/newsfirstlive-kannada/media/post_attachments/wp-content/uploads/2024/11/CHANDANA_WEDDING.jpg)
ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿರುವ ನಟಿ ಚಂದನಾ ಅನಂತಕೃಷ್ಣ ಅವರು ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ನಟಿ ಲಲಿತಾಂಜಲಿ ಅವರ ಪುತ್ರ ಪ್ರತ್ಯಕ್ಷ್ ಹಾಗೂ ನಟಿ ಚಂದನಾ ಅನಂತಕೃಷ್ಣ ಅವರು ಶುಭ ಮುಹೂರ್ತದಲ್ಲಿ ಇಂದು ಮದುವೆ ಆಗಿದ್ದಾರೆ.
ಚಂದನಾ ಅನಂತಕೃಷ್ಣ ಹಾಗೂ ಪ್ರತ್ಯಕ್ಷ್ ಅವರು ಹಿರಿಯರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಿಲಿಕಾನ್ ಸಿಟಿಯಲ್ಲೇ ವಿವಾಹ ಸಮಾರಂಭ ನಡೆದಿದ್ದು ಮದುವೆಗೆ ಎರಡು ಕಡೆಯ ಕುಟುಂಬಸ್ಥರು, ಬಂದು-ಬಳಗ, ಕಿರುತೆರೆಯ ಕಲಾವಿದರು, ಬಿಗ್ಬಾಸ್ನ ಮಾಜಿ ಸ್ಪರ್ಧಿಗಳು, ನವ ಜೋಡಿಗೆ ಇರುವ ಸ್ನೇಹಿತರು ಸೇರಿದಂತೆ ಹಲವು ಜನರು ಭಾಗಿಯಾಗಿದ್ದರು. ಇದು ಪಕ್ಕಾ ಕುಟುಂಬಸ್ಥರು ನಿಶ್ಚಯಿಸಿರುವ ಮದುವೆ ಆಗಿದ್ದು ಶುಭ ಮುಹೂರ್ತದಲ್ಲಿ ಇಬ್ಬರು ಹೊಸ ಬಾಳಿಗೆ ವೆಲ್ಕಮ್ ಹೇಳಿದ್ದಾರೆ.
ಇದನ್ನೂ ಓದಿ:VIDEO: ಭಾವಿ ಪತಿ ಜತೆ ಚಿನ್ನುಮರಿ ಜಬರ್ದಸ್ತ್ ಡ್ಯಾನ್ಸ್; ಚಂದನಾ ಅನಂತಕೃಷ್ಣ ಫ್ಯಾನ್ಸ್ ಫುಲ್ ಖುಷ್
ರಾಜಾ ರಾಣಿ, ಹೂಮಳೆ ಸೀರಿಯಲ್ಗಳಲ್ಲಿ ಮಿಂಚಿದ್ದ ಚಂದನಾ ಅನಂತಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ನ ಚಿನ್ನುಮರಿ ಜಾಹ್ನವಿ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಪ್ರತಿ ಮನೆ ಮನೆಗೂ ಗೊತ್ತಿರುವ ನಟಿ ಚಂದನಾ ಅವರು ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚಂದನಾ, ಬಿಕಾಂ ಓದಿದ್ದು ರಾಜಾ ರಾಣಿ, ಮುದ್ದು ಮಣಿಗಳು ಸೀರಿಯಲ್ಗಳಲ್ಲಿ ಈ ಮೊದಲು ನಟಿಸಿದ್ದರು. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿ ಕೂಡ ಆಗಿದ್ದರು.
ಪ್ರತ್ಯಕ್ಷ ಮೂಲತಃ ಚಿಕ್ಕಮಗಳೂರುನವರು. ಎಂಟೆಕ್ ವಿದ್ಯಾಭ್ಯಾಸ ಮಾಡಿದ್ದು, ಸದ್ಯ ಬೆಂಗಳೂರಿನಲ್ಲೇ ಸ್ವಂತ ಉದ್ಯಮ ಹೊಂದಿದ್ದಾರೆ. ಸಿನಿಮಾ ಕುಟುಂಬದ ಹಿನ್ನಲೆ ಹೊಂದಿರುವ ಪ್ರತ್ಯಕ್ಷ, ನಟ ದಿವಂಗತ ಉದಯ್ ಹುತ್ತಿನಗದ್ದೆ ಹಾಗೂ ತಾಯಿ ಲಲಿತಾಂಜಲಿ ಉದಯ್ ಅವರ ಮುದ್ದಿನ ಮಗ. ಡಾ.ರಾಜ್ ಕುಮಾರ್ ಸಿನಿಮಾಗಳಲ್ಲಿ ಉದಯ್ ಅವರು ಅಭಿನಯಿಸಿದ್ದರು. ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ಇವರು ಆರಂಭ ಚಿತ್ರದ ಮೂಲಕ ಕನ್ನಡ ಸಿನಿ ರಂಗಕ್ಕೆ ಪ್ರವೇಶಿಸಿದ್ದರು. ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟ ದಿವಂಗತ ಉದಯ್ ಅವರು ಅಭಿನಯ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ