/newsfirstlive-kannada/media/post_attachments/wp-content/uploads/2023/07/krs-1.jpg)
ಮಂಡ್ಯ: ಕಾವೇರಿ ಕನ್ನಡಿಗರ ಜೀವ ನದಿ. ಈ ನದಿಯಿಂದಲೇ ಅದೆಷ್ಟೋ ಜೀವರಾಶಿಗಳು ಬದುಕುತ್ತಿವೆ. ಅದೆಷ್ಟೋ ಕುಟುಂಬಗಳು ಬದುಕು ಸಾಗಿಸುತ್ತಿವೆ. ಆದರೆ ಕಾವೇರಿ ಒಡಲು ತುಂಬಬೇಕಾದರೆ ಮಳೆ ಅಗತ್ಯ. ಮಳೆ ಬಂದರೆ ಮಾತ್ರ ಕೆರೆ, ಕಟ್ಟೆಗಳು ತುಂಬುತ್ತವೆ. ಮಾತ್ರವಲ್ಲ ಕೆಆರ್​ಎಸ್​ ಅಣೆಕಟ್ಟೆ ಭರ್ತಿಯಾಗುತ್ತದೆ.
ಸದ್ಯ ರಾಜ್ಯದ ಹಲವೆಡೆ ಮಳೆಯ ಸಿಂಚನವಾಗುತ್ತಿದೆ. ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬರುತ್ತಿದೆ. ಇದರಿಂದ ಕಾವೇರಿ ಸಂತಸಗೊಂಡಿದ್ದಾಳೆ. ಕಾರಣ ಕೃಷ್ಣರಾಜ ಸಾಗರ ಅಣೆಕಟ್ಟಿನತ್ತ ನೀರು ಹರಿದುಬರುತ್ತಿದೆ. ಅಂದಹಾಗೆಯೇ ನಿನ್ನೆ ಮತ್ತು ಇಂದಿಗೆ ಕೆಆರ್​ಎಸ್ ನೀರಿನ ಒಳಹರಿವಿನ ಪ್ರಮಾಣ ಕೊಂಚ ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ.. ಕಾರಿಗೆ ಗುದ್ದಿದ ಲಾರಿ.. ನಾಲ್ವರು ಸ್ಥಳದಲ್ಲೇ ಸಾವು
ಇಂದಿನ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ.
ಇಂದಿನ ಮಟ್ಟ - 86.50 ಅಡಿ.
ಗರಿಷ್ಠ ಸಾಂದ್ರತೆ - 49.452 ಟಿಎಂಸಿ
ಇಂದಿನ ಸಾಂದ್ರತೆ - 13.958 ಟಿಎಂಸಿ
ಒಳ ಹರಿವು - 2,426 ಕ್ಯೂಸೆಕ್
ಹೊರ ಹರಿವು - 456 ಕ್ಯೂಸೆಕ್
ಇದನ್ನೂ ಓದಿ: ಬದಲಾಯ್ತು ನಟನ ಮನಸ್ಥಿತಿ.. ತಪ್ಪಾಯ್ತು.. ತಪ್ಪಾಯ್ತು ಅಂತಿದ್ದಾರಂತೆ ದರ್ಶನ್​!
ನಿನ್ನೆ ಕೆಆರ್ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 86.20 ಅಡಿ.
ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
ಇಂದಿನ ಸಾಮರ್ಥ್ಯ – 13.796 ಟಿಎಂಸಿ
ಒಳ ಹರಿವು – 2,404 ಕ್ಯೂಸೆಕ್
ಹೊರ ಹರಿವು – 454 ಕ್ಯೂಸೆಕ್
ಇದನ್ನೂ ಓದಿ: ಸಿನಿಮಾ ಕಂಪ್ಲೀಟ್ ಮಾಡದಿದ್ರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಸ್ತೀನಿ.. ನಿರ್ಮಾಪಕನಿಗೆ ದರ್ಶನ್​ ಜೀವ ಬೆದರಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us