newsfirstkannada.com

SSLC ವಿದ್ಯಾರ್ಥಿನಿ ಹತ್ಯೆ ಕೇಸ್​ಗೆ ಟ್ವಿಸ್ಟ್​​.. ಕೊಂದಿದ್ದು ಹೇಗೆ ಎಂದು ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಹಂತಕ!

Share :

Published May 11, 2024 at 5:42pm

Update May 11, 2024 at 5:44pm

    SSLC ವಿದ್ಯಾರ್ಥಿನಿ ತಲೆ ಕತ್ತರಿಸಿ ಕೊಂದಿದ್ದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್

    ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕಾಶ ಪೊಲೀಸ್ ಬಲೆಗೆ

    ಪರೀಕ್ಷೆ ಪಾಸದ ದಿನವೇ ವಿದ್ಯಾರ್ಥಿನಿಯ ರುಂಡ ತುಂಡರಿಸಿದ ಹಂತಕ ಮಾಡಿದ್ದೇನು?

ಕೊಡಗು: SSLC ವಿದ್ಯಾರ್ಥಿನಿ ಮೀನಾ ಕೊಲೆ ಪ್ರಕರಣ ಇಡೀ ಕೊಡಗು ಜನತೆಯನ್ನ ಬೆಚ್ಚಿ ಬೀಳಿಸಿತ್ತು. ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ SSLC ವಿದ್ಯಾರ್ಥಿನಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ (34) ಪೊಲೀಸ್​ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಅಪ್ರಾಪ್ತ ಬಾಲಕಿ ಮೀನಾಳ ಕೊಲೆ ಮಾಡಿ ರುಂಡ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸ್​ ಅಧಿಕಾರಿಗಳು ಇಂದು ಬೆಳಗ್ಗೆ ಅರೆಸ್ಟ್​ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಇದೇ ವೇಳೆ ಘಟನಾ ಸ್ಥಳದಿಂದ 50 ಮೀಟರ್​ ದೂರದಲ್ಲಿ ರುಂಡ ಪತ್ತೆಯಾಗಿದೆ. ಈ ಸ್ಥಳ ಮಹಜರು ಪ್ರಕ್ರಿಯೆ ವೇಳೆ ಆರೋಪಿ ಪ್ರಕಾಶ ವಿದ್ಯಾರ್ಥಿನಿಯನ್ನು ಹೇಗೆ ಹತ್ಯೆ ಮಾಡಿದ್ದೇನೆ ಅಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಸ್ಥಳ ಮಹಜರು ಪ್ರಕ್ರಿಯೆ ವೇಳೆ ಆರೋಪಿ, ನಾನು ಇಲ್ಲಿಗೆ ಆಕೆಯನ್ನು ಕರೆದುಕೊಂಡು ಬಂದೆ. ನಮ್ಮ ಇಬ್ಬರ ನಡುವ ಜಗಳ ಶುರುವಾಯ್ತು. ಆಗ ನಾನು ನಿನ್ನನ್ನು ಸಾಯಿಸಿ ಬಿಡುತ್ತೇವೆ ಅಂತ ಹೇಳಿದೆ. ಆಗ ನನ್ನ ಕೈಯಲ್ಲಿದ್ದ ಮಚ್ಚು ತೆಗೆದುಕೊಂಡು ರುಂಡವನ್ನು ಕತ್ತರಿಸಿ ಬಿಟ್ಟೆ. ಬಳಿಕ ಆಕೆಯ ರುಂಡವನ್ನು ತೆಗೆದುಕೊಂಡು ದೂರ ಬಿಸಾಕಿಬಿಟ್ಟೆ ಅಂತಾ ಆರೋಪಿ ಪ್ರಕಾಶ ಪೊಲೀಸರ ಮುಂದೆ ಅಸಲಿ ವಿಚಾರನ್ನು ಬಾಯ್ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLC ವಿದ್ಯಾರ್ಥಿನಿ ಹತ್ಯೆ ಕೇಸ್​ಗೆ ಟ್ವಿಸ್ಟ್​​.. ಕೊಂದಿದ್ದು ಹೇಗೆ ಎಂದು ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಹಂತಕ!

https://newsfirstlive.com/wp-content/uploads/2024/05/kodagu4.jpg

    SSLC ವಿದ್ಯಾರ್ಥಿನಿ ತಲೆ ಕತ್ತರಿಸಿ ಕೊಂದಿದ್ದ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್

    ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಪ್ರಕಾಶ ಪೊಲೀಸ್ ಬಲೆಗೆ

    ಪರೀಕ್ಷೆ ಪಾಸದ ದಿನವೇ ವಿದ್ಯಾರ್ಥಿನಿಯ ರುಂಡ ತುಂಡರಿಸಿದ ಹಂತಕ ಮಾಡಿದ್ದೇನು?

ಕೊಡಗು: SSLC ವಿದ್ಯಾರ್ಥಿನಿ ಮೀನಾ ಕೊಲೆ ಪ್ರಕರಣ ಇಡೀ ಕೊಡಗು ಜನತೆಯನ್ನ ಬೆಚ್ಚಿ ಬೀಳಿಸಿತ್ತು. ನಿಶ್ಚಿತಾರ್ಥ ಕ್ಯಾನ್ಸಲ್ ಆದ ಕೋಪದಲ್ಲಿ SSLC ವಿದ್ಯಾರ್ಥಿನಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ (34) ಪೊಲೀಸ್​ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಅಪ್ರಾಪ್ತ ಬಾಲಕಿ ಮೀನಾಳ ಕೊಲೆ ಮಾಡಿ ರುಂಡ ತೆಗೆದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸ್​ ಅಧಿಕಾರಿಗಳು ಇಂದು ಬೆಳಗ್ಗೆ ಅರೆಸ್ಟ್​ ಮಾಡಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸಿದ ಬೆನ್ನಲ್ಲೇ ಸ್ಥಳ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಇದೇ ವೇಳೆ ಘಟನಾ ಸ್ಥಳದಿಂದ 50 ಮೀಟರ್​ ದೂರದಲ್ಲಿ ರುಂಡ ಪತ್ತೆಯಾಗಿದೆ. ಈ ಸ್ಥಳ ಮಹಜರು ಪ್ರಕ್ರಿಯೆ ವೇಳೆ ಆರೋಪಿ ಪ್ರಕಾಶ ವಿದ್ಯಾರ್ಥಿನಿಯನ್ನು ಹೇಗೆ ಹತ್ಯೆ ಮಾಡಿದ್ದೇನೆ ಅಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಸ್ಥಳ ಮಹಜರು ಪ್ರಕ್ರಿಯೆ ವೇಳೆ ಆರೋಪಿ, ನಾನು ಇಲ್ಲಿಗೆ ಆಕೆಯನ್ನು ಕರೆದುಕೊಂಡು ಬಂದೆ. ನಮ್ಮ ಇಬ್ಬರ ನಡುವ ಜಗಳ ಶುರುವಾಯ್ತು. ಆಗ ನಾನು ನಿನ್ನನ್ನು ಸಾಯಿಸಿ ಬಿಡುತ್ತೇವೆ ಅಂತ ಹೇಳಿದೆ. ಆಗ ನನ್ನ ಕೈಯಲ್ಲಿದ್ದ ಮಚ್ಚು ತೆಗೆದುಕೊಂಡು ರುಂಡವನ್ನು ಕತ್ತರಿಸಿ ಬಿಟ್ಟೆ. ಬಳಿಕ ಆಕೆಯ ರುಂಡವನ್ನು ತೆಗೆದುಕೊಂಡು ದೂರ ಬಿಸಾಕಿಬಿಟ್ಟೆ ಅಂತಾ ಆರೋಪಿ ಪ್ರಕಾಶ ಪೊಲೀಸರ ಮುಂದೆ ಅಸಲಿ ವಿಚಾರನ್ನು ಬಾಯ್ಬಿಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More