ಓದಲು ಹೋಗಿದ್ದ ಮಗಳ ಸ್ಥಿತಿ ಕಂಡು ಪೋಷಕರು ಶಾಕ್
ಪೊಲೀಸ್ ವಿಚಾರಣೆ ವೇಳೆ ಗೊತ್ತಾಯ್ತು ಮಗಳ ಅಸಲಿ ಸತ್ಯ
ಸಿಸಿಟಿಟಿ ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಶಾಕಿಂಗ್ ವಿಚಾರ
ತಂದೆ ಬಳಿ ಹಣ ಪೀಕಲು ಮಗಳಿಂದ ಕಿಡ್ನ್ಯಾಪ್ ನಾಟಕ ಮಧ್ಯಪ್ರದೇಶದಲ್ಲಿ ನಡೆದಿದೆ. 21 ವರ್ಷದ ಕಾವ್ಯಾ ಢಾಕಡ್ ಎಂಬ ವಿದ್ಯಾರ್ಥಿನಿ, ಕಳೆದ 6-7 ತಿಂಗಳಿನಿಂದ ರಾಜಸ್ಥಾನದ ಕೋಟಾದಲ್ಲಿ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಳು.
2023ರ ಆಗಸ್ಟ್ 3ರಂದು ವಿದ್ಯಾರ್ಥಿನಿ ಕೋಟಾಕ್ಕೆ ಬಂದಿದ್ದಳು. ಕಳೆದ ಸೋಮವಾರ ಬೆಳಗ್ಗೆ ಕಾವ್ಯಾ ತಂದೆ ರಘುವೀರ್ ಧಾಕಡ್ ವಾಟ್ಸ್ಌಪ್ಗೆ ತನ್ನ ಮಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲ್ಲಿರುವ ಒಂದು ಫೋಟೋ ಬಂದಿತ್ತು. ನಮಗೆ 30 ಲಕ್ಷ ಹಣ ಬೇಕು, ಇಲ್ಲದಿದ್ದರೆ ನಿನ್ನ ಮಗಳು ನಿನಗೆ ಸಿಗಲ್ಲ ಎಂಬ ಬೆದರಿಕೆ ಹಾಕಲಾಗಿತ್ತು.
ಮಗಳ ಕಿಡ್ನ್ಯಾಪ್ ಸುದ್ದಿ ಕೇಳಿ ಕಾವ್ಯಾ ತಂದೆಗೆ ಶಾಕ್ ಆಗಿತ್ತು. ಕೂಡಲೇ ಮಧ್ಯಪ್ರದೇಶದ ಶಿವಪುರಿಯ ಪೊಲೀಸ್ ಠಾಣೆ ತೆರಳಿ ಮಗಳನ್ನು ರಕ್ಷಿಸುವಂತೆ ದೂರು ನೀಡಿದ್ದರು. ಕೂಡಲೇ ತನಿಖೆ ಶುರು ಮಾಡಿದ ಪೊಲೀಸರು ರಾಜಸ್ಥಾನ ಕೋಟ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ವರ್ಗಾಹಿಸಿದ್ದಾರೆ. ಮಾರ್ಚ್ 18 ರ ಸಿಸಿಟಿವಿ ದೃಶ್ಯಗಳಲ್ಲಿ ಅಪಹರಣಕ್ಕೆ ಕೇವಲ 3 ಗಂಟೆಗಳ ಮೊದಲು, ವಿದ್ಯಾರ್ಥಿನಿ ಕಾವ್ಯಾ ಜೈಪುರದ ದುರ್ಗಾಪುರ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಳೆ. ದೃಶ್ಯಗಳಲ್ಲಿ, ಕಾವ್ಯಾ ಇಬ್ಬರೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಸತ್ಯವೊಂದು ಗೊತ್ತಾಗಿದೆ.
ಫಾರಿನ್ ಟ್ರಿಪ್ ಹೋಗಲು ಮಗಳಿಂದ ಕಿಡ್ನ್ಯಾಪ್ ನಾಟಕ
ಹೆತ್ತವರು ಕಷ್ಟಪಟ್ಟು ಮಗಳು ಓದಿ ಉದ್ದಾರ ಆಗಲಿ ಎಂದು ಕೋಟಾಗೆ ಕಳಿಸಿದ್ದರು. ಅಲ್ಲಿ ಮಗಳು ಯಾವುದೇ ಇನ್ಸ್ಟಿಟ್ಯೂಷನ್ಗೂ ಸೇರಿದಂತೆ ಪೋಷಕರನ್ನು ಯಾಮಾರಿಸಿದ್ದಾಳೆ. ಇಷ್ಟೇ ಅಲ್ಲ, ಫಾರಿನ್ ಟ್ರಿಪ್ಗೆ ಹೋಗಲು ದುಡ್ಡಿಗಾಗಿ ಕಿಡ್ಯ್ನಾಪ್ ಡ್ರಾಮಾವನ್ನು ರೆಡಿ ಮಾಡಿದ್ದಳು. ಅದರಂತೆ ತನ್ನ ಸ್ನೇಹಿತೆಯ ಸಹಾಯ ಪಡೆದು, ಇಂದೋರ್ನ ಪ್ಲಾಟ್ವೊಂದರಲ್ಲಿ ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು, ಕಿಡ್ನ್ಯಾಪ್ ಮಾಡಿರುವ ರೀತಿಯ ಫೋಟೋವನ್ನು ತೆಗೆದು, ಅದನ್ನು ಫೋಷಕರಿಗೆ ಕಳುಹಿಸಿದ್ದಾಳೆ. ವಿದೇಶಕ್ಕೆ ಹೋಗಲು ಹಣಕ್ಕಾಗಿ ಈ ರೀತಿ ಕೆಲಸ ಮಾಡಿದ್ವಿ ಎಂದು ಯುವತಿಯ ಸ್ನೇಹಿತೆ ಪೊಲೀಸರ ಬಳಿ ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಓದಲು ಹೋಗಿದ್ದ ಮಗಳ ಸ್ಥಿತಿ ಕಂಡು ಪೋಷಕರು ಶಾಕ್
ಪೊಲೀಸ್ ವಿಚಾರಣೆ ವೇಳೆ ಗೊತ್ತಾಯ್ತು ಮಗಳ ಅಸಲಿ ಸತ್ಯ
ಸಿಸಿಟಿಟಿ ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಶಾಕಿಂಗ್ ವಿಚಾರ
ತಂದೆ ಬಳಿ ಹಣ ಪೀಕಲು ಮಗಳಿಂದ ಕಿಡ್ನ್ಯಾಪ್ ನಾಟಕ ಮಧ್ಯಪ್ರದೇಶದಲ್ಲಿ ನಡೆದಿದೆ. 21 ವರ್ಷದ ಕಾವ್ಯಾ ಢಾಕಡ್ ಎಂಬ ವಿದ್ಯಾರ್ಥಿನಿ, ಕಳೆದ 6-7 ತಿಂಗಳಿನಿಂದ ರಾಜಸ್ಥಾನದ ಕೋಟಾದಲ್ಲಿ ನೀಟ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಳು.
2023ರ ಆಗಸ್ಟ್ 3ರಂದು ವಿದ್ಯಾರ್ಥಿನಿ ಕೋಟಾಕ್ಕೆ ಬಂದಿದ್ದಳು. ಕಳೆದ ಸೋಮವಾರ ಬೆಳಗ್ಗೆ ಕಾವ್ಯಾ ತಂದೆ ರಘುವೀರ್ ಧಾಕಡ್ ವಾಟ್ಸ್ಌಪ್ಗೆ ತನ್ನ ಮಗಳನ್ನು ಕಟ್ಟಿ ಹಾಕಿರುವ ಸ್ಥಿತಿಯಲ್ಲಿರುವ ಒಂದು ಫೋಟೋ ಬಂದಿತ್ತು. ನಮಗೆ 30 ಲಕ್ಷ ಹಣ ಬೇಕು, ಇಲ್ಲದಿದ್ದರೆ ನಿನ್ನ ಮಗಳು ನಿನಗೆ ಸಿಗಲ್ಲ ಎಂಬ ಬೆದರಿಕೆ ಹಾಕಲಾಗಿತ್ತು.
ಮಗಳ ಕಿಡ್ನ್ಯಾಪ್ ಸುದ್ದಿ ಕೇಳಿ ಕಾವ್ಯಾ ತಂದೆಗೆ ಶಾಕ್ ಆಗಿತ್ತು. ಕೂಡಲೇ ಮಧ್ಯಪ್ರದೇಶದ ಶಿವಪುರಿಯ ಪೊಲೀಸ್ ಠಾಣೆ ತೆರಳಿ ಮಗಳನ್ನು ರಕ್ಷಿಸುವಂತೆ ದೂರು ನೀಡಿದ್ದರು. ಕೂಡಲೇ ತನಿಖೆ ಶುರು ಮಾಡಿದ ಪೊಲೀಸರು ರಾಜಸ್ಥಾನ ಕೋಟ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ವರ್ಗಾಹಿಸಿದ್ದಾರೆ. ಮಾರ್ಚ್ 18 ರ ಸಿಸಿಟಿವಿ ದೃಶ್ಯಗಳಲ್ಲಿ ಅಪಹರಣಕ್ಕೆ ಕೇವಲ 3 ಗಂಟೆಗಳ ಮೊದಲು, ವಿದ್ಯಾರ್ಥಿನಿ ಕಾವ್ಯಾ ಜೈಪುರದ ದುರ್ಗಾಪುರ ರೈಲು ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಳೆ. ದೃಶ್ಯಗಳಲ್ಲಿ, ಕಾವ್ಯಾ ಇಬ್ಬರೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಸತ್ಯವೊಂದು ಗೊತ್ತಾಗಿದೆ.
ಫಾರಿನ್ ಟ್ರಿಪ್ ಹೋಗಲು ಮಗಳಿಂದ ಕಿಡ್ನ್ಯಾಪ್ ನಾಟಕ
ಹೆತ್ತವರು ಕಷ್ಟಪಟ್ಟು ಮಗಳು ಓದಿ ಉದ್ದಾರ ಆಗಲಿ ಎಂದು ಕೋಟಾಗೆ ಕಳಿಸಿದ್ದರು. ಅಲ್ಲಿ ಮಗಳು ಯಾವುದೇ ಇನ್ಸ್ಟಿಟ್ಯೂಷನ್ಗೂ ಸೇರಿದಂತೆ ಪೋಷಕರನ್ನು ಯಾಮಾರಿಸಿದ್ದಾಳೆ. ಇಷ್ಟೇ ಅಲ್ಲ, ಫಾರಿನ್ ಟ್ರಿಪ್ಗೆ ಹೋಗಲು ದುಡ್ಡಿಗಾಗಿ ಕಿಡ್ಯ್ನಾಪ್ ಡ್ರಾಮಾವನ್ನು ರೆಡಿ ಮಾಡಿದ್ದಳು. ಅದರಂತೆ ತನ್ನ ಸ್ನೇಹಿತೆಯ ಸಹಾಯ ಪಡೆದು, ಇಂದೋರ್ನ ಪ್ಲಾಟ್ವೊಂದರಲ್ಲಿ ಕೈ-ಕಾಲಿಗೆ ಹಗ್ಗ ಕಟ್ಟಿಕೊಂಡು, ಕಿಡ್ನ್ಯಾಪ್ ಮಾಡಿರುವ ರೀತಿಯ ಫೋಟೋವನ್ನು ತೆಗೆದು, ಅದನ್ನು ಫೋಷಕರಿಗೆ ಕಳುಹಿಸಿದ್ದಾಳೆ. ವಿದೇಶಕ್ಕೆ ಹೋಗಲು ಹಣಕ್ಕಾಗಿ ಈ ರೀತಿ ಕೆಲಸ ಮಾಡಿದ್ವಿ ಎಂದು ಯುವತಿಯ ಸ್ನೇಹಿತೆ ಪೊಲೀಸರ ಬಳಿ ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ