನೂ ಬೌಂಡರಿ, ಸಿಕ್ಸರ್ ಗಡಿ ದಾಟಿಸೋ ಯತ್ನ ಮಾಡಿದ್ದಾರೆ.
ನಿಧಾನಗತಿಯ ಬ್ಯಾಟಿಂಗ್.., ಸಾಧಾರಣ ಸ್ಟ್ರೈಕ್ರೇಟ್.!
ಕೆ.ಎಲ್ ರಾಹುಲ್ ಬ್ಯಾಟಿಂಗ್ ಶೈಲಿ ಬದಲಾಗಿರೋದಕ್ಕೆ ಕಾರಣವೂ ಇದೆ. ಐಪಿಎಲ್ ಸೀಸನ್ 18ಕ್ಕೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಆರಂಭವಾಗಿದ್ದು, ರಿಟೈನ್, ರಿಲೀಸ್ ಲೆಕ್ಕಾಚಾರ ಜೋರಾಗಿದೆ. ರಾಹುಲ್ ನಾಯಕನಾಗಿರೋ ಲಕ್ನೋ ಸೂಪರ್ ಜೈಂಟ್ಸ್ ಕೂಡ ಸಿದ್ಧತೆಯನ್ನ ಆರಂಭಿಸಿದೆ. ಆದ್ರೆ, ಕ್ಯಾಪ್ಟನ್ ರಾಹುಲ್ಗೆ ಗೇಟ್ಪಾಸ್ ನೀಡೋ ಚಿಂತನೆಯಲ್ಲಿದೆ. ಇದಕ್ಕೆ ಕಾರಣ ಏನು ಗೊತ್ತಾ ಸಾಧಾರಣ ಸ್ಟ್ರೈಕ್ರೇಟ್.
ಲಕ್ನೋ ಸೂಪರ್ ಜೈಂಟ್ಸ್ ಮಾತ್ರವಲ್ಲ.. ಟೀಮ್ ಇಂಡಿಯಾದ ಟಿ20 ತಂಡದಿಂದಲೂ ಕೆ.ಎಲ್ ರಾಹುಲ್ ದೂರಾಗಿದ್ದಾರೆ. ಇದಕ್ಕೂ ನಿಧಾನಗತಿಯ ಬ್ಯಾಟಿಂಗ್ ಹಾಗೂ ಸಾಧಾರಣ ಸ್ಟ್ರೈಕ್ರೇಟ್ ಕಾರಣವಾಗಿದೆ. ಈ ಕಾರಣದಿಂದಲೇ ಕ್ಲಾಸಿಕ್ ಆಟವಾಡ್ತಿದ್ದ ಕೆ.ಎಲ್ ರಾಹುಲ್ ಉಗ್ರಾವತಾರ ಎತ್ತಿದ್ದಾರೆ. ತನ್ನ ತಾಕತ್ತನ್ನ ನಿರೂಪಿಸಲು ಅಭ್ಯಾಸದ ಅಖಾಡದಲ್ಲಿ ಭರ್ಜರಿ ತಯಾರಿ ನಡೆಸೋ ಮೂಲಕ ಕನ್ನಡಿಗ ಸಜ್ಜಾಗ್ತಿದ್ದಾರೆ.
ಇದನ್ನೂ ಓದಿ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?
ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡೋದೆ ರಾಹುಲ್ ಟಾರ್ಗೆಟ್.!
ಭಾರತ ತಂಡ ಆಡಿದ ಬಹುತೇಕ ಪ್ರಮುಖ ಟೂರ್ನಿಗಳಲ್ಲಿ ಆಡಿದ್ದ ರಾಹುಲ್, 2024ರ ಟಿ20 ವಿಶ್ವಕಪ್ ತಂಡದಿಂದ ಹೊರ ಬಿದ್ದಿದ್ರು. ತಂಡದಲ್ಲಿ ಸ್ಥಾನ ಸಿಗದ ಬೇಸರ ರಾಹುಲ್ರನ್ನ ಕಾಡಿತ್ತು. ಇದೀಗ ಮುಂದಿನ ವರ್ಷ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಆಡಲಿದೆ. ಆ ಬಳಿಕ 2026ರಲ್ಲಿ T20 ವಿಶ್ವಕಪ್ ಟೂರ್ನಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2027ರಲ್ಲಿ ಏಕದಿನ ವಿಶ್ವಕಪ್ ಟೂರ್ನಿಗಳನ್ನ ಆಡಲಿದೆ. ಈ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪರ ಆಡೋದು ರಾಹುಲ್ ಕನಸಾಗಿದೆ.
ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಸಾವು.. ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಪೋಷಕರು
— K L Rahul (@klrahul) July 24, 2024
ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪರ ಆಡಬೇಕಂದ್ರೆ, ಮುಂದಿರೋ ಎಲ್ಲಾ ಪಂದ್ಯಗಳು ಡು ಆರ್ ಡೈ ಪಂದ್ಯಗಳೇ. ಲಂಕಾ ಸರಣಿಯಂತೂ ಕರಿಯರ್ನ ಭವಿಷ್ಯವನ್ನೇ ನಿರ್ಧರಿಸಲಿದೆ. ಪೈಪೋಟಿಯ ನಡುವೆ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ರಾಹುಲ್ ಭರ್ಜರಿ ಪರ್ಫಾಮೆನ್ಸ್ ನೀಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ