ಜಯಂತ್ನ ಹುಚ್ಚುತನಕ್ಕೆ ಸೀರಿಯಲ್ ವೀಕ್ಷಕರು ಕೆಂಡಾಮಂಡಲ
ಜಯಂತ್ನನ್ನ ಧಾರಾವಾಹಿಯಿಂದ ತೆಗೆಯಿರಿ ಎನ್ನುತ್ತಿರೋ ಫ್ಯಾನ್ಸ್!
ಅದ್ಭುತ ನಟನೆ ಮೂಲಕವೇ ವೀಕ್ಷಕರ ಮನದಲ್ಲಿ ಉಳಿದುಕೊಂಡ ನಟ
ಕಾದಂಬರಿ, ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ಅಮೃತವರ್ಷಿಣಿ, ಸಿಲ್ಲಿ ಲಲ್ಲಿ, ಮನೆಗೊಂದು ಮೂರು ಬಾಗಿಲು, ರಂಗೋಲಿ ಹೀಗೆ ಕನ್ನಡದ ಸಾಕಷ್ಟು ಸೀರಿಯಲ್ಗಳನ್ನು ವೀಕ್ಷಕರು ಇನ್ನೂ ಮರೆತಿಲ್ಲ. ಕಾರಣವೆಂದರೆ ಕಿರುತೆರೆ ನಟ ಹಾಗೂ ನಟಿಯರ ಅದ್ಭುತ ನಟನೆಗೆ ಜನ ಹುಚ್ಚೆದ್ದು ನೋಡುತ್ತಿದ್ದರು. ಅದೇ ಕ್ರೇಜ್ನಂತೆ ಈಗ ಮತ್ತೊಂದು ಸೀರಿಯಲ್ ಅನ್ನು ಜನ ಹುಚ್ಚೆದ್ದು ನೋಡುತ್ತಿದ್ದಾರೆ.
ಅದುವೆ ಲಕ್ಷ್ಮೀ ನಿವಾಸ ಧಾರಾವಾಹಿ. ಹೌದು, ಲಕ್ಷ್ಮೀ ನಿವಾಸ ಸೀರಿಯಲ್ ವಿಭಿನ್ನವಾಗಿ ಮೂಡಿಬರುತ್ತಿದ್ದು, ಪ್ರತಿ ಪಾತ್ರಗಳು ವಿಶೇಷವಾಗಿವೆ. ದೊಡ್ಡ ತಾರಾಬಳಗ ಇರೋ ಧಾರಾವಾಹಿಯಲ್ಲಿ ನೀನಾ? ನಾನಾ? ಎನ್ನುವಂತೆ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ ಎಲ್ಲಾ ಕಲಾವಿದರು. ಅದರಲ್ಲೂ ಜಯಂತ್ ಪಾತ್ರ ಎಕ್ಸ್ಟ್ರಾಡಿನರಿ ಆಗಿದೆ. ತನಗೆ ಸಂಬಂಧಪಟ್ಟ ವಸ್ತುವಾಗಲಿ, ವ್ಯಕ್ತಿ ಆಗಲಿ ನನಗೆ ಮಾತ್ರ ಸ್ವಂತ ಅನ್ನೋ ಜಯಂತ್ ಹುಚ್ಚುತನ ವೀಕ್ಷಕರನ್ನ ಕೇರಳಿಸುತ್ತಿದೆ. ಅದರಲ್ಲೂ ಜಾನು ಹಾಗೂ ಜಯಂತ್ ಜೋಡಿಗೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.
View this post on Instagram
ಇದನ್ನೂ ಓದಿ: ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ಇನ್ನು, ಜಾನು ಜೊತೆಗೆ ವರ್ತಿಸೋ ರೀತಿಗೆ ಸೈಕೋ ಜಯಂತ್ನನ್ನ ಮೊದಲ ಧಾರಾವಾಹಿಯಿಂದ ತೆಗೆಯಿರಿ. ಏನಪ್ಪ ಈ ಜಯಂತ್ ನೋಡಿದ್ರೇ ನಮಗೆ ಭಯ ಆಗುತ್ತೆ. ಪಾಪ ಜಾನು ಹೇಗೆ ಸಹಿಸಿಕೊಂಡಿದ್ದಾಳೋ ಅಂತ ವೀಕ್ಷಕರು ಜಯಂತ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಜಯಂತ್ ಪಾತ್ರ ಇಷ್ಟೊಂದು ಅದ್ಭುತವಾಗಿ ಮೂಡಿಬರೋಕೆ ಕಾರಣ ಜಯಂತ್ಗೆ ಜೀವ ತುಂಬಿರೋ ಕಲಾವಿದ ದೀಪಕ್ ಸುಬ್ರಮಣ್ಯ. ಮೊನ್ನೆ ಪಾತ್ರ ಮುಗಿಸಿ ಹೊರಟಿದ್ದ ದೀಪಕ್ ಅವರಿಗೆ ಅಜ್ಜಿಯೊಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
View this post on Instagram
ನೀನು ಮಾಡ್ತಿರೋದು ತಪ್ಪು. ಗ್ಲಾಸ್ನ ಯಾಕೆ ಒಡೆದೆ. ಬೇಕಂತನೇ ರಕ್ತ ಬರಿಸಿಕೊಂಡೆ ನೀನು ಮಾಡಿದ್ದು ತಪ್ಪು ಎಂದು ಮುಗ್ಧವಾಗಿ ಬೈದಿದ್ದಾರೆ ಅಜ್ಜಿ. ಈ ಮಾತುಗಳನ್ನ ಪ್ರೀತಿಯಿಂದಲೇ ಜಯಂತ್ ನಗುನಗುತಾ ಮಾತುಗಳನ್ನ ಸ್ವೀಕರಿಸಿದ್ದಾರೆ.
ಒಬ್ಬ ಕಲಾವಿದನಿಗೆ ಇದಕ್ಕಂತ ಇನ್ನೇನೂ ಬೇಕು ಹೇಳಿ. ಮಾಡಿದ ಪಾತ್ರ ಜನರ ಮನಸ್ಸಿಗೆ ಆಳವಾಗಿ ನಾಟಿದೆ ಅಂದ್ರೇ ಅದು ಪಾತ್ರದ ಜೊತೆಗೆ ಕಲಾವಿದನ ಗೆಲುವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜಯಂತ್ನ ಹುಚ್ಚುತನಕ್ಕೆ ಸೀರಿಯಲ್ ವೀಕ್ಷಕರು ಕೆಂಡಾಮಂಡಲ
ಜಯಂತ್ನನ್ನ ಧಾರಾವಾಹಿಯಿಂದ ತೆಗೆಯಿರಿ ಎನ್ನುತ್ತಿರೋ ಫ್ಯಾನ್ಸ್!
ಅದ್ಭುತ ನಟನೆ ಮೂಲಕವೇ ವೀಕ್ಷಕರ ಮನದಲ್ಲಿ ಉಳಿದುಕೊಂಡ ನಟ
ಕಾದಂಬರಿ, ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ, ಅಮೃತವರ್ಷಿಣಿ, ಸಿಲ್ಲಿ ಲಲ್ಲಿ, ಮನೆಗೊಂದು ಮೂರು ಬಾಗಿಲು, ರಂಗೋಲಿ ಹೀಗೆ ಕನ್ನಡದ ಸಾಕಷ್ಟು ಸೀರಿಯಲ್ಗಳನ್ನು ವೀಕ್ಷಕರು ಇನ್ನೂ ಮರೆತಿಲ್ಲ. ಕಾರಣವೆಂದರೆ ಕಿರುತೆರೆ ನಟ ಹಾಗೂ ನಟಿಯರ ಅದ್ಭುತ ನಟನೆಗೆ ಜನ ಹುಚ್ಚೆದ್ದು ನೋಡುತ್ತಿದ್ದರು. ಅದೇ ಕ್ರೇಜ್ನಂತೆ ಈಗ ಮತ್ತೊಂದು ಸೀರಿಯಲ್ ಅನ್ನು ಜನ ಹುಚ್ಚೆದ್ದು ನೋಡುತ್ತಿದ್ದಾರೆ.
ಅದುವೆ ಲಕ್ಷ್ಮೀ ನಿವಾಸ ಧಾರಾವಾಹಿ. ಹೌದು, ಲಕ್ಷ್ಮೀ ನಿವಾಸ ಸೀರಿಯಲ್ ವಿಭಿನ್ನವಾಗಿ ಮೂಡಿಬರುತ್ತಿದ್ದು, ಪ್ರತಿ ಪಾತ್ರಗಳು ವಿಶೇಷವಾಗಿವೆ. ದೊಡ್ಡ ತಾರಾಬಳಗ ಇರೋ ಧಾರಾವಾಹಿಯಲ್ಲಿ ನೀನಾ? ನಾನಾ? ಎನ್ನುವಂತೆ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ ಎಲ್ಲಾ ಕಲಾವಿದರು. ಅದರಲ್ಲೂ ಜಯಂತ್ ಪಾತ್ರ ಎಕ್ಸ್ಟ್ರಾಡಿನರಿ ಆಗಿದೆ. ತನಗೆ ಸಂಬಂಧಪಟ್ಟ ವಸ್ತುವಾಗಲಿ, ವ್ಯಕ್ತಿ ಆಗಲಿ ನನಗೆ ಮಾತ್ರ ಸ್ವಂತ ಅನ್ನೋ ಜಯಂತ್ ಹುಚ್ಚುತನ ವೀಕ್ಷಕರನ್ನ ಕೇರಳಿಸುತ್ತಿದೆ. ಅದರಲ್ಲೂ ಜಾನು ಹಾಗೂ ಜಯಂತ್ ಜೋಡಿಗೆ ವೀಕ್ಷಕರು ಬಹಳ ಇಷ್ಟಪಟ್ಟಿದ್ದಾರೆ.
View this post on Instagram
ಇದನ್ನೂ ಓದಿ: ಅಂತೆ-ಕಂತೆ ವದಂತಿಗಳ ಮಧ್ಯೆ ಟ್ವೀಟ್ ಮಾಡಿ ನಾಲ್ಕು ಫೋಟೋ ಶೇರ್ ಮಾಡಿದ ಹಾರ್ದಿಕ್ ಪಾಂಡ್ಯ
ಇನ್ನು, ಜಾನು ಜೊತೆಗೆ ವರ್ತಿಸೋ ರೀತಿಗೆ ಸೈಕೋ ಜಯಂತ್ನನ್ನ ಮೊದಲ ಧಾರಾವಾಹಿಯಿಂದ ತೆಗೆಯಿರಿ. ಏನಪ್ಪ ಈ ಜಯಂತ್ ನೋಡಿದ್ರೇ ನಮಗೆ ಭಯ ಆಗುತ್ತೆ. ಪಾಪ ಜಾನು ಹೇಗೆ ಸಹಿಸಿಕೊಂಡಿದ್ದಾಳೋ ಅಂತ ವೀಕ್ಷಕರು ಜಯಂತ್ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಜಯಂತ್ ಪಾತ್ರ ಇಷ್ಟೊಂದು ಅದ್ಭುತವಾಗಿ ಮೂಡಿಬರೋಕೆ ಕಾರಣ ಜಯಂತ್ಗೆ ಜೀವ ತುಂಬಿರೋ ಕಲಾವಿದ ದೀಪಕ್ ಸುಬ್ರಮಣ್ಯ. ಮೊನ್ನೆ ಪಾತ್ರ ಮುಗಿಸಿ ಹೊರಟಿದ್ದ ದೀಪಕ್ ಅವರಿಗೆ ಅಜ್ಜಿಯೊಬ್ಬರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
View this post on Instagram
ನೀನು ಮಾಡ್ತಿರೋದು ತಪ್ಪು. ಗ್ಲಾಸ್ನ ಯಾಕೆ ಒಡೆದೆ. ಬೇಕಂತನೇ ರಕ್ತ ಬರಿಸಿಕೊಂಡೆ ನೀನು ಮಾಡಿದ್ದು ತಪ್ಪು ಎಂದು ಮುಗ್ಧವಾಗಿ ಬೈದಿದ್ದಾರೆ ಅಜ್ಜಿ. ಈ ಮಾತುಗಳನ್ನ ಪ್ರೀತಿಯಿಂದಲೇ ಜಯಂತ್ ನಗುನಗುತಾ ಮಾತುಗಳನ್ನ ಸ್ವೀಕರಿಸಿದ್ದಾರೆ.
ಒಬ್ಬ ಕಲಾವಿದನಿಗೆ ಇದಕ್ಕಂತ ಇನ್ನೇನೂ ಬೇಕು ಹೇಳಿ. ಮಾಡಿದ ಪಾತ್ರ ಜನರ ಮನಸ್ಸಿಗೆ ಆಳವಾಗಿ ನಾಟಿದೆ ಅಂದ್ರೇ ಅದು ಪಾತ್ರದ ಜೊತೆಗೆ ಕಲಾವಿದನ ಗೆಲುವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ