/newsfirstlive-kannada/media/post_attachments/wp-content/uploads/2025/04/KRUNAL-1.jpg)
ಐಪಿಎಲ್ನಲ್ಲಿ ನಿನ್ನೆ ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಪಂದ್ಯ ಕೊನೆಯವರೆಗೂ ರೋಚಕವಾಗಿತ್ತು. ಜಿದ್ದಾಜಿದ್ದಿನ ಹೋರಾಟದಲ್ಲಿ ಕೊನೆಗೂ ಆರ್ಸಿಬಿ ಗೆದ್ದು ಬೀಗಿದೆ.
ಹೇಗಿತ್ತು ಕೊನೆಯ ಓವರ್..?
19ನೇ ಓವರ್ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 6 ವಿಕೆಟ್ ಕಳೆದುಕೊಂಡು 203 ರನ್ಗಳಿಸಿತ್ತು. ಹಾರ್ದಿಕ್ ಪಡೆ ಗೆಲುವು ಸಾಧಿಸಲು ಕೊನೆಯ 6 ಬಾಲ್ನಲ್ಲಿ 19 ರನ್ಗಳು ಬೇಕಾಗಿತ್ತು. ಕ್ಯಾಪ್ಟನ್ ರಜತ್ ಪಾಟೀದಾರ್ ಕೃನಾಲ್ ಪಾಂಡ್ಯಗೆ ಬೌಲಿಂಗ್ ಮಾಡಲು ಬಾಲ್ ಕೈಗೆ ನೀಡಿದರು. 20ನೇ ಓವರ್ನ ಮೊದಲ ಎಸೆತದಲ್ಲೇ ಸ್ಯಾಂಟರ್ ವಿಕೆಟ್ ವಿಕೆಟ್ ಉರುಳಿಸಿದರು. ಸಿಕ್ಸರ್ ಬಾರಿಸಲು ಪ್ರಯತ್ನಿಸಿ ಟಿಮ್ ಡೆವಿಡ್ಗೆ ಕ್ಯಾಚ್ ಒಪ್ಪಿಸಿದರು.
ಇದನ್ನೂ ಓದಿ: ಕೊನೆ ಬಾಲ್ವರೆಗೆ ರಣರೋಚಕ ಐಪಿಎಲ್ ಮ್ಯಾಚ್.. ಮುಂಬೈ ವಿರುದ್ಧ RCB ಜಯಭೇರಿ
ಎರಡನೇ ಬಾಲ್ನಲ್ಲಿ ದೀಪಕ್ ಚಹಾರ್ ವಿಕೆಟ್ ಪಡೆದರು. ಅವರು ಕೂಡ ಸಿಕ್ಸರ್ ಬಾರಿಸಲು ಪ್ರಯತ್ನಿಸಿ, ಡಿಮ್ ಡೆವಿಡ್ಗೆ ಕ್ಯಾಚ್ ಕೊಟ್ಟರು. ನಂತರ ಕ್ರೀಸ್ಗೆ ಬಂದ ಬೋಲ್ಟ್ಗೆ ಮೂರನೇ ಎಸೆತ ಹಾಕಿದರು. ಅದು ವೈಡ್ ಆಯಿತು ನಂತರ ಒಂದು ರನ್ ಗಳಿಸಿದರು. ನಾಲ್ಕನೇ ಎಸೆತದಲ್ಲಿ ನಮನ್ ಧೀರ್ ಬೌಂಡರಿ ಬಾರಿಸಿದರು. ಆಗ ಮುಂಬೈ ಇಂಡಿಯನ್ಸ್ ಮ್ಯಾಚ್ ಟೈ ಮಾಡಿಕೊಳ್ಳುವ ಅವಕಾಶ ಇತ್ತು. ಉಳಿದ ಎರಡು ಬಾಲ್ಗಳಲ್ಲಿ ಎರಡು ಸಿಕ್ಸರ್ಗಳ ಅಗತ್ಯ ಇತ್ತು. ಆದರೆ ಅದಕ್ಕೆ ಕೃನಾಲ್ ಪಾಂಡ್ಯ ಅವಕಾಶ ಮಾಡಿಕೊಡಲಿಲ್ಲ. ಐದನೇ ಬಾಲ್ನಲ್ಲಿ ನಮನ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಆ ಮೂಲಕ ಆರ್ಸಿಬಿ ಗೆಲುವನ್ನು ಖಚಿತ ಮಾಡಿದರು. ಕೊನೆಯ ಒಂದು ಬಾಲ್ ಎದುರಿಸಲು ಜಸ್ಪ್ರಿತಾ ಬುಮ್ರಾ ಬಂದಿದ್ದರು. ಆದರೆ ಬುಮ್ರಾ ಬ್ಯಾಟ್ನಿಂದ ಯಾವುದೇ ರನ್ ಬರಲಿಲ್ಲ.
ಇದನ್ನೂ ಓದಿ: ಅವರೇ ನಮ್ಮ ಹೀರೋ.. ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರು ರಜತ್ ಪಾಟೀದಾರ್..?
19 ರನ್ಗಳನ್ನು ಡಿಪೆಂಡ್ ಮಾಡಿಕೊಂಡ ಕೃನಾಲ್ ಪಾಂಡ್ಯ ಅವರನ್ನು ಕ್ಯಾಪ್ಟನ್ ರಜತ್ ಪಂದ್ಯ ಮುಗಿದ ಬಳಿಕ ಮುನಸಾರೆ ಹೊಗಳಿದರು. ನಮ್ಮ ಬೌಲರ್ಗಳ ಧೈರ್ಯ ಶ್ಲಾಘನೀಯ. ನಿಜಕ್ಕೂ ಅದ್ಭುತ ಪಂದ್ಯವಾಗಿತ್ತು. ಬೌಲರ್ಗಳು ತೋರಿಸಿದ ಧೈರ್ಯ ಅದ್ಭುತವಾಗಿತ್ತು. ಗೆಲುವಿನ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲುತ್ತದೆ. ಕೃನಾಲ್ ಬೌಲಿಂಗ್ ಶೈಲಿ ಅದ್ಭುತವಾಗಿತ್ತು. ಕೊನೆಯ ಓವರ್ ಅಷ್ಟು ಸುಲಭವಾಗಿರಲಿಲ್ಲ. ಬೌಲಿಂಗ್ ಮಾಡಿದ ರೀತಿ ಮತ್ತು ತೋರಿಸಿದ ಧೈರ್ಯ ಅದ್ಭುತ. ಕೊನೆಯ ಓವರ್ ಯಾರಿಗೆ ನೀಡಬೇಕು ಅನ್ನೊದ್ರ ಬಗ್ಗೆ ಚರ್ಚೆ ಆಗಿತ್ತು. ಬಳಿಕ ಕೃನಾಲ್ಗೆ ಬಾಲಿಂಗ್ ನೀಡುವ ಬಗ್ಗೆ ನಿರ್ಧಾರ ಮಾಡಿದ್ವಿ ಎಂದಿದ್ದಾರೆ.
ಇದನ್ನೂ ಓದಿ: ಮಧ್ಯಾಹ್ನ ದ್ವಿತೀಯ PUC ಫಲಿತಾಂಶ.. ಆನ್ಲೈನ್ನಲ್ಲಿ ರಿಸಲ್ಟ್ ನೋಡೋದು ಹೆಂಗೆ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್