ಆಕ್ಷನ್​ಗೆ ಮುನ್ನ ಆರ್​​​ಸಿಬಿಗೆ ಬಿಗ್​ ಆಫರ್​ ಕೊಟ್ಟ KL ರಾಹುಲ್​​​; ಬೆಂಗಳೂರು ಸೇರೋ ಬಗ್ಗೆ ಏನಂದ್ರು?

author-image
Ganesh Nachikethu
Updated On
ಆಕ್ಷನ್​ಗೆ ಮುನ್ನ ಆರ್​​​ಸಿಬಿಗೆ ಬಿಗ್​ ಆಫರ್​ ಕೊಟ್ಟ KL ರಾಹುಲ್​​​; ಬೆಂಗಳೂರು ಸೇರೋ ಬಗ್ಗೆ ಏನಂದ್ರು?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಭರ್ಜರಿ ತಯಾರಿ
  • ಐಪಿಎಲ್​ 2025ರ ಮೆಗಾ ಆಕ್ಷನ್​​ನಲ್ಲಿ ರಾಹುಲ್​ ಖರೀದಿಗೆ ಮಾಸ್ಟರ್​ ಪ್ಲಾನ್​..!
  • ಸ್ಟಾರ್​​ ವಿಕೆಟ್​​ ಕೀಪರ್​​ ಕೆ.ಎಲ್​ ರಾಹುಲ್​ ಅವರಿಗೆ ಆರ್​​ಸಿಬಿ ಟೀಮ್​​ ಮಣೆ

ಇತ್ತೀಚೆಗೆ ಲಕ್ನೋ ಸೂಪರ್​ ಜೈಂಟ್ಸ್​ ತಂಡ ತೊರೆದ ಕೆ.ಎಲ್​ ರಾಹುಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರೋ ವಿಚಾರ. ಈ ಮಧ್ಯೆ ಆರ್​​ಸಿಬಿ ತಂಡ ಸೇರೋ ಸ್ಫೋಟಕ ಸುಳಿವು ಕನ್ನಡಿಗ ಕೆ.ಎಲ್​​ ರಾಹುಲ್​ ಕೊಟ್ಟಿದ್ದಾರೆ.

ಕೆ.ಎಲ್​ ರಾಹುಲ್​​ ಏನಂದ್ರು?

ಈ ಬಗ್ಗೆ ಮಾತಾಡಿರೋ ಕೆ.ಎಲ್​ ರಾಹುಲ್​​, ಆರ್​​​ಸಿಬಿ ಬೆಂಗಳೂರು ಫ್ರಾಂಚೈಸಿ. ನಾನು ಬೆಂಗಳೂರು ಹುಡುಗ. ಎಲ್ಲರೂ ನನ್ನ ಲೋಕಲ್​ ಬಾಯ್​ ಎಂದು ಕರೆಯುತ್ತಾರೆ. 2016 ರಲ್ಲಿ ಆರ್​​​ಸಿಬಿ ಪರ ಆಡಿದ್ದು, ಬಹಳ ಖುಷಿ ತಂದಿತ್ತು. ಮತ್ತೆ ಆರ್​​ಸಿಬಿ ಸೇರೋ ಆಸೆ ಇದೆ. ಆದರೆ, ಆಕ್ಷನ್​​ನಲ್ಲಿ ಏನಾಗುತ್ತೋ ಕಾದು ನೋಡಬೇಕು ಎಂದರು.

2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತನ್ನ ರೀಟೈನ್​ ಲಿಸ್ಟ್​​ ರಿಲೀಸ್​ ಮಾಡಿದೆ. ಆರ್​​​ಸಿಬಿ ಟೀಮ್​​​ ಮೊದಲು ರೀಟೈನ್​ ಮಾಡಿಕೊಂಡಿದ್ದು ವಿರಾಟ್​​ ಕೊಹ್ಲಿ. 2ನೇ ಆಯ್ಕೆ ರಜತ್​ ಪಾಟಿದಾರ್​​ ಮತ್ತು 3ನೇ ಆಯ್ಕೆಯಾಗಿ ಯಶ್​ ದಯಾಳ್​​ ಅವರನ್ನು ಉಳಿಸಿಕೊಂಡಿದೆ.

ಆರ್​​ಸಿಬಿ ತಂಡ ವಿರಾಟ್​ ಕೊಹ್ಲಿ ಅವರಿಗೆ ಬರೋಬ್ಬರಿ 21 ಕೋಟಿ ನೀಡಿ ಉಳಿಸಿಕೊಂಡಿದೆ. ರಜತ್​ ಪಾಟಿದಾರ್​ ಅವರಿಗೆ 11 ಕೋಟಿ ಮತ್ತು ಯಶ್​ ದಯಾಳ್​ ಅವರಿಗೆ 5 ಕೋಟಿ ನೀಡಿ ರೀಟೈನ್​ ಮಾಡಿಕೊಳ್ಳಲಾಗಿದೆ. ಈ ಮೂವರಿಗಾಗಿ ಆರ್​​ಸಿಬಿ ಸುಮಾರು 37 ಕೋಟಿ ಖರ್ಚು ಮಾಡಿದೆ.

ಬೆಂಗಳೂರು ಪ್ಲಾನ್ ಏನು?​

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆ ಡಿಸೆಂಬರ್​ನಲ್ಲಿ ನಡೆಯಲಿರೋ 2025ರ ಐಪಿಎಲ್​​​​ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು ಎಂಬುದು ಆರ್​​ಸಿಬಿ ಪ್ಲಾನ್​​.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment