ಅನ್ನದಾತರ ಮೊಗದಲ್ಲಿ ಸಂತಸ.. ಹೆಚ್ಚುತ್ತಲೇ ಇದೆ KRS ನೀರಿನ ಮಟ್ಟ..

author-image
Ganesh
Updated On
ಕೊಂಚ ರಿಲ್ಯಾಕ್ಸ್​ ಕೊಟ್ಟ ಮಳೆರಾಯ.. ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ..
Advertisment
  • ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆ
  • KRS ಡ್ಯಾಂ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳ
  • ಸಂಪೂರ್ಣ ಭರ್ತಿಗೆ ಕೇವಲ 11 ಅಡಿ ಮಾತ್ರ ಬಾಕಿ

ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಕಳೆ ಬಂದಿದೆ. ಅದರಂತೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ (Krishna Raja Sagara) ಡ್ಯಾಂನ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 29,368 ಕ್ಯೂಸೆಕ್​ಗೆ ಒಳ ಹರಿವು ಏರಿಕೆ ಆಗಿದೆ. ಸದ್ಯ ಕನ್ನಂಬಾಡಿ ಕಟ್ಟೆ 113 ಅಡಿಗೆ ಭರ್ತಿ ಆಗಿದೆ. 124.80 ಅಡಿ ಗರಿಷ್ಠ ಮಟ್ಟವನ್ನು ಕೆಆರ್​ಎಸ್​ ಹೊಂದಿದೆ.
ಡ್ಯಾಂ ಭರ್ತಿಯತ್ತ ಸಾಗುತ್ತಿರೋದ್ರಿಂದ ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿದೆ. ಇನ್ನು, ಸಂಪೂರ್ಣ ಭರ್ತಿಗೆ ಕೇವಲ 11 ಅಡಿ ಮಾತ್ರ ಬಾಕಿಯಿದೆ. ಸದ್ಯ ಡ್ಯಾಂನಲ್ಲಿ 35.118 ಟಿಎಂಸಿ ನೀರು ಸಂಗ್ರಹವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆರಾಯನ ಆರ್ಭಟ.. ನದಿ ಪಾತ್ರದ ಜನರಿಗೆ ಎಚ್ಚರ ಎಚ್ಚರ..

publive-image

KRS ಡ್ಯಾಂನ ನೀರಿನ ‌ಮಟ್ಟ

  • ಗರಿಷ್ಠ ಮಟ್ಟ : 124.80 ಅಡಿ
  •  ಇಂದಿನ ಮಟ್ಟ : 113.25 ಅಡಿ
  •  ಒಳ ಹರಿವು : 29,368 ಕ್ಯೂಸೆಕ್
  •  ಹೊರ‌ ಹರಿವು : 1024 ಕ್ಯೂಸೆಕ್
  •  ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ : 49.452 ಟಿಎಂಸಿ
  •  ಇಂದಿನ ಸಂಗ್ರಹ ಸಾಮರ್ಥ್ಯ ಟಿಎಂಸಿ: 35.118 ಟಿಎಂಸಿ

ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣದಲ್ಲಿ ಅಮುಲ್ ಮಳಿಗೆ.. ಕನ್ನಡಿಗರಿಂದ ಭಾರೀ ವಿರೋಧ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment