/newsfirstlive-kannada/media/post_attachments/wp-content/uploads/2025/06/RISHABH_PANT_100.jpg)
ಲೀಡ್ಸ್ ಟೆಸ್ಟ್ ಮುಗೀತು. ಬ್ಯಾಟರ್ಗಳ ದರ್ಬಾರ್ ಜೋರಾಗಿತ್ತು. ಬೂಮ್ರಾ ಬೆಂಕಿ ಪರ್ಫಾಮೆನ್ಸ್ ನೀಡಿದರು. ಇದೆಲ್ಲ ಓಕೆ. ಆದ್ರೆ, ಇವರ ಪರ್ಫಾಮೆನ್ಸ್ ನೋಡಿ ಖುಷಿಪಡಬೇಕೋ, ಇಲ್ಲ ಅವರ ಆಟ ನೋಡಿ ಏನಯ್ಯಾ ಈ ಆಟ ಅಂತ ಕೊರಗಬೇಕೋ ನಿಜಕ್ಕೂ ಅರ್ಥವಾಗ್ತಿಲ್ಲ. ಅದ್ಯಾಕೆ ಈ ಮಾತು ಅಂತೀರಾ.?
ಲೀಡ್ಸ್ ಟೆಸ್ಟ್ ಟೀಮ್ ಇಂಡಿಯಾ ಪಾಲಿಗೆ ಎಂದೆಂದಿಗೂ ಮರೆಯಲಾಗದ ಪಂದ್ಯ. ಇಲ್ಲಿ ಅಕ್ಷರಶಃ ನಡೆದಿದ್ದು ಟೀಮ್ ಇಂಡಿಯಾ ಬ್ಯಾಟರ್ಗಳ ಪಾರಮ್ಯ. ಟೀಮ್ ಇಂಡಿಯಾ ಬ್ಯಾಟರ್ಗಳು ಸರಾಗವಾಗಿ ಗಳಿಸುತ್ತಿದ್ದ ರನ್, ಎದುರಾಳಿ ನಾಯಕ ಬೆನ್ ಸ್ಟೋಕ್ಸ್ಗೆ ಹೊಟ್ಟೆಯಲ್ಲಿ ಹುಳ ಬಿಟ್ಟಂತಿತ್ತು. ಪ್ರತಿ ಬೌಂಡರಿಗೆ ಮುಖ ಬಾಡುತ್ತಿತ್ತು. ಪ್ರಸ್ಟ್ರೇಷನ್ನಲ್ಲಿ ಲೀಡ್ಸ್ ಟೆಸ್ಟ್ ಸೋಲು ಗ್ಯಾರಂಟಿ ಎಂಬ ಲೆಕ್ಕಾಚಾರಕ್ಕೆ ಬಂದಿದ್ದರು. ಹೀಗಾದ್ರೂ ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಚಿಂತೆ ಕಾಡ್ತಿದೆ.
5 ಶತಕ.. ಫ್ಯಾನ್ಸ್ ಖುಷ್.. ಕ್ಯಾಂಪ್ನಲ್ಲಿ ಇಲ್ಲ ನೆಮ್ಮದಿ..!
ಇದು ಸದ್ಯ ಟೀಮ್ ಇಂಡಿಯಾ ಪರಿಸ್ಥಿತಿ. ಯಾಕಂದ್ರೆ, ಲೀಡ್ಸ್ನಲ್ಲಿ ಕೆ.ಎಲ್.ರಾಹುಲ್, ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ರಿಷಭ್ ಪಂತ್ ಆಟಕ್ಕೆ ಬಹುಪರಾಕ್ ಹೇಳ್ತಿದ್ದಾರೆ. ಇಂಗ್ಲೆಂಡ್ ಬ್ಯಾಟರ್ಗಳಿಗೆ , ಬ್ಯಾಟಿಂಗ್ ಪಾಠ ಕಲಿಸಿದ ಈ ನಾಲ್ವರ ಶತಕಕ್ಕೆ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಆದ್ರೆ, ಇನ್ನುಳಿದ 6 ಮಂದಿ ಆಟ ಆಕ್ಷರಶಃ ನಿದ್ದೆಗೆಡಿಸಿದೆ. ಇದಕ್ಕೆ ಕಾರಣ ಲೀಡ್ಸ್ ಟೆಸ್ಟ್ನಲ್ಲಿ ಮಿಡಲ್ ಆರ್ಡರ್ ಆ್ಯಂಡ್ ಲೋವರ್ ಆರ್ಡರ್ನ ಆಟ.
ಫಸ್ಟ್ ಇನ್ನಿಂಗ್ಸ್ 430 ರನ್ಗೆ 3 ವಿಕೆಟ್.. 471ಕ್ಕೆ ಆಲೌಟ್.!
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಸುಲಭಕ್ಕೆ 600 ಪ್ಲಸ್ ರನ್ ಗಳಿಸಬಹುದಿತ್ತು. ಯಾಕಂದ್ರೆ, ಒಂದು ಹಂತದಲ್ಲಿ 430 ರನ್ಗಳಿಗೆ ಕೇವಲ 3 ವಿಕೆಟ್ ಕಳೆದುಕೊಂಡಿತಷ್ಟೇ. ಆದ್ರೆ, ಯಾವಾಗ ಶುಭ್ಮನ್ ವಿಕೆಟ್ ಕಳೆದುಕೊಂಡಿದ್ದೇ ತಡ. ಪವಿಲಿಯನ್ ಪರೇಡ್ ಶುರುವಾಯ್ತು. ಈ ಪೆವಿಲಿಯನ್ ಪರೇಡ್ ಯಾವ ಮಟ್ಟಕ್ಕಿಂತು ಅಂದ್ರೆ, ಕೇವಲ 41 ರನ್ಗಳ ಅಂತರಕ್ಕೆ 7 ವಿಕೆಟ್ ಕಳೆದುಕೊಳ್ತು.
333ಕ್ಕೆ 4 ವಿಕೆಟ್.. 364ಕ್ಕೆ ಆಲೌಟ್.. 31 ರನ್ಗೆ 6
ಫಸ್ಟ್ ಇನ್ನಿಂಗ್ಸ್ ಏನೋ ತಪ್ಪಾಯ್ತು. 2ನೇ ಇನ್ನಿಂಗ್ಸ್ನಲ್ಲಾದರೂ ತಪ್ಪು ತಿದ್ದಿಕೊಳ್ತಾರೆ ಅಂದ್ರೆ, ಆ ಮಹಾನುಭಾವರು ಮಾಡಿದ್ದು ಘನಘೋರ. ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಕೈಚೆಲ್ಲಿದ್ದೇ ತಡ ರನ್ನಿಂಗ್ ರೇಸ್ ಶುರುವಾಯ್ತು. ಅದು ಯಾವ ಮಟ್ಟಕಂದ್ರೆ, ಒಂದು ಹಂತದಲ್ಲಿ 333 ರನ್ಗೆ ಜಸ್ಟ್ 4 ವಿಕೆಟ್ ಕಳೆದುಕೊಂಡಿದ್ದ ಇಂಡಿಯಾ, ಜಸ್ಟ್ 31 ರನ್ಗೆ 6 ವಿಕೆಟ್ ಕಳೆದುಕೊಂಡು 364 ರನ್ಗೆ ಆಲೌಟ್ ಆಯಿತು.
ಇದನ್ನೂ ಓದಿ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ.. ಈ ಪ್ರವಾಸಿ ತಾಣಗಳಿಗೆ ನಿರ್ಬಂಧ
6 ಮಂದಿ ಬ್ಯಾಟರ್ಸ್ ಸೇರಿ ದಾಟಲಿಲ್ಲ ಮೂರಂಕಿ..!
ಲೀಡ್ಸ್ನಲ್ಲಿ ಟೀಮ್ ಇಂಡಿಯಾ ಕೈ ಹಿಡಿದಿದ್ದು ಟಾಪ್-5 ಬ್ಯಾಟರ್ಸ್. ಪ್ರಮುಖವಾಗಿ ಕೆ.ಎಲ್.ರಾಹುಲ್, ರಿಷಭ್ ಪಂತ್ ಎರಡೂ ಇನ್ನಿಂಗ್ಸ್ ಕೈಹಿಡಿದ್ರೆ. ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್ ಮೊದಲ ಇನ್ನಿಂಗ್ಸ್ ಶತಕ ದಾಖಲಿಸಿ ನೆರವಾದರು. ಅಕಸ್ಮಾತ್ ಈ ಟಾಪ್-5 ಬ್ಯಾಟರ್ಸ್ ಕೈ ಹಿಡಿದಿಲ್ಲ ಅಂದಿದ್ರೆ. ಟೀಮ್ ಇಂಡಿಯಾ ಸ್ಥಿತಿ ಅದೋಗತಿ. ಯಾಕಂದ್ರೆ, ಈ ಐವರಿಂದ 721 ರನ್ ಅರಿದು ಬಂದ್ರೆ. ಇನ್ನುಳಿದ 6 ಮಂದಿಯಿಂದ ದಾಖಲಾದ ಒಟ್ಟು ರನ್ 65 ರನ್ ಮಾತ್ರ.
ಸುಧಾರಿಸಬೇಕು ಟೀಮ್ ಇಂಡಿಯಾ ಬ್ಯಾಟಿಂಗ್..!
ಲೀಡ್ಸ್ನ ಬ್ಯಾಟಿಂಗ್ ಪಿಚ್ನಲ್ಲೇ ಸಾಯಿ ಸುದರ್ಶನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ರನ್ ಗಳಿಸಲು ಪರದಾಡಿದ್ದಾರೆ. ಇನ್ ಎಕ್ಸ್ಪಿರಿಯನ್ಸ್ ಬೌಲರ್ಗಳ ಎದುರೇ ಇವರು ವೈಫಲ್ಯ ಇವರಿಗೆ ಮುಂದೆ ಬಿಗೆಸ್ಟ್ ಚಾಲೆಂಜ್ ಎದುರಾಗಲಿದೆ. ಯಾಕಂದ್ರೆ, ಮುಂದಿನ ಪಂದ್ಯಗಳನ್ನಾಡುವುದು ಬರ್ಮಿಂಗ್ಯಾಮ್, ಲಾರ್ಡ್ಸ್, ಮ್ಯಾನ್ಚೆಸ್ಟರ್, ಓವಲ್ನಂಥ ಟಫ್ ಕಂಡೀಷನ್ಸ್ನಲ್ಲಾಗಿದೆ. ಹೀಗಾಗಿ ಲೀಡ್ಸ್ನಂಥ ಬ್ಯಾಟಿಂಗ್ ಫ್ರೆಂಡ್ಲಿಯಲ್ಲೇ ತಡಕಾಡಿದವರು, ಮುಂದೆ ಕಮ್ಬ್ಯಾಕ್ ಮಾಡಿದ್ರೆ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿವುದು ಗ್ಯಾರಂಟಿ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ