ಪಹಲ್ಗಾಮ್‌ ದಾಳಿಯ ನೋವು.. ನನಗೆ ಈ ಇಸ್ಲಾಂ ಧರ್ಮವೇ ಬೇಡ ಎಂದ ಶಿಕ್ಷಕ! VIDEO

author-image
Veena Gangani
Updated On
ಪಹಲ್ಗಾಮ್‌ ದಾಳಿಯ ನೋವು.. ನನಗೆ ಈ ಇಸ್ಲಾಂ ಧರ್ಮವೇ ಬೇಡ ಎಂದ ಶಿಕ್ಷಕ! VIDEO
Advertisment
  • ‘ಸಾಮಾನ್ಯ ಮನುಷ್ಯನಂತೆ ಬದುಕಲು ನಾನು ಬಯಸುತ್ತೇನೆ’
  • ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿದ ಶಿಕ್ಷಕ
  • ನಾನು ಯಾವುದೇ ಧರ್ಮವನ್ನು ಅಗೌರವಿಸುವುದಿಲ್ಲ ಎಂದ್ರು

ಜಮ್ಮು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಇಡೀ ದೇಶವೇ ಖಂಡನೆ ವ್ಯಕ್ತಪಡಿಸುತ್ತಿದೆ. ಪಹಲ್ಗಾಮ್​​ನಲ್ಲಿ ನಡೆದ ದಾಳಿಯಲ್ಲಿ ಒಂದಲ್ಲಾ ಎರಡಲ್ಲ ಬರೋಬ್ಬರಿ 26 ಅಮಾಯಕರ ಜೀವ ಬಲಿಯಾಗಿದೆ. ಅದರಲ್ಲೂ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಭಾರತೀಯ ಸೇನೆ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ಸುದ್ದಿಯಾದ ಸಿಎಂ ಸಿದ್ದರಾಮಯ್ಯ; ವಿಡಿಯೋ ವೈರಲ್ ಆದ ಮೇಲೆ ಏನಂದ್ರು?

publive-image

ಈ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸುತ್ತಾ, ಪಶ್ಚಿಮ ಬಂಗಾಳದ ಬದುರಿಯಾದ ಶಾಲಾ ಶಿಕ್ಷಕ ಸಬೀರ್ ಹುಸೇನ್ ಇಸ್ಲಾಂ ಧರ್ಮವನ್ನು ತ್ಯಜಿಸಲು ನಿರ್ಧರಿಸಿದ್ದಾರೆ. ಯಾವುದೇ ಧರ್ಮದ ಹೊರತಾಗಿಯೂ, ಹುಸೇನ್ ತನ್ನ ಇಸ್ಲಾಮಿಕ್ ಗುರುತನ್ನು ತ್ಯಜಿಸಲು ನ್ಯಾಯಾಲಯಕ್ಕೆ ಹೋಗಲು ಯೋಜಿಸುತ್ತಾನೆ.

publive-image

ನಾನು ಯಾವುದೇ ಧರ್ಮವನ್ನು ಅಗೌರವಿಸುವುದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ವಿಶೇಷವಾಗಿ ಕಾಶ್ಮೀರದಲ್ಲಿ ಧರ್ಮವನ್ನು ಹಿಂಸಾಚಾರಕ್ಕೆ ಒಂದು ಸಾಧನವಾಗಿ ಪದೇ ಪದೇ ಬಳಸಲಾಗುತ್ತಿದೆ ಎಂದು ನಾನು ನೋಡಿದ್ದೇನೆ. ಈ ವಿಧಾನವನ್ನು ನಾನು ಇನ್ನು ಮುಂದೆ ಸ್ವೀಕರಿಸಲು ಸಾಧ್ಯವಿಲ್ಲ. ಯಾವುದೇ ಧಾರ್ಮಿಕ ಹಣೆಪಟ್ಟಿ ಇಲ್ಲದೆ ಸಾಮಾನ್ಯ ಮನುಷ್ಯನಂತೆ ಬದುಕಲು ನಾನು ಬಯಸುತ್ತೇನೆ. ಇದಕ್ಕಾಗಿ, ನಾನು ನ್ಯಾಯಾಲಯದಲ್ಲಿ ಔಪಚಾರಿಕ ಅರ್ಜಿಯನ್ನು ಸಲ್ಲಿಸಲು ಬಯಸುತ್ತೇನೆ. ಯಾರನ್ನಾದರೂ ಅವರ ಧರ್ಮದ ಕಾರಣದಿಂದಾಗಿ ಏಕೆ ಕೊಲ್ಲಬೇಕು? ಅದೇ ನನಗೆ ತುಂಬಾ ನೋವುಂಟು ಮಾಡುತ್ತಿದೆ ಎಂದು ಶಿಕ್ಷಕ ಸಬೀರ್ ಹುಸೇನ್ ಹೇಳಿದ್ದಾರೆ.

ಮತ್ತೆ ಫೇಸ್‌ಬುಕ್‌ನಲ್ಲಿ ತಮ್ಮ ನಿರ್ಧಾರ ತಿಳಿದ ಬಳಿಕ ಕಾನೂನುಬದ್ಧವಾಗಿ ಇಸ್ಲಾಂ ಅನ್ನು ಹೇಗೆ ಬಿಡುವುದು ಎಂಬುದರ ಕುರಿತು ಯೋಚಿಸುತ್ತಿದ್ದಾರೆ. ಅಲ್ಲದೇ ತಮ್ಮ ನಂಬಿಕೆಗಳನ್ನು ತಮ್ಮ ಕುಟುಂಬದ ಮೇಲೆ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಹೆಂಡತಿ ಮತ್ತು ಮಕ್ಕಳು ತಮಗೆ ಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಇದು ನನ್ನ ವೈಯಕ್ತಿಕ ಪ್ರಯಾಣ. ನಾನು ಇನ್ನು ಮುಂದೆ ಇಸ್ಲಾಂ ಧರ್ಮದೊಂದಿಗೆ ನನ್ನ ಪ್ರಯಾಣವನ್ನು ಮುಂದುವರಿಸುವುದಿಲ್ಲ ಎಂದು ಹುಸೇನ್ ಸ್ಪಷ್ಟಪಡಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment