ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ವಿರುದ್ಧ ಮಾತ್ರ ಕ್ರಮ ಯಾಕೆ?
ವಿರಾಟ್, ರೋಹಿತ್ ಶರ್ಮಾ ಕೂಡ ರಣಜಿ ಕ್ರಿಕೆಟ್ ಆಡಲೇಬೇಕು
ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಬಿಸಿಸಿಐ ವಿರುದ್ಧ ಆಕ್ರೋಶ
ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿರೋ ಆಟಗಾರರು ರಣಜಿ ಟ್ರೋಫಿ ಆಡಲೇಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಎಚ್ಚರಿಕೆ ನೀಡಿದ್ದರು. ಇಷ್ಟಾದ್ರೂ ಇದನ್ನು ನಿರ್ಲಕ್ಷ್ಯ ಮಾಡಿದ್ದ ಕ್ರಿಕೆಟಿಗರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಐಪಿಎಲ್ ತಯಾರಿಯಲ್ಲಿ ತೊಡಗಿದ್ದರು. ಇದರಿಂದ ಸಿಟ್ಟಿಗೆದ್ದ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೇ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ಗೆ ಕೊಕ್ ನೀಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಇಶಾನ್, ಶ್ರೇಯಸ್ ಅಯ್ಯರ್ ರಣಜಿ ಆಡಲು ಮುಂದಾಗಿದ್ದಾರೆ. ಸದ್ಯ ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ರಣಜಿ ಆಡಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ.
ಈ ಸಂಬಂಧ ಮಾತಾಡಿದ ಟೀಮ್ ಇಂಡಿಯಾದ ವಿಶ್ವಕಪ್ ವಿನ್ನರ್ ಕೀರ್ತಿ ಆಜಾದ್, ಎಲ್ಲರೂ ರಣಜಿ ಕ್ರಿಕೆಟ್ ಆಡಲೇಬೇಕು ಅನ್ನೋದು ಒಳ್ಳೆಯ ನಿರ್ಧಾರ. ಸದ್ಯ ಐಪಿಎಲ್ ಇರೋ ಕಾರಣ ಎಲ್ಲರೂ ಆ ಟೂರ್ನಿ ಬಗ್ಗೆಯೇ ಗಮನ ಕೊಡುತ್ತಿದ್ದಾರೆ. ರಿಯಲ್ ಕ್ರಿಕೆಟ್ ಎಂದರೆ ಐದು ದಿನದ ಆಟ. ಹಾಗಾಗಿ ಬಿಸಿಸಿಐ ಈ ಆದೇಶ ಸರಿಯಾಗಿದೆ ಎಂದರು.
ಕೇವಲ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ಗೆ ಮಾತ್ರ ಶಿಕ್ಷೆ ನೀಡುವುದಲ್ಲ. ಎಲ್ಲರೂ ರಣಜಿ ಕ್ರಿಕೆಟ್ ಆಡಲೇಬೇಕು. ಫ್ರೀ ಇದ್ದಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ರಣಜಿ ಆಡಬೇಕು. ಎಲ್ಲರಿಗೂ ಈ ರೂಲ್ಸ್ ಅಪ್ಲೈ ಆಗಬೇಕು. ಅಯ್ಯರ್, ಇಶಾನ್ ವಿರುದ್ಧ ಮಾತ್ರ ಕ್ರಮ ಯಾಕೆ? ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಆಜಾದ್ ಆಕ್ರೋಶ ಹೊರಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ವಿರುದ್ಧ ಮಾತ್ರ ಕ್ರಮ ಯಾಕೆ?
ವಿರಾಟ್, ರೋಹಿತ್ ಶರ್ಮಾ ಕೂಡ ರಣಜಿ ಕ್ರಿಕೆಟ್ ಆಡಲೇಬೇಕು
ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಬಿಸಿಸಿಐ ವಿರುದ್ಧ ಆಕ್ರೋಶ
ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿರೋ ಆಟಗಾರರು ರಣಜಿ ಟ್ರೋಫಿ ಆಡಲೇಬೇಕು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಎಚ್ಚರಿಕೆ ನೀಡಿದ್ದರು. ಇಷ್ಟಾದ್ರೂ ಇದನ್ನು ನಿರ್ಲಕ್ಷ್ಯ ಮಾಡಿದ್ದ ಕ್ರಿಕೆಟಿಗರಾದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಐಪಿಎಲ್ ತಯಾರಿಯಲ್ಲಿ ತೊಡಗಿದ್ದರು. ಇದರಿಂದ ಸಿಟ್ಟಿಗೆದ್ದ ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದಲೇ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ಗೆ ಕೊಕ್ ನೀಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಇಶಾನ್, ಶ್ರೇಯಸ್ ಅಯ್ಯರ್ ರಣಜಿ ಆಡಲು ಮುಂದಾಗಿದ್ದಾರೆ. ಸದ್ಯ ಕ್ಯಾಪ್ಟನ್ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ರಣಜಿ ಆಡಬೇಕು ಅನ್ನೋ ಮಾತುಗಳು ಕೇಳಿ ಬಂದಿವೆ.
ಈ ಸಂಬಂಧ ಮಾತಾಡಿದ ಟೀಮ್ ಇಂಡಿಯಾದ ವಿಶ್ವಕಪ್ ವಿನ್ನರ್ ಕೀರ್ತಿ ಆಜಾದ್, ಎಲ್ಲರೂ ರಣಜಿ ಕ್ರಿಕೆಟ್ ಆಡಲೇಬೇಕು ಅನ್ನೋದು ಒಳ್ಳೆಯ ನಿರ್ಧಾರ. ಸದ್ಯ ಐಪಿಎಲ್ ಇರೋ ಕಾರಣ ಎಲ್ಲರೂ ಆ ಟೂರ್ನಿ ಬಗ್ಗೆಯೇ ಗಮನ ಕೊಡುತ್ತಿದ್ದಾರೆ. ರಿಯಲ್ ಕ್ರಿಕೆಟ್ ಎಂದರೆ ಐದು ದಿನದ ಆಟ. ಹಾಗಾಗಿ ಬಿಸಿಸಿಐ ಈ ಆದೇಶ ಸರಿಯಾಗಿದೆ ಎಂದರು.
ಕೇವಲ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ಗೆ ಮಾತ್ರ ಶಿಕ್ಷೆ ನೀಡುವುದಲ್ಲ. ಎಲ್ಲರೂ ರಣಜಿ ಕ್ರಿಕೆಟ್ ಆಡಲೇಬೇಕು. ಫ್ರೀ ಇದ್ದಾಗ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಕೂಡ ರಣಜಿ ಆಡಬೇಕು. ಎಲ್ಲರಿಗೂ ಈ ರೂಲ್ಸ್ ಅಪ್ಲೈ ಆಗಬೇಕು. ಅಯ್ಯರ್, ಇಶಾನ್ ವಿರುದ್ಧ ಮಾತ್ರ ಕ್ರಮ ಯಾಕೆ? ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಆಜಾದ್ ಆಕ್ರೋಶ ಹೊರಹಾಕಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ