/newsfirstlive-kannada/media/post_attachments/wp-content/uploads/2024/07/KRS-Dam-4.jpg)
ಮಂಡ್ಯ: ಮುಂಗಾರು ಮಳೆ ಉತ್ತಮವಾಗಿ ಆಗುತ್ತಿರುವ ಕಾರಣ ರಾಜ್ಯದ ಜಲಾಶಯಗಳಿಗೆ ನೀರಿನ ಕಳೆ ಬಂದಿದೆ. ಇದರ ಜೊತೆಗೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ (Krishna Raja Sagara) ಜಲಾಶಯದ ಒಳ ಹರಿವು ಮತ್ತಷ್ಟು ಹೆಚ್ಚಳವಾಗಿರುವುದು ಅನ್ನದಾತರಿಗೆ ಸಂತಸದ ಸಂಗತಿ ಆಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ ಕೆಆರ್ಎಸ್ ಅಣೆಕಟ್ಟೆಯ ನೀರಿನ ಮಟ್ಟ ಏರಿಕೆಯಾಗಿದೆ. ಕೆಆರ್ಎಸ್ ಅಣೆಕಟ್ಟೆ ಭರ್ತಿಗೆ ಇನ್ನು ಕೇವಲ ನಾಲ್ಕೇ 4 ಅಡಿ ನೀರು ಮಾತ್ರ ಬಾಕಿ ಇದೆ. 13 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಜಲಾಶಯದತ್ತ ಹರಿದು ಬರುತ್ತಿರುವುದು ಒಳ್ಳೆಯ ವಿಷಯವಾಗಿದೆ.
ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು 124 ಅಡಿ ಇರುವ ಕೆಆರ್ಎಸ್ ಜಲಾಶಯ ಈಗಾಗಲೇ 120 ಅಡಿಯಷ್ಟು ಭರ್ತಿಯಾಗಿದೆ. ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದ್ದು ಈ ವಾರದಲ್ಲಿ ತುಂಬುವ ಸಾಧ್ಯತೆ ಇದೆ. ಈ ಮೂಲಕ ಇದೇ ಮೊದಲ ಬಾರಿಗೆ ಕೆಆರ್ಎಸ್ ಜಲಾಶಯ ಜೂನ್ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತೆ ಆಗುತ್ತದೆ. ಜೂನ್ನಲ್ಲೇ ಭರ್ತಿಯಾದರೆ ಹೊಸ ದಾಖಲೆ ಕೆಆರ್ಎಸ್ ಬರೆಯಲಿದೆ.
ಇದನ್ನೂ ಓದಿ:ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ!
124.80 ಅಡಿಯ ಕೆಆರ್ಎಸ್ ಡ್ಯಾಂ ಈಗ 120.20 ಅಡಿಯಷ್ಟು ನೀರು ತುಂಬಿದೆ. 49.452 ಟಿಎಂಸಿ ಸಾಂದ್ರತೆಯ ಕನ್ನಂಬಾಡಿ ಕಟ್ಟೆಯಲ್ಲಿ 43.298 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದಿಂದ 1,965 ಕ್ಯೂಸೆಕ್ ನೀರು ಹೊರ ಹರಿವು ಇದೆ.
ಇಂದಿನ ಜಲಾಶಯದ ನೀರಿನ ಮಟ್ಟ ಹೇಗಿದೆ?
- ಗರಿಷ್ಠ ಮಟ್ಟ- 124.80 ಅಡಿ
- ಇಂದಿನ ಮಟ್ಟ- 120.20 ಅಡಿ
- ಒಳಹರಿವು- 13,856 ಕ್ಯೂಸೆಕ್
- ಹೊರಹರಿವು- 1,965 ಕ್ಯೂಸೆಕ್
- ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
- ಇಂದಿನ ಸಾಮರ್ಥ್ಯ- 43.298 ಟಿಎಂಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ