/newsfirstlive-kannada/media/post_attachments/wp-content/uploads/2023/08/KRS-Dam-Mandya.jpg)
ಮಂಡ್ಯ: ಕರ್ನಾಟಕದ ಕೆಲವೆಡೆ ಮಳೆ ಸುರಿಯುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಕೆರೆ, ಕಟ್ಟೆಗಳು ತುಂಬುತ್ತಿದೆ. ಈ ವರ್ಷ ನೀರಿಲ್ಲದೆ ಬೇಸತ್ತಿದ್ದ ಮತ್ತು ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಮಳೆ ವರದಾನವಾಗಿದೆ. ಅಂದಹಾಗೆಯೇ ಕೆಆರ್​ಎಸ್​ ಡ್ಯಾಂನಲ್ಲೂ ಮಳೆ ನೀರು ಶೇಖರಣೆಯಾಗುತ್ತಿದೆ.
ಮಳೆಯಿಂದಾಗಿ ಕೆಲವೆಡೆ ಅವಾಂತರ ಸೃಷ್ಟಿಯಾಗಿದೆ, ಮತ್ತೊಂದೆಡೆ ಬಿಸಿಲಿಗೆ ಬೆಂದು ಹೋಗಿದ್ದ ಭೂಮಿ ತಂಪಾಗಿದೆ. ಇದರ ಜೊತೆ ಜೊತೆಗೆ ಕೆಆರ್​ಎಸ್​ ಅಣೆಕಟ್ಟಿನ ಒಳಹರಿವಿನಲ್ಲಿ ಹೆಚ್ಚಳವಾಗುತ್ತಿದೆ. ಅದರಂತೆಯೇ ಕೃಷ್ಣರಾಜ ಸಾಗರದ ನೀರಿನ ಮಟ್ಟ ಇಂದು ಎಷ್ಟಿದೇ ಎಂದು ನೋಡೋದಾದ್ರೆ..
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 81.20 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 11.325 ಟಿಎಂಸಿ
ಒಳ ಹರಿವು - 1,456 ಕ್ಯೂಸೆಕ್
ಹೊರ ಹರಿವು - 274 ಕ್ಯೂಸೆಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us