ಜೈಸ್ವಾಲ್, ಪಾಂಡ್ಯ ಅಲ್ಲವೇ ಅಲ್ಲ.. IPL ಬದಲಿಸಿದ ಬದುಕು, ಯುವ ಕ್ರಿಕೆಟ್ ಪ್ಲೇಯರ್​ನ ರೋಚಕ ಜರ್ನಿ

author-image
Bheemappa
Updated On
ಜೈಸ್ವಾಲ್, ಪಾಂಡ್ಯ ಅಲ್ಲವೇ ಅಲ್ಲ.. IPL ಬದಲಿಸಿದ ಬದುಕು, ಯುವ ಕ್ರಿಕೆಟ್ ಪ್ಲೇಯರ್​ನ ರೋಚಕ ಜರ್ನಿ
Advertisment
  • ಮ್ಯಾಚ್ ಆಡುವುದಕ್ಕೆ ಹಣ ಕೇಳಿದ್ದರಿಂದ ಗದರಿದ್ದ ತಂದೆ
  • ಕ್ರಿಕೆಟರ್​ ಆಗೋ ಕನಸು, ಶೂ ಖರೀದಿಗೂ ಹಣ ಇರಲಿಲ್ಲ!
  • IPLನಲ್ಲಿ ಲಕ್ಷ ಲಕ್ಷ ಸಂಪಾದನೆ ಮಾಡಿದ್ರು ಕೆಲಸ ಬಿಡದ ಅಪ್ಪ

ಐಪಿಎಲ್​ನಿಂದ ಹಲವು ಆಟಗಾರರ ಜೀವನವೇ ಬದಲಾಗಿದೆ. ಪಾಂಡ್ಯ ಬ್ರದರ್ಸ್​ನಿಂದ ಹಿಡಿದು ಮುಂಬೈನ ರಸ್ತೆ ಬದಿಯಲ್ಲಿ ಪಾನಿಪೂರಿ ಮಾರಿದ್ದ ಜೈಸ್ವಾಲ್, ರಿಂಕು ಸಿಂಗ್​ವರೆಗೆ ಸಾಲು ಸಾಲು ಆಟಗಾರರ ಬದುಕು ಬದಲಾಗಿದೆ. ಒಂದೊತ್ತಿನ ಊಟಕ್ಕೂ ಪರಿತಪಿಸಿದವರು, ತಮ್ಮ ಸಾಮರ್ಥ್ಯದಿಂದ ಕೋಟ್ಯಧಿಪತಿಗಳು ಆಗಿದ್ದಾರೆ. ಇಂಥವರಲ್ಲಿ ಕುಲ್​ದೀಪ್ ಸೇನ್​ ಕೂಡ ಒಬ್ಬರು. ಹಾಗಾದ್ರೆ, ಕುಲ್​​ದೀಪ್ ಸೇನ್​​ ಸಾಧನೆಯ ಆಫ್ ದ ಫೀಲ್ಡ್ ಕಥೆ ಏನು?

ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೇರಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದವರಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಇಂತಹ ಹಲವು ಸ್ಪೂರ್ತಿದಾಯಕ ಕಥೆ ಸಿಗುತ್ತವೆ. ಆ ಪಟ್ಟಿಗೆ ಹೊಸ ಸೇರ್ಪಡೆ ಈ ಕುಲ್​ದೀಪ್ ಸೇನ್.

publive-image

ಇದನ್ನೂ ಓದಿ:IPL Mega Auction; ಅದೃಷ್ಟ ಲಕ್ಷ್ಮಿ.. ರೋಹಿತ್ ಟೀಮ್ ಸೇರಿದ ಧೋನಿಯ ನೆಚ್ಚಿನ ಬೌಲರ್!

ಕಳೆದ ಆವೃತ್ತಿಯಲ್ಲೇ ವೇಗಿ ಕುಲ್​ದೀಪ್ ಸೇನ್ ಹೆಸರು ಕ್ರೀಡಾಭಿಮಾನಿಗಳು ಕೇಳಿದ್ದಾರೆ. ಈತನ ಆಟವನ್ನು ನೋಡಿ ಕೊಂಡಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಈ ಕುಲ್​ದೀಪ್​ ಟೀಮ್ ಇಂಡಿಯಾ ಪರವೂ ಡೆಬ್ಯು ಮಾಡಿದ್ದರು. ಆದ್ರೆ, ಈತನ ಕಡು ಕಷ್ಟ ಮಾತ್ರ ತೀರಿರಲಿಲ್ಲ. ಆದ್ರೀಗ ಮೆಗಾ ಹರಾಜಿನಲ್ಲಿ ಸೇಲಾದ ಬಳಿಕ ಕುಲ್​ದೀಪ್ ಜೀವನ ಬದಲಾಗಿದೆ.

ಕ್ಷೌರಿಕನ ಕುಲ್​ದೀಪ್ ಸೇನ್​​​ ಕ್ರಿಕೆಟರ್​ ಆಗಿದ್ದೇ ರೋಚಕ..!

ಕುಲದೀಪ್ ಸೇನ್.. ಕಡು ಬಡತನದಿಂದ ಬೆಳೆದ ಪ್ರತಿಭೆ. ಚಿಕ್ಕಂದಿನಿಂದ ಕ್ರಿಕೆಟರ್​ ಆಗೋ ಕನಸು ಕಂಡಿದ್ದ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹರಿಹಾಪುರದ ಕುಲ್​ದೀಪ್​ ಸೇನ್​ಗೆ ಬಡತನ ದೊಡ್ಡ ತಡೆಗೋಡೆ ಆಗಿತ್ತು. ಕ್ಷೌರಿಕ ವೃತ್ತಿಯನ್ನ ಮಾಡುತ್ತಿದ್ದ ತಂದೆಯ ಆದಾಯ ಜೀವನ ನಡೆಸೋಕೆ ಆಗುತ್ತಿರಲಿಲ್ಲ. ಇಂತಹ ಕಡು ಬಡತನದ ನಡುವೆ ಕುಲ್​ದೀಪ್​ ಸೆನ್​ ಕ್ರಿಕೆಟರ್​ ಆಗಿದ್ದೇ ರೋಚಕ.

ಅಂದು ಕುಲ್​​ದೀಪ್​ಗೆ 500 ರೂ.ಗೆ ನೋ ಎಂದಿದ್ದ ಅಪ್ಪ..!

ಚಿಕ್ಕಂದಿನಿಂದ ಕ್ರಿಕೆಟ್​​ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಕುಲ್​ದೀಪ್​​, 8ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಒಂದು ಬಾರಿ ಕ್ಷೌರಿಕ ವೃತ್ತಿ ಮಾಡ್ತಿದ್ದ ತಂದೆಯ ಕ್ರಿಕೆಟ್​ ಆಡಲು 500 ರೂಪಾಯಿ ಕೇಳಿ ಹಿಗ್ಗಾಮುಗ್ಗ ಬೈಸಿಕೊಂಡಿದ್ರು. ಅಂದು ಕ್ರಿಕೆಟ್​ನಿಂದ ಮಗನ ಜೀವನ ಹಾಳಾಗುತ್ತೆ. ಹಣವೂ ವ್ಯರ್ಥವಾಗುತ್ತೆ ಎಂದು ಅವರ ತಂದೆ ಯೋಚಿಸಿದ್ದರು. ಆದ್ರೀಗ ಅದೇ ಮಗ ಕ್ರಿಕೆಟ್​ನಿಂದ ಲಕ್ಷಾಧೀಶನಾಗಿದ್ದಾನೆ. ತಂದೆಯನ್ನ ಹೆಮ್ಮೆ ಪಡುವಂತೆ ಮಾಡಿದ್ದಾನೆ.

ಬ್ಯಾಟ್ಸ್​ಮನ್ ಆಗಲು ಬಯಸಿದ್ದವ ಆಗಿದ್ದು ಬೌಲರ್.!

ಕ್ರಿಕೆಟರ್​ ಆಗೋ ಕನಸು ಕಂಡಿದ್ದ ಸೇನ್​​​ಗೆ ಬ್ಯಾಟ್ಸ್​ಮನ್ ಆಗಲು ಬಯಸಿದ್ದರು. ಆದ್ರೆ, ಬಾಲ್ಯದ ಕೋಚ್ ಅರಿಲ್​ ಆ್ಯಂಟೋನಿ, ಬೌಲಿಂಗ್ ಮಾಡಲು ಸೂಚಿಸಿದ್ದರು. ಕೋಚ್ ಮಾತು ಕೇಳಿದ ಕುಲ್​ದೀಪ್, ಬೌಲಿಂಗ್​ನಲ್ಲಿ ಮಿಂಚಿದರು. ಬಡವ ಎಂಬ ಕಾರಣಕ್ಕೆ ಕೋಚ್​, ಕುಲ್​ದೀಪ್ ಸೇನ್​ಗೆ ಉಚಿತ ಟ್ರೈನಿಂಗ್ ನೀಡಿದ್ದರು. ಕ್ಲಬ್ ಕ್ರಿಕೆಟ್​ ಟು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಕುಲ್​​ದೀಪ್​ಗೆ ಅವತ್ತು ಉತ್ತಮ ಶೂ ಇರಲಿಲ್ಲ. ಆಗ ಕುಲ್​ದೀಪ್​ ಕಷ್ಟ ನೋಡಿದ್ದ​ ಟೀಮ್​ ಇಂಡಿಯಾ ಮಾಜಿ ವೇಗಿ ಈಶ್ವರ್​ ಪಾಂಡೆ ತಮ್ಮ ಶೂ ನೀಡಿದ್ದರು. ಇಲ್ಲಿಂದ ಆರಂಭವಾದ ಜರ್ನಿ ಬಳಿಕ ಐಪಿಎಲ್​ಗೆ ಕಾಲಿಡುವಂತೆ ಮಾಡಿತ್ತು.

3 ವರ್ಷ 20 ಲಕ್ಷ.. ಈಗ 80 ಲಕ್ಷಕ್ಕೆ ಪಂಜಾಬ್ ಪಾಲು..!

2018-19ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಕುಲ್​ದೀಪ್ ಸೇನ್​​ ಐಪಿಎಲ್ ಬಾಗಿಲು ತೆರೆಯಲು ಕಾದಿದ್ದು 3 ವರ್ಷ. 2022ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್​ಗೆ 20 ಲಕ್ಷಕ್ಕೆ ಸೇಲಾಗಿದ್ದ ಕುಲ್​ದೀಪ್​​​​​​​​, ಅದೇ ವರ್ಷ ಸಿಕ್ಕ ಅವಕಾಶದಲ್ಲಿ ಮ್ಯಾಚ್ ವಿನ್ನರ್ ಅನ್ನೋದನ್ನ ನಿರೂಪಿಸಿವರು. ಅಷ್ಟೇ ಅಲ್ಲ, ಈ ಪರ್ಫಾಮೆನ್ಸ್​ ಆಧಾರದಲ್ಲಿ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದರು. ಬಾಂಗ್ಲಾ ಎದುರು ಏಕದಿನಕ್ಕೆ ಡೆಬ್ಯೂ ಮಾಡಿದ್ದರು. ಆದರೆ, ಜೀವನ ಮಾತ್ರ ಬದಲಾಗಲಿಲ್ಲ. ಇದೀಗ ಐಪಿಎಲ್​ನಲ್ಲಿ 80 ಲಕ್ಷಕ್ಕೆ ಪಂಜಾಬ್ ಕಿಂಗ್ಸ್​ ಪಾಲಾದ ಬಳಿಕ ಕಷ್ಟಗಳು ದೂರಾಗಿ ಜೀವನ ಬದಲಾಗುವ ಭರವಸೆ ಹುಟ್ಟಿದೆ.

publive-image

ಮಗ ಮೆಗಾ ಹರಾಜಿನಲ್ಲಿ 80 ಲಕ್ಷಕ್ಕೆ ಸೇಲಾದ್ರೂ, ಅಪ್ಪ ಮಾತ್ರ ಜೀವನಕ್ಕೆ ದಾರಿ ದೀಪವಾದ ಕ್ಷೌರಿಕನ ಕೆಲಸ ಬಿಟ್ಟಿಲ್ಲ. ಇಂದಿಗೂ ತಂದೆ ಅದೇ ವೃತ್ತಿಯನ್ನ ಮುಂದುವರೆಸಿದ್ದಾರೆ. ಮುಂದೆ ಅದನ್ನ ಬಿಡಲ್ಲ ಅನ್ನೋ ಮಾತನ್ನೂ ಆಡುತ್ತಿದ್ದಾರೆ.

ಕಡು ಬಡತನದಲ್ಲಿ ಬೆಳೆದು ರೋಚಕ ರೀತಿಯಲ್ಲಿ ಕ್ರಿಕೆಟರ್​ ಆಗಿ ರೂಪುಗೊಂಡಿರುವ ಕುಲ್​ದೀಪ್​ ಸೇನ್​, ಜೀವನದ ಸಂಕಷ್ಟಗಳೆಲ್ಲಾ ದೂರಾಗಲಿ. ಈ ಬಾರಿಯ ಐಪಿಎಲ್​ನಲ್ಲಿ ಮಿಂಚು ಹರಿಸಿ ಮತ್ತಷ್ಟು ಎತ್ತರಕ್ಕೆ ಬೆಳಯಲಿ. ಯುವ ಪೀಳಿಗೆಗೆ ಮಾದರಿ ಆಗುವಂತಾಗಲಿ ಅನ್ನೋದೇ ಎಲ್ಲರ ಆಶಯ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment