ಕೊಹ್ಲಿ, ರಜತ್​ ಅಲ್ಲ; RCB ಕ್ಯಾಪ್ಟನ್ಸಿ ರೇಸ್​ನಲ್ಲಿ ಯಾರು ಊಹಿಸದ ಆಟಗಾರನ ಹೆಸ್ರು!

author-image
Ganesh Nachikethu
Updated On
ನಾಯಕನ ಹುಡುಕಾಟದಲ್ಲಿ RCB; ರಾಹುಲ್, ಪಂತ್ ಅಲ್ಲ.. ಕಪ್ ಗೆದ್ದ ಹೀರೋಗೆ ಗಾಳ..!
Advertisment
  • 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಆರ್​​ಸಿಬಿ ತಯಾರಿ
  • ಸದ್ಯ ಹೊಸ ನಾಯಕನ​ ಹುಡುಕಾಟದಲ್ಲಿರೋ ಆರ್​​ಸಿಬಿ ಟೀಮ್​​
  • ಕ್ಯಾಪ್ಟನ್ಸಿ ರೇಸ್​ನಲ್ಲಿ ಕೊಹ್ಲಿ, ರಜತ್​​ ಜತೆಗೆ ಮತ್ತೋರ್ವ ಸ್ಟಾರ್​ ಹೆಸರು

2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​ಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹೊಸ ಕ್ಯಾಪ್ಟನ್​​ ಹುಡುಕಾಟದಲ್ಲಿದೆ. ಆರ್​​ಸಿಬಿ ತಂಡವನ್ನು ವಿರಾಟ್​ ಕೊಹ್ಲಿ ಮುನ್ನಡೆಸಬಹುದು. ಇಲ್ಲದೆ ಹೋದಲ್ಲಿ ಕೊಹ್ಲಿ ಆಪ್ತ ರಜತ್​ ಪಾಟಿದಾರ್​​ಗೆ ಆರ್​​ಸಿಬಿ ತಂಡದ ಕ್ಯಾಪ್ಟನ್ಸಿ ನೀಡಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ. ಇದರ ಮಧ್ಯೆ ಆರ್​​ಸಿಬಿ ಕ್ಯಾಪ್ಟನ್ಸಿ ರೇಸ್​ನಲ್ಲಿ ಮತ್ತೊಬ್ಬರ ಹೆಸರು ಕೇಳಿ ಬಂದಿದೆ.

ಕ್ಯಾಪ್ಟನ್ಸಿ ರೇಸ್​ನಲ್ಲಿ ಕೃನಾಲ್​ ಹೆಸ್ರು

ಸದ್ಯ ನಡೆಯುತ್ತಿರೋ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಆಲ್​ರೌಂಡರ್​ ಕೃನಾಲ್​ ಪಾಂಡ್ಯ ನಾಯಕತ್ವದಲ್ಲಿ ಬರೋಡಾ ಇತಿಹಾಸ ಸೃಷ್ಟಿಸಿದೆ. ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಬರೋಡ ಬರೋಬ್ಬರಿ 349 ರನ್ ಗಳಿಸಿದ್ದು, ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ ಆಗಿದೆ. ಇದಕ್ಕೆ ಕಾರಣ ಕೃನಾಲ್​ ಪಾಂಡ್ಯ ಆಯ್ಕೆ ಮಾಡಿರೋ ತಂಡ. ಇವರು ಹಲವು ವರ್ಷಗಳಿಂದ ಬರೋಡಾ ತಂಡವನ್ನು ಮುನ್ನಡೆಸುತ್ತಿರೋ ಕಾರಣ ಆರ್​​ಸಿಬಿ ಕ್ಯಾಪ್ಟನ್​ ಆಗಬಹುದು ಎಂದು ಹೇಳಲಾಗುತ್ತಿದೆ.

publive-image

ಬರೋಡಾ ಸಾಧನೆ

ಇಂದೋರ್​​ನಲ್ಲಿ ಸಿಕ್ಕಿಂ ವಿರುದ್ಧ ನಡೆದ ಲೀಗ್​ ಹಂತದ ಕೊನೆಯ ಟಿ20 ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಬರೋಡಾ ಪವರ್​ ಪ್ಲೇನಲ್ಲೇ ಮೊದಲ ವಿಕೆಟ್​ ನಷ್ಟಕ್ಕೆ 92 ರನ್ ಕಲೆ ಹಾಕಿತ್ತು. ಈ ಮೂಲಕ ಅದ್ಭುತ ಆರಂಭ ಪಡೆಯಿತು. ಬರೋಡಾ ಪರ ಬ್ಯಾಟ್​ ಬೀಸಿದ ಶಾಶ್ವತ್ ರಾವತ್ ಕೇವಲ 16 ಎಸೆತಗಳಲ್ಲಿ 43 ರನ್ ಬಾರಿಸಿದ್ರೆ, ಅಭಿಮನ್ಯು ಸಿಂಗ್ ರಜಪೂತ್ 17 ಎಸೆತಗಳಲ್ಲಿ 53 ರನ್ ಚಚ್ಚಿದ್ರು. ರಾವತ್ 4 ಬೌಂಡರಿ ಹಾಗೂ 4 ಸಿಕ್ಸರ್​ ಸಿಡಿಸಿದ್ರೆ, ಅಭಿಮನ್ಯು 4 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದ್ರು. ಇದಾದ ನಂತರ ಮೂರನೇ ಕ್ರಮಾಂಕದಲ್ಲಿ ಕ್ರೀಸ್​​ಗೆ ಬಂದ ಭಾನು ಪನಿಯಾ ಅಬ್ಬರಿಸಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಬೆಂಡೆತ್ತಿದ ಇವರು ಕೇವಲ 51 ಎಸೆತಗಳಲ್ಲಿ 4 ಫೋರ್​ ಮತ್ತು 15 ಸಿಕ್ಸರ್‌ ಜತೆಗೆ ಅಜೇಯ 134 ರನ್‌ ಗಳಿಸಿದ್ರು.

ಬಿರುಸಿನ ಅರ್ಧಶತಕ

ಶಿವಾಲಿಕ್ ಶರ್ಮಾ ಮತ್ತು ವಿಷ್ಣು ಸೋಲಂಕಿ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿದ್ರು. ತಾನು ಆಡಿದ 17 ಎಸೆತಗಳಲ್ಲಿ ಶಿವಾಲಿಕ್ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಮತ್ತೊಂದೆಡೆ ವಿಷ್ಣು ಕೇವಲ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ ಸಹಾಯದಿಂದ 50 ರನ್ ಚಚ್ಚಿದ್ರು. ಬರೋಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 349 ರನ್ ಕಲೆ ಹಾಕಿತು. ಈ ಬೃಹತ್​​ ರನ್‌ಗಳ ಗುರಿ ಬೆನ್ನಟ್ಟಿದ ಸಿಕ್ಕಿಂ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಕೇವಲ 87 ರನ್ ಗಳಿಸಿತು. ಬರೋಡಾ ಬರೋಬ್ಬರಿ 37 ಸಿಕ್ಸರ್​ಗಳ ಸಿಡಿಸಿ ಸಾಧನೆ ಮಾಡಿದೆ.

ಯಾರು ಈ ಕೃನಾಲ್​ ಪಾಂಡ್ಯ?

ಆರ್​ಸಿಬಿ ತಂಡ ಇತ್ತೀಚೆಗೆ ಕೃನಾಲ್​ ಪಾಂಡ್ಯ ಅವರನ್ನು ಬರೋಬ್ಬರಿ 5.75 ಕೋಟಿ ನೀಡಿ ಖರೀದಿ ಮಾಡಿತ್ತು. ಇವರು ಐಪಿಎಲ್​ನಲ್ಲಿ ಈ ಹಿಂದೆ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸಿದ್ದಾರೆ. ಕೃನಾಲ್​ ಪಾಂಡ್ಯ ಬ್ಯಾಟಿಂಗ್​ ಆಲ್​​ರೌಂಡರ್​ ಆಗಿದ್ದು, ಉತ್ತಮವಾಗಿ ಬೌಲಿಂಗ್​ ಮಾಡಬಲ್ಲರು. ಇವರು ರಣಜಿ ಕ್ರಿಕೆಟ್​ನಲ್ಲಿ ಬರೋಡಾ ತಂಡವನ್ನು ಮುನ್ನಡೆಸುತ್ತಿದ್ದು, ಎಷ್ಟೋ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ.

ಇದನ್ನೂ ಓದಿ:ಆರ್​​ಸಿಬಿ ಸೇರಿದ ಬೆನ್ನಲ್ಲೇ ಈ ಆಟಗಾರನಿಗೆ ಖುಲಾಯಿಸಿದ ಅದೃಷ್ಟ; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment