/newsfirstlive-kannada/media/post_attachments/wp-content/uploads/2025/03/KL_RAHUL-3.jpg)
ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ತಂಡ 81 ರನ್​ಗೆ ಮೂರು ಪ್ರಮುಖ ವಿಕೆಟ್ ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರ ಸ್ಪಿನ್​ ಬೌಲರ್ಸ್ ಪರಾಕ್ರಮ ಮೆರೆದಿದ್ದಾರೆ.
ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಂ​ನಲ್ಲಿ ಫೈನಲ್​ ಪಂದ್ಯ ನಡೆಯುತ್ತಿದೆ. ಇದರಲ್ಲಿ ಟಾಸ್ ಗೆದ್ದ ಕಿವೀಸ್ ನಾಯಕ ಮಿಚೆಲ್ ಸ್ಯಾಟ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ವಿಲ್ ಯಂಗ್ ಹಾಗೂ ಕನ್ನಡಿಗ ರಚಿನ್ ರವೀಂದ್ರ ಬ್ಯಾಟಿಂಗ್ ಆಗಮಿಸಿದ್ದರು. ಬೌಲಿಂಗ್ ಮಾಡುತ್ತಿರುವ ಭಾರತದ ಆಟಗಾರರು ಆರಂಭದಲ್ಲೇ ಉತ್ತಮ ಲಯ ಕಂಡುಕೊಂಡಿದ್ದು ಓಪನರ್ಸ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.
ಇದನ್ನೂ ಓದಿ: ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ನಟಿ ಸುಕೃತಾಳ ಆಸೆ ಈಡೇರಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್; ಏನದು?
/newsfirstlive-kannada/media/post_attachments/wp-content/uploads/2025/03/Kuldeep_Yadav.jpg)
ಸ್ಪಿನ್​ನಲ್ಲಿ ಮ್ಯಾಜಿಕ್ ಮಾಡಿದ ವರುಣ್ ಚಕ್ರವರ್ತಿ, ವಿಲ್ ಯಂಗ್ ಅವರನ್ನು ಎಲ್​ಬಿಡಬ್ಲು ಬಲಿಗೆ ಕೆಡವಿದರು. ಈ ಮೂಲಕ ವಿಲ್ ಯಂಗ್ ಕೇವಲ 15 ರನ್​ ಗಳಿಸಿ ಪೆವಿಲಿಯನ್ ಅತ್ತ ನಡೆದರು. ಇದಾದ ಮೇಲೆ ರಚಿನ್ ರವೀಂದ್ರ 37 ರನ್​ ಗಳಿಸಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಈ ವೇಳೆ ಬೌಲಿಂಗ್ ಮಾಡಲು ಬಂದ ಕುಲ್​ದೀಪ್ ಯಾದವ್​ ಕಮಾಲ್ ಮಾಡಿದರು. ರಚಿನ್ ರವೀಂದ್ರ ಅವರನ್ನು ಕ್ಲೀನ್ ಬೋಲ್ಡ್​ ಮಾಡಿ, ಸಂಭ್ರಮಿಸಿದರು.
ಇದಾದ ಮೇಲೆ ಕ್ರೀಸ್​ಗೆ ಬ್ಯಾಟಿಂಗ್ ಮಾಡಲು ಬಂದ ಕೀವಿಸ್​ನ ಹಿರಿಯ ಆಟಗಾರ ಕೇನ್ ವಿಲಿಯಮ್ಸನ್ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಹೋಗಿದ್ದಾರೆ. ಕುಲ್​ದೀಪ್ ಯಾದವ್ ಅವರು ಮಾಡಿದ ಸ್ಪಿನ್ ಬೌಲ್ ಅನ್ನು ಸಿಂಪಲ್ ಆಗಿ ಹೊಡೆದರು. ಆದರೆ ಆ ಬಾಲ್ ನೇರ ಕುಲ್​ದೀಪ್ ಯಾದವ್ ಕೈ ಸೇರಿತು. ಸದ್ಯ ಕಿವೀಸ್ 3 ಮುಖ್ಯವಾದ ವಿಕೆಟ್​ಗಳನ್ನು ಕಳೆದುಕೊಂಡಿದೆ. 15 ಓವರ್​​ಗೆ 83 ರನ್​ಗಳನ್ನು ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.
ಟೀಮ್​ ಇಂಡಿಯಾ ಪ್ಲೇಯಿಂಗ್-11
ರೋಹಿತ್ ಶರ್ಮಾ (ನಾಯಕ), ಶುಭ್​ಮನ್​ ಗಿಲ್, ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕುಲ್​ದೀಪ್ ಯಾದವ್, ಶಮಿ, ವರುಣ್ ಚಕ್ರವರ್ತಿ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us