ಇಂದು ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಕೊನೆ ಟಿ20 ಪಂದ್ಯ
ಈ ಬೆನ್ನಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರೋ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ..!
ಇಂದು ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಕೊನೆ ಟಿ20 ಪಂದ್ಯ. ಇದಾದ ಬೆನ್ನಲ್ಲೇ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸೆಲೆಕ್ಷನ್ ಕಮಿಟಿ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಲು ಭರ್ಜರಿ ಸರ್ಕಸ್ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಎರಡು ಸರಣಿಗೂ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯ ಇದೆ.
ಇನ್ನು, ಟೀಮ್ ಇಂಡಿಯಾ ಕ್ಯಾಪ್ಟನ್ ಆಗಲು ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ರೇಸ್ನಲ್ಲಿ ಇದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಬುಮ್ರಾ ಹಾಗೆಯೇ ಹಾರ್ದಿಕ್ ಪಾಂಡ್ಯ ಕೂಡ ಶ್ರೀಲಂಕಾ ಸೀರೀಸ್ನಿಂದ ರೆಸ್ಟ್ ಪಡೆಯೋ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ರೆಸ್ಟ್ ತೆಗೆದುಕೊಂಡರೆ ಕೆ.ಎಲ್ ರಾಹುಲ್ಗೆ ಜಾಕ್ಪಾಟ್ ಹೊಡೆಯಲಿದೆ.
ಜುಲೈ 27ನೇ ತಾರೀಕಿನಿಂದ ಶ್ರೀಲಂಕಾ ವಿರುದ್ಧ ಟಿ20 ಶರಣಿ ಶುರುವಾಗಲಿದೆ. ಟಿ20 ಸರಣಿ ಬಳಿಕ ಏಕದಿನ ಸೀರೀಸ್ ಇರಲಿದೆ. ಈಗ ಹಾರ್ದಿಕ್ ಪಾಂಡ್ಯ ರೆಸ್ಟ್ ತೆಗೆದುಕೊಂಡ್ರೆ ಟೀಮ್ ಇಂಡಿಯಾಗೆ ಇರೋ ಒಂದೇ ಒಂದು ಆಯ್ಕೆ ಕೆ.ಎಲ್ ರಾಹುಲ್. ಹಾಗಾಗಿ ಕೆ.ಎಲ್ ರಾಹುಲ್ ಟೀಮ್ ಇಂಡಿಯಾವನ್ನು ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಲೀಡ್ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 180 ಕ್ಯಾರೆಟ್ ಡೈಮಂಡ್.. ನೀತಾ ಅಂಬಾನಿ ನೆಕ್ಲೆಸ್ ರೆಡಿ ಮಾಡಲು ಎಷ್ಟು ದಿನ? ಎಷ್ಟು ಸಾವಿರ ಗಂಟೆ ಬೇಕಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂದು ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಕೊನೆ ಟಿ20 ಪಂದ್ಯ
ಈ ಬೆನ್ನಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರೋ ಟೀಮ್ ಇಂಡಿಯಾ
ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರು ಅನ್ನೋ ಚರ್ಚೆ..!
ಇಂದು ಜಿಂಬಾಬ್ವೆ ವಿರುದ್ಧ ಟೀಮ್ ಇಂಡಿಯಾಗೆ ಕೊನೆ ಟಿ20 ಪಂದ್ಯ. ಇದಾದ ಬೆನ್ನಲ್ಲೇ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಸೆಲೆಕ್ಷನ್ ಕಮಿಟಿ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಸ್ಟಾರ್ ಆಟಗಾರರನ್ನು ಆಯ್ಕೆ ಮಾಡಲು ಭರ್ಜರಿ ಸರ್ಕಸ್ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಎರಡು ಸರಣಿಗೂ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯ ಇದೆ.
ಇನ್ನು, ಟೀಮ್ ಇಂಡಿಯಾ ಕ್ಯಾಪ್ಟನ್ ಆಗಲು ಕೆ.ಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ರೇಸ್ನಲ್ಲಿ ಇದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಬುಮ್ರಾ ಹಾಗೆಯೇ ಹಾರ್ದಿಕ್ ಪಾಂಡ್ಯ ಕೂಡ ಶ್ರೀಲಂಕಾ ಸೀರೀಸ್ನಿಂದ ರೆಸ್ಟ್ ಪಡೆಯೋ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ರೆಸ್ಟ್ ತೆಗೆದುಕೊಂಡರೆ ಕೆ.ಎಲ್ ರಾಹುಲ್ಗೆ ಜಾಕ್ಪಾಟ್ ಹೊಡೆಯಲಿದೆ.
ಜುಲೈ 27ನೇ ತಾರೀಕಿನಿಂದ ಶ್ರೀಲಂಕಾ ವಿರುದ್ಧ ಟಿ20 ಶರಣಿ ಶುರುವಾಗಲಿದೆ. ಟಿ20 ಸರಣಿ ಬಳಿಕ ಏಕದಿನ ಸೀರೀಸ್ ಇರಲಿದೆ. ಈಗ ಹಾರ್ದಿಕ್ ಪಾಂಡ್ಯ ರೆಸ್ಟ್ ತೆಗೆದುಕೊಂಡ್ರೆ ಟೀಮ್ ಇಂಡಿಯಾಗೆ ಇರೋ ಒಂದೇ ಒಂದು ಆಯ್ಕೆ ಕೆ.ಎಲ್ ರಾಹುಲ್. ಹಾಗಾಗಿ ಕೆ.ಎಲ್ ರಾಹುಲ್ ಟೀಮ್ ಇಂಡಿಯಾವನ್ನು ಟಿ20 ಮತ್ತು ಏಕದಿನ ಕ್ರಿಕೆಟ್ನಲ್ಲಿ ಲೀಡ್ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 180 ಕ್ಯಾರೆಟ್ ಡೈಮಂಡ್.. ನೀತಾ ಅಂಬಾನಿ ನೆಕ್ಲೆಸ್ ರೆಡಿ ಮಾಡಲು ಎಷ್ಟು ದಿನ? ಎಷ್ಟು ಸಾವಿರ ಗಂಟೆ ಬೇಕಾಯ್ತು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ