/newsfirstlive-kannada/media/post_attachments/wp-content/uploads/2024/12/KL_RAHUL-7.jpg)
ಪರ್ತ್ ಗೆದ್ದ ಟೀಮ್ ಇಂಡಿಯಾ, ಅಡಿಲೇಡ್ನಲ್ಲಿ ಹೀನಾಯ ಮುಖಭಂಗ ಅನುಭವಿಸಿತ್ತು. ಬ್ರಿಸ್ಬೇನ್ ಟೆಸ್ಟ್ನಲ್ಲಿ ಸೋಲಿನಿಂದ ಪಾರಾದ ಟೀಮ್ ಇಂಡಿಯಾದ ಫೋಕಸ್ ಈಗ ಮೆಲ್ಬರ್ನ್ ಮೇಲೆ ಶಿಫ್ಟ್ ಆಗಿದೆ. ಶತಯಾ ಗತಯಾ ಗೆಲ್ಲೋಕೆ ಪಣ ತೊಟ್ಟಿರುವ ಭಾರತದ ಕಲಿಗಳು, ಮೆಲ್ಬರ್ನ್ ಕೋಟೆ ವಶ ಪಡಿಸಿಕೊಳ್ಳಲು ರಣತಂತ್ರ ಎಣೆಯುತ್ತಿದೆ.
ಮೆಲ್ಬರ್ನ್ ಗೆಲುವಿಗಾಗಿ ತೆರೆ ಹಿಂದೆ ನಡೀತಿದೆ ರಣತಂತ್ರ..!
ಪರ್ತ್, ಅಡಿಲೇಡ್ ಆಯ್ತು. ಬ್ರಿಸ್ಬೇನ್ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡಿರುವ ಟೀಮ್ ಇಂಡಿಯಾದ ಚಿತ್ತ ಈಗ ಮೆಲ್ಬರ್ನ್ ಟೆಸ್ಟ್ನತ್ತ ನೆಟ್ಟಿದೆ. ಬ್ಯಾಟಿಂಗ್, ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಗ್ಯಾಂಗ್, ಮೆಲ್ಬರ್ನ್ನಲ್ಲಿ ಮೆರೆದಾಡಲು ಸಿಕ್ರೇಟ್ ಗೇಮ್ ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ರೂಪಿಸಿದೆ. 2014ರಿಂದ ಮೆಲ್ಬರ್ನ್ನಲ್ಲಿ ಸೋಲನ್ನೇ ಅರಿಯದ ಟೀಮ್ ಇಂಡಿಯಾ, ಇದೀಗ ಅದೇ ಇತಿಹಾಸವನ್ನೇ ಪನರಾವರ್ತಿಸುವ ಕನಸಿನಲ್ಲಿದೆ. ಅಷ್ಟೇ ಅಲ್ಲ.! ಮೆಲ್ಬರ್ನ್ ಗೆಲುನೊಂದಿಗೆ ಸರಣಿ ಮೇಲೆ ಬಿಗಿ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿದೆ.
ಸ್ಟ್ರಿಕ್ಟ್ ಪ್ರಾಕ್ಟೀಸ್.. ನೋ ರೆಸ್ಟ್ & ನೋ ಸ್ಕಿಪ್..!
ಅಡಿಲೇಡ್ ಹಾಗೂ ಬ್ರಿಸ್ಬೇನ್ನಲ್ಲಿ ಸೋತಿದ್ದೆ ಸೋತಿದ್ದು, ಟೀಮ್ ಇಂಡಿಯಾದ ಥಿಂಕ್ ಟ್ಯಾಕ್ಗಳು ಬುದ್ಧಿ ಕಲಿತಿದ್ದಾರೆ. ಮೆಲ್ಬರ್ನ್ಗೆ ಆಗಮಿಸಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸ್ತಿದ್ದಾರೆ. ಯಾವುದೇ ಕಾರಣಕ್ಕೂ ನೆಟ್ಸ್ ಸೆಷನ್ ಸ್ಕಿಪ್ ಮಾಡದಂತೆ ಕಟ್ಟೆಚ್ಚರಿಕೆ ನೀಡಿದ್ದಾರೆ. ಪ್ರ್ಯಾಕ್ಟೀಸ್ ಫಸ್ಟ್ ಅನ್ನೋ ಮಾನದಂಡದಲ್ಲೇ ಬೆವರಿಳಿಸುತ್ತಿರುವ ಆಟಗಾರರು, ಮೆಲ್ಬರ್ನ್ನ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.
ಮತ್ತೆ ರೋಹಿತ್ ಶರ್ಮಾನೇ ಓಪನರ್..!
ಪರ್ತ್, ಅಡಿಲೇಡ್, ಬ್ರಿಸ್ಬೇನ್ ಟೆಸ್ಟ್ನಲ್ಲಿ ಆರಂಭಿಕರಾಗಿದ್ದ ಜೈಸ್ವಾಲ್, ಕೆ.ಎಲ್.ರಾಹುಲ್, ಮೆಲ್ಬರ್ನ್ನಲ್ಲಿ ಜೊತೆಯಾಗಿನ ಕಣಕ್ಕಿಳಿಯೋದು ಡೌಟ್. ಯಾಕಂದ್ರೆ, ಕೆ.ಎಲ್.ರಾಹುಲ್ಗೆ ಸ್ಥಾನ ತ್ಯಾಗ ಮಾಡಿ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋಹಿತ್, ಅಟ್ಟರ್ ಫ್ಲಾಫ್ ಪರ್ಫಾಮೆನ್ಸ್ ನೀಡಿದ್ದಾರೆ. ಈ ಕಾರಣಕ್ಕೆ ರೋಹಿತ್ರನ್ನ ಮತ್ತೆ ಆರಂಭಿಕನಾಗಿ ಕಣಕ್ಕಿಳಿಸಲು ಮುಂದಾಗಿದೆ.
6ನೇ ಕ್ರಮಾಂಕಕ್ಕೆ ಕೆ.ಎಲ್.ರಾಹುಲ್ ಶಿಫ್ಟ್..!
ರೋಹಿತ್ ಶರ್ಮಾರ ಮತ್ತೆ ಆರಂಭಿಕನಾಗಿ ಪ್ರಮೋಟ್ ಮಾಡಲು ಮುಂದಾಗಿರುವ ಮ್ಯಾನೇಜ್ಮೆಂಟ್, ಕೆ.ಎಲ್.ರಾಹುಲ್ಗೆ 6ನೇ ಕ್ರಮಾಂಕದ ಜವಾಬ್ದಾರಿ ನೀಡಲು ಚಿಂತನೆ ನಡೆಸಿದೆ. ಇದಕ್ಕೆ ಕಾರಣ ಕೆ.ಎಲ್.ರಾಹುಲ್ ಆರಂಭಿಕನಾಗಿ ಬೆಸ್ಟ್ ನೀಡಲಿಲ್ಲ ಎಂಬುವುದು ಅಲ್ಲ. ಉತ್ತಮ ಟಚ್ನಲ್ಲಿರುವ ಕೆ.ಎಲ್.ರಾಹುಲ್, ರಿಷಭ್ ಪಂತ್, ನಿತಿಶ್ ಕುಮಾರ್ ರೆಡ್ಡಿ ಜೊತೆ ಸೇರಿ ಬಿಗ್ ಇನ್ನಿಂಗ್ಸ್ ಕಟ್ಟಬಲ್ಲರು. ಅವಶ್ಯಕತೆ ಬಿದ್ದರೆ, ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ತಡೆಗೋಡೆಯಾಗಿ ನಿಲ್ಲುತ್ತಾರೆ ಅನ್ನೋ ನಂಬಿಕೆ.
ಜಡೇಜಾ ಔಟ್.. ಸುಂದರ್ ಬ್ಯಾಕ್..?
ಪರ್ತ್ ಟೆಸ್ಟ್ ಬಳಿಕ ವಾಷಿಂಗ್ಟನ್ ಸುಂದರ್ಗೆ ಕೊಕ್ ನೀಡಿದ್ದ ಮ್ಯಾನೇಜ್ಮೆಂಟ್, ಮೆಲ್ಬರ್ನ್ನಲ್ಲಿ ಮತ್ತೆ ಕಣಕ್ಕಿಳಿಸುವ ಚಾನ್ಸ್ ಇದೆ. ಇದಕ್ಕೆ ಕಾರಣ ಎದುರಾಳಿ ಪಡೆಯಲ್ಲಿನ ಲೆಫ್ಟಿ ಬ್ಯಾಟರ್ಗಳ ಥ್ರೆಟ್.. ಈಗಾಗಲೇ ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿ, ಟ್ರಾವಿಸ್ ಹೆಡ್ ಇನಿಲ್ಲದ ಕಾಟ ನೀಡ್ತಿದ್ದಾರೆ. ಈ ಕಾರಣಕ್ಕೆ ಜಡೇಜಾಗೆ ಬೆಂಚ್ ಕಾಯಿಸಿ ಸುಂದರ್ಗೆ ಬುಲಾವ್ ನೀಡುವ ಪ್ಲಾನ್ನಲ್ಲಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲೂ RCB ಫ್ಯಾನ್ಸ್.. ವಿರಾಟ್ ಕೊಹ್ಲಿ ಜೊತೆ ಜೆರ್ಸಿ ಧರಿಸಿ ಯುವತಿ ಕ್ಯೂಟ್ ಫೋಟೋ
ವೇಗಿ ಪ್ರಸಿದ್ಧ್ ಕೃಷ್ಣನ ಬೇಟೆಗಿಳಿಸುವ ಪ್ಲಾನ್..!
ಬೂಮ್ರಾಗೆ ಸೂಕ್ತ ಪಾರ್ಟ್ನರ್ ಸಿಕ್ಕಿಲ್ಲ. ಇದು ಸಹಜವಾಗೇ ಟೀಮ್ ಮ್ಯಾನೇಜ್ಮೆಂಟ್ ತಲೆನೋವು ಹೆಚ್ಚಿಸಿದೆ. ಸಿರಾಜ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹರ್ಷಿತ್ ರಾಣಾ ಬದಲಿಗೆ ಬ್ರಿಸ್ಬೇನ್ನಲ್ಲಿ ಕಣಕ್ಕಿಳಿದ ಆಕಾಶ್ ದೀಪ್ ಡಿಸೆಂಟ್ ಆಟವಾಡಿದ್ದಾರೆ. ಹೀಗಾಗಿ ಸಿರಾಜ್ ಬದಲಿಗೆ ಅಭ್ಯಾಸ ಪಂದ್ಯಗಳಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿರುವ ಪ್ರಸಿದ್ಧ್, ಬೇಟೆಗೆ ಇಳಿಸುವ ಚಿಂತನೆಯನ್ನು ನಡೆಸಿದೆ.
ಮೆಲ್ಬರ್ನ್ನಲ್ಲಿ ಕಾಂಗರೂಗಳ ಎಡೆಮುರಿ ಕಟ್ಟಲು ತಯಾರಿ ನಡೆಸ್ತಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್ ಚಾಂಪಿಯನ್ ಶಿಫ್ ಫೈನಲ್ ದೃಷ್ಟಿಯಿಂದ ಗೆಲ್ಲುವ ಒತ್ತಡದಲ್ಲಿದೆ. ಇದಕ್ಕಾಗಿ ಟಫ್ ಕಾಲ್ಸ್ ತೆಗೆದುಕೊಳ್ಳುತ್ತಿರುವ ಮ್ಯಾನೇಜ್ಮೆಂಟ್, ಎಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ