newsfirstkannada.com

ಒಂದೇ ಒಂದು ಬ್ಯಾಡ್​ಗೇಮ್​​ಗೆ ಇದೆಂಥ ಶಿಕ್ಷೆ.. KL ರಾಹುಲ್ ಡ್ರಾಪ್ ಮಾಡಿದ ಹಿಂದೆ ಬರೀ ರಾಜಕೀಯ

Share :

Published August 8, 2024 at 10:10am

    ಕನ್ನಡಿಗ ಕೆ.ಎಲ್.ರಾಹುಲ್​​​ಗೆ ವಿಶ್ರಾಂತಿನಾ, ಡ್ರಾಪಾ?

    ಒಂದೇ ಒಂದು ಬ್ಯಾಡ್​​​​​ಗೇಮ್​​ಗೆ ಇಂದೆಂಥಾ ಶಿಕ್ಷೆ?

    ರಾಹುಲ್​​ಗಿಂತ ಕಳಪೆಯಾಗಿತ್ತು ಶ್ರೇಯಸ್​-ದುಬೆ ಆಟ

ಕೆ.ಎಲ್.ರಾಹುಲ್ ನಿನ್ನೆ 200ನೇ ಅಂಥಅರಾಷ್ಟ್ರೀಯ ಪಂದ್ಯವನ್ನಾಡುವ ಕನಸು ಕಂಡಿದ್ದರು. ಆ ಕನಸು ಕನಸಾಗಿಯೇ ಉಳಿಯಿತು. 2ನೇ ಪಂದ್ಯದಲ್ಲಿ ಮಾಡಿದ ಒಂದು ತಪ್ಪಿಗೆ ತಂಡದಿಂದಲೇ ಕಿಕ್​ ಔಟ್ ಮಾಡಲಾಯ್ತು. ನಿಜಕ್ಕೂ ರಾಹುಲ್​​​​, ಈ ಶಿಕ್ಷೆಗೆ ಅರ್ಹರಾಗಿದ್ದರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಟೀಮ್ ಇಂಡಿಯಾದ ಫಲಿತಾಂಶಕ್ಕಿಂತ ನಿನ್ನೆ ಹೆಚ್ಚು ಚರ್ಚೆಯಾಗಿದ್ದು, ಕೆ.ಎಲ್.ರಾಹುಲ್​​​​​​​​ ಹೆಸರು.. ಕರ್ನಾಟಕದ ಬ್ಯಾಟ್ಸ್​ಮನ್​​ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡ್ತಾರೆ ಅಂತಾನೇ ಫ್ಯಾನ್ಸ್​ ಭಾವಿಸಿದ್ದರು. ಟಾಸ್ ಸೋಲಿನ ಬಳಿಕ ರೋಹಿತ್ ಹೇಳಿದ ಒಂದು ಮಾತಿನಿಂದ ಫ್ಯಾನ್ಸ್​ಗೆ ಶಾಕ್ ನೀಡಿತ್ತು. ಅದು ಕೆಎಲ್​ ರಾಹುಲ್ ಅವರನ್ನು ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಿರೋ ವಿಚಾರ.

ಇದನ್ನೂ ಓದಿ:ಚಿನ್ನ ಗೆಲ್ಲುವ ಬಗ್ಗೆ ನೀರಜ್ ಚೋಪ್ರಾ ಹೇಳಿದ್ದೇನು..? ಇಂದು ದೊಡ್ಡ ನಿರೀಕ್ಷೆಯಲ್ಲಿ ಭಾರತ..

ಟೀಮ್ ಮ್ಯಾನೇಜ್​​ಮೆಂಟ್​ನ ಈ ನಿರ್ಣಯಕ್ಕೆ ಹರಿಕೆ ಕುರಿಯಾಗಿದ್ದು ಕನ್ನಡಿಗ ಕೆ.ಎಲ್.ರಾಹುಲ್. ಯಾಕಂದ್ರೆ, ಏಕದಿನ ತಂಡದ ಮಿಡಲ್ ಆರ್ಡರ್​ನ ಬಲವಾಗಿದ್ದ ರಾಹುಲ್, ವಿಕೆಟ್ ಕೀಪರ್ ಆಗಿ ಅಲ್ಲದಿದ್ರೂ, ಬ್ಯಾಟ್ಸ್​ಮನ್ ಆಗಿಯಾದ್ರೂ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಇರಬೇಕಾಗಿತ್ತು. ಆದ್ರೆ, ರಾಹುಲ್​ ಬೆಂಚ್​ಗೆ ಸೀಮಿತವಾಗಿ ಬಿಟ್ರು.

ರಾಹುಲ್​​​ಗೆ ವಿಶ್ರಾಂತಿನಾ, ಡ್ರಾಪಾ?
ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿರುವ ವಿಷ್ಯ. ಕೆ.ಎಲ್.ರಾಹುಲ್​​ಗೆ ​ ವಿಶ್ರಾಂತಿ ನೀಡಿದ್ರಾ? ಅಥವಾ ಡ್ರಾಪ್​ ಮಾಡಿದ್ರಾ? ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. 7 ತಿಂಗಳ ಬಳಿಕ ಏಕದಿನ ಸರಣಿಯನ್ನಾಡ್ತಿದ್ದ ಕನ್ನಡಿಗ ರಾಹುಲ್​, ಲಂಕಾ ಎದುರಿನ ಮೊದಲ 2 ಪಂದ್ಯಗಳಲ್ಲಿ ಇತರರಿಗಿಂತ ಹೀನಾಯ ಪ್ರದರ್ಶನವನ್ನೇನು ನೀಡಿರಲಿಲ್ಲ. 2ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದೇ ತಡ ಬೆಂಚ್​​ಗೆ ಫಿಕ್ಸಾಗಿಬಿಟ್ಟಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್

ಇದು ಟೀಮ್ ಇಂಡಿಯಾಗೆ ಈ ವರ್ಷದ ಕೊನೆ ಏಕದಿನ ಪಂದ್ಯವಾಗಿದೆ. ಇದಾದ ಬಳಿಕ ಈ ವರ್ಷ ಯಾವುದೇ ಒನ್​ ಡೇ ಗೇಮ್​ ಆಡಲ್ಲ. ಹೀಗಾಗಿ ಕೆ.ಎಲ್.ರಾಹುಲ್​​ರನ್ನ ಕೇವಲ ವಿಶ್ರಾಂತಿಯನ್ನ ನೀಡಲಾಗಿದ್ಯಾ? ಅಥವಾ ತಂಡದಿಂದಲೇ ಡ್ರಾಪ್​ ಮಾಡಲಿಗಿದ್ಯಾ ಎಂಬ ಚರ್ಚೆ ನಡೆದಿದೆ.

ರಾಹುಲ್​​ಗಿಂತ ಕಳಪೆಯಾಗಿತ್ತು ಶ್ರೇಯಸ್​-ದುಬೆ ಆಟ
ಲಂಕಾ ಎದುರಿನ 2 ಪಂದ್ಯಗಳನ್ನ ನೋಡಿದ್ರೆ ಶ್ರೇಯಸ್​ ಅಯ್ಯರ್ ಹಾಗೂ ಶಿವಂ ದುಬೆ ಆಟವೂ ಅಷ್ಟಕ್ಕೆ ಅಷ್ಟೇ. ಇವ್ರೇ ಯಾಕೆ..? ವಿರಾಟ್​ ಕೊಹ್ಲಿ ಆಟವೂ ಹೇಳಿಕೊಳ್ಳುವಂತಿರಲಿಲ್ಲ. ಕೆಲ ವರ್ಷಗಳಿಂದ ಕೆ.ಎಲ್.ರಾಹುಲ್, ವಿಶ್ವ ಕ್ರಿಕೆಟ್​ನಲ್ಲೇ ಬೆಸ್ಟ್​ ಮಿಡಲ್ ಆರ್ಡರ್​ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕಳೆದ 5 ವರ್ಷಗಳ ಟ್ರ್ಯಾಕ್ ರೆಕಾರ್ಡ್​ ನೋಡಿದ್ರೆ ಗರಿಷ್ಠ ಮಿಡಲ್ ಆರ್ಡರ್​ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹೀಗಿದ್ರೂ ರಾಹುಲ್​ರನ್ನ 4 ಹಾಗೂ 5ನೇ ಕ್ರಮಾಂಕದ ಬದಲಿಗೆ 6 ಹಾಗೂ 7ನೇ ಕ್ರಮಾಂಕದಲ್ಲಿ ಪ್ರಯೋಗ ಮಾಡಿತ್ತು. ಈ ಪ್ರಯೋಗದಲ್ಲಿ ವೈಫಲ್ಯ ಕಂಡ ರಾಹುಲ್​ನ ಬೆಂಚ್​​ಗೆ ಫಿಕ್ಸ್​ ಮಾಡಲಾಗಿದೆ.

ಗೆಲುವಿನ ಅವಶ್ಯಕತೆಗಾಗಿ ರಾಹುಲ್​​​​​​ನ ಕೈಬಿಟ್ರಾ?
ಮೊದಲ ಪಂದ್ಯವನ್ನ ಗೆಲುವಿನ ಅಂಚಿನಲ್ಲಿ ಎಡವಿದ್ದ ಟೀಮ್ ಇಂಡಿಯಾ, 2ನೇ ಪಂದ್ಯವನ್ನ ಸ್ವಯಃಕೃತ ಅಪರಾಧದಿಂದ ಕೈಚೆಲ್ಲಿತ್ತು. ಸ್ಪಿನ್ ಫ್ರೆಂಡ್ಲಿ ಪಿಚ್​​ನಲ್ಲಿ ಹೆಚ್ಚುವರಿ ಸ್ಪಿನ್ನರ್​​ನ ಕಡೆಗಣಿಸಿದ್ದು ಕೂಡ ಕಾರಣವಾಗಿತ್ತು. ಸರಣಿ ಟೈ ಮಾಡಿಕೊಳ್ಳಬೇಕು, ಹೀಗಾಗಿಯೇ ಕೊನೆ ಪಂದ್ಯವನ್ನ ಗೆಲ್ಲಬೇಕೆಂಬ ಉದ್ದೇಶದಿಂದಲೇ ಕನ್ನಡಿಗ ರಾಹುಲ್​​ನ ಕೈ ಬಿಟ್ಟು, ಪಂತ್​​ಗೆ ಚಾನ್ಸ್ ನೀಡಲಾಯ್ತು ಎನ್ನಲಾಗ್ತಿದೆ. ಚಾನ್ಸ್​ ಗಿಟ್ಟಿಸಿಕೊಂಡ ಪಂತ್​ ಕಡಿದು ಗುಡ್ಡೇ ಹಾಕಿದ್ದು ಏನೂ ಇಲ್ಲ.. ಜಸ್ಟ್​​ 6 ರನ್​ಗಳಿಸಿ ಔಟಾದ್ರು.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ಸ್ಪಿನ್ ಟ್ರ್ಯಾಕ್​​ಗಳಲ್ಲಿ ಪಂತ್ ಕೌಂಟರ್ ಅಟ್ಯಾಕ್ ಮಾಡ್ತಾರೆ. ಪಂದ್ಯವನ್ನು ಟರ್ನ್​ ಮಾಡ್ತಾರೆ ನಿಜ. ಸ್ಪಿನ್ ಫ್ರೆಂಡ್ಲಿಯಲ್ಲಿ ಬಿಗ್ ಇನ್ನಿಂಗ್ಸ್​ ಕಟ್ಟುವ ತಾಕತ್ತು ರಾಹುಲ್​ಗೂ ಇದೆ. ಮಿಡಲ್ ಆರ್ಡರ್​ನಲ್ಲಿ ರಾಹುಲ್​​​​​, 62ರ ಅವರೇಜ್​​ನಲ್ಲಿ ಬ್ಯಾಟಿಂಗ್ ನಡೆಸಿದ್ರೆ, ರಿಷಭ್ ಪಂತ್ ಅವರೇಜ್ 36 ಮಾತ್ರವೇ ಆಗಿದೆ. ರಾಹುಲ್​ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿರೋದನ್ನ ವಿಶ್ವಕಪ್​ನಂಥಹ ಬಿಗ್ ಸ್ಟೇಜ್​ಗಳಲ್ಲೂ ನೋಡಿದ್ದೇವೆ. ಈ ಹೊರತಾಗಿಯೂ ರಾಹುಲ್​​ನ ಬೆಂಚ್​ಗೆ ಸಿಮೀತವಾಗಿಸಿರೋದು ನಿಜಕ್ಕೂ ಆಟಗಾರನ ಅಭದ್ರತೆ ಸೃಷ್ಟಿಸುವ ಸಂದೇಶದಂತೆ ಕಾಣ್ತಿದೆ.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ; ಬ್ರಿಜ್ ಭೂಷಣ್​ರ ಇಬ್ಬರು ಮಕ್ಕಳಿಂದ ಅಚ್ಚರಿಯ ಪ್ರತಿಕ್ರಿಯೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಒಂದೇ ಒಂದು ಬ್ಯಾಡ್​ಗೇಮ್​​ಗೆ ಇದೆಂಥ ಶಿಕ್ಷೆ.. KL ರಾಹುಲ್ ಡ್ರಾಪ್ ಮಾಡಿದ ಹಿಂದೆ ಬರೀ ರಾಜಕೀಯ

https://newsfirstlive.com/wp-content/uploads/2024/08/KL-RAHUL-1.jpg

    ಕನ್ನಡಿಗ ಕೆ.ಎಲ್.ರಾಹುಲ್​​​ಗೆ ವಿಶ್ರಾಂತಿನಾ, ಡ್ರಾಪಾ?

    ಒಂದೇ ಒಂದು ಬ್ಯಾಡ್​​​​​ಗೇಮ್​​ಗೆ ಇಂದೆಂಥಾ ಶಿಕ್ಷೆ?

    ರಾಹುಲ್​​ಗಿಂತ ಕಳಪೆಯಾಗಿತ್ತು ಶ್ರೇಯಸ್​-ದುಬೆ ಆಟ

ಕೆ.ಎಲ್.ರಾಹುಲ್ ನಿನ್ನೆ 200ನೇ ಅಂಥಅರಾಷ್ಟ್ರೀಯ ಪಂದ್ಯವನ್ನಾಡುವ ಕನಸು ಕಂಡಿದ್ದರು. ಆ ಕನಸು ಕನಸಾಗಿಯೇ ಉಳಿಯಿತು. 2ನೇ ಪಂದ್ಯದಲ್ಲಿ ಮಾಡಿದ ಒಂದು ತಪ್ಪಿಗೆ ತಂಡದಿಂದಲೇ ಕಿಕ್​ ಔಟ್ ಮಾಡಲಾಯ್ತು. ನಿಜಕ್ಕೂ ರಾಹುಲ್​​​​, ಈ ಶಿಕ್ಷೆಗೆ ಅರ್ಹರಾಗಿದ್ದರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಟೀಮ್ ಇಂಡಿಯಾದ ಫಲಿತಾಂಶಕ್ಕಿಂತ ನಿನ್ನೆ ಹೆಚ್ಚು ಚರ್ಚೆಯಾಗಿದ್ದು, ಕೆ.ಎಲ್.ರಾಹುಲ್​​​​​​​​ ಹೆಸರು.. ಕರ್ನಾಟಕದ ಬ್ಯಾಟ್ಸ್​ಮನ್​​ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡ್ತಾರೆ ಅಂತಾನೇ ಫ್ಯಾನ್ಸ್​ ಭಾವಿಸಿದ್ದರು. ಟಾಸ್ ಸೋಲಿನ ಬಳಿಕ ರೋಹಿತ್ ಹೇಳಿದ ಒಂದು ಮಾತಿನಿಂದ ಫ್ಯಾನ್ಸ್​ಗೆ ಶಾಕ್ ನೀಡಿತ್ತು. ಅದು ಕೆಎಲ್​ ರಾಹುಲ್ ಅವರನ್ನು ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಿರೋ ವಿಚಾರ.

ಇದನ್ನೂ ಓದಿ:ಚಿನ್ನ ಗೆಲ್ಲುವ ಬಗ್ಗೆ ನೀರಜ್ ಚೋಪ್ರಾ ಹೇಳಿದ್ದೇನು..? ಇಂದು ದೊಡ್ಡ ನಿರೀಕ್ಷೆಯಲ್ಲಿ ಭಾರತ..

ಟೀಮ್ ಮ್ಯಾನೇಜ್​​ಮೆಂಟ್​ನ ಈ ನಿರ್ಣಯಕ್ಕೆ ಹರಿಕೆ ಕುರಿಯಾಗಿದ್ದು ಕನ್ನಡಿಗ ಕೆ.ಎಲ್.ರಾಹುಲ್. ಯಾಕಂದ್ರೆ, ಏಕದಿನ ತಂಡದ ಮಿಡಲ್ ಆರ್ಡರ್​ನ ಬಲವಾಗಿದ್ದ ರಾಹುಲ್, ವಿಕೆಟ್ ಕೀಪರ್ ಆಗಿ ಅಲ್ಲದಿದ್ರೂ, ಬ್ಯಾಟ್ಸ್​ಮನ್ ಆಗಿಯಾದ್ರೂ ಪ್ಲೇಯಿಂಗ್​ ಇಲೆವೆನ್​​ನಲ್ಲಿ ಇರಬೇಕಾಗಿತ್ತು. ಆದ್ರೆ, ರಾಹುಲ್​ ಬೆಂಚ್​ಗೆ ಸೀಮಿತವಾಗಿ ಬಿಟ್ರು.

ರಾಹುಲ್​​​ಗೆ ವಿಶ್ರಾಂತಿನಾ, ಡ್ರಾಪಾ?
ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿರುವ ವಿಷ್ಯ. ಕೆ.ಎಲ್.ರಾಹುಲ್​​ಗೆ ​ ವಿಶ್ರಾಂತಿ ನೀಡಿದ್ರಾ? ಅಥವಾ ಡ್ರಾಪ್​ ಮಾಡಿದ್ರಾ? ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. 7 ತಿಂಗಳ ಬಳಿಕ ಏಕದಿನ ಸರಣಿಯನ್ನಾಡ್ತಿದ್ದ ಕನ್ನಡಿಗ ರಾಹುಲ್​, ಲಂಕಾ ಎದುರಿನ ಮೊದಲ 2 ಪಂದ್ಯಗಳಲ್ಲಿ ಇತರರಿಗಿಂತ ಹೀನಾಯ ಪ್ರದರ್ಶನವನ್ನೇನು ನೀಡಿರಲಿಲ್ಲ. 2ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದೇ ತಡ ಬೆಂಚ್​​ಗೆ ಫಿಕ್ಸಾಗಿಬಿಟ್ಟಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್

ಇದು ಟೀಮ್ ಇಂಡಿಯಾಗೆ ಈ ವರ್ಷದ ಕೊನೆ ಏಕದಿನ ಪಂದ್ಯವಾಗಿದೆ. ಇದಾದ ಬಳಿಕ ಈ ವರ್ಷ ಯಾವುದೇ ಒನ್​ ಡೇ ಗೇಮ್​ ಆಡಲ್ಲ. ಹೀಗಾಗಿ ಕೆ.ಎಲ್.ರಾಹುಲ್​​ರನ್ನ ಕೇವಲ ವಿಶ್ರಾಂತಿಯನ್ನ ನೀಡಲಾಗಿದ್ಯಾ? ಅಥವಾ ತಂಡದಿಂದಲೇ ಡ್ರಾಪ್​ ಮಾಡಲಿಗಿದ್ಯಾ ಎಂಬ ಚರ್ಚೆ ನಡೆದಿದೆ.

ರಾಹುಲ್​​ಗಿಂತ ಕಳಪೆಯಾಗಿತ್ತು ಶ್ರೇಯಸ್​-ದುಬೆ ಆಟ
ಲಂಕಾ ಎದುರಿನ 2 ಪಂದ್ಯಗಳನ್ನ ನೋಡಿದ್ರೆ ಶ್ರೇಯಸ್​ ಅಯ್ಯರ್ ಹಾಗೂ ಶಿವಂ ದುಬೆ ಆಟವೂ ಅಷ್ಟಕ್ಕೆ ಅಷ್ಟೇ. ಇವ್ರೇ ಯಾಕೆ..? ವಿರಾಟ್​ ಕೊಹ್ಲಿ ಆಟವೂ ಹೇಳಿಕೊಳ್ಳುವಂತಿರಲಿಲ್ಲ. ಕೆಲ ವರ್ಷಗಳಿಂದ ಕೆ.ಎಲ್.ರಾಹುಲ್, ವಿಶ್ವ ಕ್ರಿಕೆಟ್​ನಲ್ಲೇ ಬೆಸ್ಟ್​ ಮಿಡಲ್ ಆರ್ಡರ್​ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕಳೆದ 5 ವರ್ಷಗಳ ಟ್ರ್ಯಾಕ್ ರೆಕಾರ್ಡ್​ ನೋಡಿದ್ರೆ ಗರಿಷ್ಠ ಮಿಡಲ್ ಆರ್ಡರ್​ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹೀಗಿದ್ರೂ ರಾಹುಲ್​ರನ್ನ 4 ಹಾಗೂ 5ನೇ ಕ್ರಮಾಂಕದ ಬದಲಿಗೆ 6 ಹಾಗೂ 7ನೇ ಕ್ರಮಾಂಕದಲ್ಲಿ ಪ್ರಯೋಗ ಮಾಡಿತ್ತು. ಈ ಪ್ರಯೋಗದಲ್ಲಿ ವೈಫಲ್ಯ ಕಂಡ ರಾಹುಲ್​ನ ಬೆಂಚ್​​ಗೆ ಫಿಕ್ಸ್​ ಮಾಡಲಾಗಿದೆ.

ಗೆಲುವಿನ ಅವಶ್ಯಕತೆಗಾಗಿ ರಾಹುಲ್​​​​​​ನ ಕೈಬಿಟ್ರಾ?
ಮೊದಲ ಪಂದ್ಯವನ್ನ ಗೆಲುವಿನ ಅಂಚಿನಲ್ಲಿ ಎಡವಿದ್ದ ಟೀಮ್ ಇಂಡಿಯಾ, 2ನೇ ಪಂದ್ಯವನ್ನ ಸ್ವಯಃಕೃತ ಅಪರಾಧದಿಂದ ಕೈಚೆಲ್ಲಿತ್ತು. ಸ್ಪಿನ್ ಫ್ರೆಂಡ್ಲಿ ಪಿಚ್​​ನಲ್ಲಿ ಹೆಚ್ಚುವರಿ ಸ್ಪಿನ್ನರ್​​ನ ಕಡೆಗಣಿಸಿದ್ದು ಕೂಡ ಕಾರಣವಾಗಿತ್ತು. ಸರಣಿ ಟೈ ಮಾಡಿಕೊಳ್ಳಬೇಕು, ಹೀಗಾಗಿಯೇ ಕೊನೆ ಪಂದ್ಯವನ್ನ ಗೆಲ್ಲಬೇಕೆಂಬ ಉದ್ದೇಶದಿಂದಲೇ ಕನ್ನಡಿಗ ರಾಹುಲ್​​ನ ಕೈ ಬಿಟ್ಟು, ಪಂತ್​​ಗೆ ಚಾನ್ಸ್ ನೀಡಲಾಯ್ತು ಎನ್ನಲಾಗ್ತಿದೆ. ಚಾನ್ಸ್​ ಗಿಟ್ಟಿಸಿಕೊಂಡ ಪಂತ್​ ಕಡಿದು ಗುಡ್ಡೇ ಹಾಕಿದ್ದು ಏನೂ ಇಲ್ಲ.. ಜಸ್ಟ್​​ 6 ರನ್​ಗಳಿಸಿ ಔಟಾದ್ರು.

ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್​ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?

ಸ್ಪಿನ್ ಟ್ರ್ಯಾಕ್​​ಗಳಲ್ಲಿ ಪಂತ್ ಕೌಂಟರ್ ಅಟ್ಯಾಕ್ ಮಾಡ್ತಾರೆ. ಪಂದ್ಯವನ್ನು ಟರ್ನ್​ ಮಾಡ್ತಾರೆ ನಿಜ. ಸ್ಪಿನ್ ಫ್ರೆಂಡ್ಲಿಯಲ್ಲಿ ಬಿಗ್ ಇನ್ನಿಂಗ್ಸ್​ ಕಟ್ಟುವ ತಾಕತ್ತು ರಾಹುಲ್​ಗೂ ಇದೆ. ಮಿಡಲ್ ಆರ್ಡರ್​ನಲ್ಲಿ ರಾಹುಲ್​​​​​, 62ರ ಅವರೇಜ್​​ನಲ್ಲಿ ಬ್ಯಾಟಿಂಗ್ ನಡೆಸಿದ್ರೆ, ರಿಷಭ್ ಪಂತ್ ಅವರೇಜ್ 36 ಮಾತ್ರವೇ ಆಗಿದೆ. ರಾಹುಲ್​ ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಿರೋದನ್ನ ವಿಶ್ವಕಪ್​ನಂಥಹ ಬಿಗ್ ಸ್ಟೇಜ್​ಗಳಲ್ಲೂ ನೋಡಿದ್ದೇವೆ. ಈ ಹೊರತಾಗಿಯೂ ರಾಹುಲ್​​ನ ಬೆಂಚ್​ಗೆ ಸಿಮೀತವಾಗಿಸಿರೋದು ನಿಜಕ್ಕೂ ಆಟಗಾರನ ಅಭದ್ರತೆ ಸೃಷ್ಟಿಸುವ ಸಂದೇಶದಂತೆ ಕಾಣ್ತಿದೆ.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ; ಬ್ರಿಜ್ ಭೂಷಣ್​ರ ಇಬ್ಬರು ಮಕ್ಕಳಿಂದ ಅಚ್ಚರಿಯ ಪ್ರತಿಕ್ರಿಯೆ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More