ಅನ್ನದಾತರಿಗೆ ಭರ್ಜರಿ ಗುಡ್​​ನ್ಯೂಸ್.. KRS ಭರ್ತಿಗೆ ಕೆಲವೇ ಕೆಲವು ಅಡಿ ನೀರು ಭಾಕಿ.. Photos

author-image
Ganesh
Updated On
ಅನ್ನದಾತರಿಗೆ ಭರ್ಜರಿ ಗುಡ್​​ನ್ಯೂಸ್.. KRS ಭರ್ತಿಗೆ ಕೆಲವೇ ಕೆಲವು ಅಡಿ ನೀರು ಭಾಕಿ.. Photos
Advertisment
  • ಜೀವನಾಡಿ KRS ಡ್ಯಾಮ್ ಭರ್ತಿಗೆ ಕೆಲವೇ ಕೆಲವು ಅಡಿ ನೀರು ಬಾಕಿ
  • ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ
  • ಅಸ್ತಿ ವಿಸರ್ಜನೆ ಕಾರ್ಯಕ್ಕೂ ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಬ್ರೇಕ್

ಮಂಡ್ಯ: ಹಳೇ ಮೈಸೂರು ಜೀವನಾಡಿ ಕೆಆರ್‌ಎಸ್ (Krishna Raja Sagara) ಡ್ಯಾಮ್ ತುಂಬುವ ಹಂತಕ್ಕೆ ಬಂದಿದೆ. ಇನ್ನೇನು ನಾಲ್ಕು ಅಡಿ ನೀರು ಬಂದರೆ ಡ್ಯಾಂ ಸಂಪೂರ್ಣ ಭರ್ತಿ ಆಗಲಿದೆ.

publive-image

ಮುಂಗಾರು ಮಳೆಯ ಆರಂಭದಲ್ಲಿಯೇ ಡ್ಯಾಂ ಭರ್ತಿಯಾಗುತ್ತಿರೋದು ರಾಜ್ಯದ ಅನ್ನದಾತರಿಗೆ ಶುಭ ಸುದ್ದಿಯಾಗಿದೆ. ಈಗಾಗಲೇ 121 ಅಡಿ ತುಂಬಿರುವ ಕೆಆರ್​ಎಸ್​ ಡ್ಯಾಮ್​ನ ಸಂಪೂರ್ಣ ಭರ್ತಿಗೆ 4 ಅಡಿ ನೀರು ಮಾತ್ರ ಬಾಕಿಯಿದೆ.

publive-image

ಡ್ಯಾಂ ಸುರಕ್ಷತೆಗಾಗಿ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. 19 ಗೇಟ್ ಮೂಲಕ 33 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗುತ್ತಿದೆ. ಸುರಕ್ಷತಾ ದೃಷ್ಟಿಯಿಂದ ಒಳ ಹರಿವಿನಷ್ಟೇ ಹೊರಹರಿವು ಬಿಡಲಾಗುತ್ತಿದೆ.

publive-image

ಡ್ಯಾಂ ಮುಂಭಾಗ ಹಾಲ್ನೊರೆಯಂತೆ ಕಾವೇರಿ ಭೋರ್ಗರೆಯುತ್ತಿದ್ದಾಳೆ. ಗೇಟ್​ನಿಂದ ಬಂಡೆಗಳಿಗೆ ಚಿಮ್ಮುತ್ತಿರುವ ರಮಣೀಯ ದೃಶ್ಯವನ್ನು ನೋಡೋದೇ ಒಂದು ಹಬ್ಬ. ಮತ್ತೊಂದೆಡೆ ನದಿ ನೀರಿನಲ್ಲಿ ಏರಿಕೆ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಡ್ಯಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಟ್ಟರೆ ಪ್ರವಾಹ ಉಂಟಾಗಲಿದೆ.

publive-image

ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಬಲಮುರಿ, ಎಡಮುರಿ, ಸಂಗಮ, ಗೋಸಾಯಿ ಘಾಟ್​ಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.  ಅಸ್ತಿ ವಿಸರ್ಜನೆ ಕಾರ್ಯಕ್ಕೂ ಶ್ರೀರಂಗಪಟ್ಟಣ ತಾಲ್ಲೂಕು ಆಡಳಿತ ಬ್ರೇಕ್ ಹಾಕಿದೆ.

publive-image

publive-image

publive-image

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment