/newsfirstlive-kannada/media/post_attachments/wp-content/uploads/2025/04/RCB-2-1.jpg)
ಚಿನ್ನಸ್ವಾಮಿಯಲ್ಲಿ ಸತತ ಮೂರು ಪಂದ್ಯ ಸೋಲ್ತಿದ್ದಂತೆಯೇ ಕೆಲವು ಆಟಗಾರರ ಮೇಲೆ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಅವರಲ್ಲಿ ಕೃನಾಲ್ ಪಾಂಡ್ಯ ಕೂಡ ಒಬ್ಬರು.
ಬೌಲಿಂಗ್ನಲ್ಲಿ ಸೈ ಎನಿಸಿಕೊಂಡಿರುವ ಕೃನಾಲ್ ಬ್ಯಾಟ್ನಿಂದ ಯಾವುದೇ ರನ್ ಬರುತ್ತಿಲ್ಲ. ಇದು ಆರ್ಸಿಬಿಯ ತಲೆನೋವಿಗೆ ಕಾರಣವಾಗಿದೆ. 5.75 ಕೋಟಿಯ ಈ ಆಲ್ರೌಂಡ್, ಆರ್ಸಿಬಿ ಪರ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. 7 ಪಂದ್ಯಗಳಲ್ಲಿ ಅವರ ಒಟ್ಟು ಸ್ಕೋರ್ 24 ಆಗಿದೆ. ಅತ್ಯಧಿಕ 18 ರನ್ಸ್. ಎರಡು ಬೌಂಡರಿ ಬಿಟ್ಟರೆ, ಯಾವುದೇ ಬಿಗ್ ಹಿಟ್ ಇಲ್ಲ.
ಇದನ್ನೂ ಓದಿ: ಹ್ಯಾಟ್ರಿಕ್ ಸೋಲಿನ ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಆಘಾತ..!
ಇನ್ನು, ಬೌಲಿಂಗ್ನಲ್ಲಿ ಆರ್ಸಿಬಿ ಪರ 120 ಬಾಲ್ ಮಾಡಿದ್ದಾರೆ. 9.60 ಎಕನಾಮಿಕ್ ರೇಟ್ನಲ್ಲಿ ಒಟ್ಟು 192 ರನ್ ಬಿಟ್ಟುಕೊಟ್ಟಿದ್ದಾರೆ. ಜೊತೆಗೆ 8 ವಿಕೆಟ್ ಪಡೆದಿದ್ದಾರೆ. 45ಕ್ಕೆ 4 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇನ್ನು, ನಿನ್ನೆಯ ಪಂದ್ಯದಲ್ಲಿ ಕೇವಲ 1 ರನ್ಗಳಿಸಿ ನಿರಾಸೆ ಮೂಡಿಸಿದ್ದಾರೆ. ಜೊತೆಗೆ ಬೌಲಿಂಗ್ನಲ್ಲಿ ಒಂದು ಓವರ್ ಮಾಡಿ, 10 ರನ್ ನೀಡಿ ದುಬಾರಿಯಾದರು.
ಬ್ಯಾಟ್ನಿಂದ ಯಾವುದೇ ರನ್ ಬಾರದೇ ಇರೋದು ಆರ್ಸಿಬಿ ಮ್ಯಾನೇಜ್ಮೆಂಟ್ನ ತಲೆ ನೋವಿಗೆ ಕಾರಣವಾಗಿದೆ. ಪಾಂಡ್ಯ ಬದಲಿಗೆ, ಕನ್ನಡಿಗ ಮನೋಜ್ ಭಾಂಡಗೆ ಅವಕಾಶ ಮಾಡಿಕೊಡಬೇಕು ಅನ್ನೋದು ಹಲವರ ವಾದವಾಗಿದೆ.
ಇದನ್ನೂ ಓದಿ: ರಿಕ್ಕಿ ರೈ ಕೇಸ್ನಲ್ಲಿ ನಾಲ್ವರ ವಿರುದ್ಧ FIR.. ಪ್ರಕಾಶ್ ರೈ ವ್ಯಕ್ತಪಡಿಸಿದ ಅನುಮಾನ ಏನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್