ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ
ಕೋಯಿಕ್ಕೋಡ್ ಮೂಲದ ಅರ್ಜುನ್ ನಾಪತ್ತೆಯಾಗಿ ಇಂದಿಗೆ 10 ದಿನ
ಸ್ನೇಹಿತರ ಜೊತೆಗಿರುವ ಅರ್ಜುನ್ ರೀಲ್ಸ್ ವಿಡಿಯೋ ವೈರಲ್
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ ಕೊನೆಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ಹರಿದಾಡುತ್ತಿದೆ.
ಕೇರಳದ ಕೋಯಿಕ್ಕೋಡ್ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಲಾರಿ ಮೂಲಕ ಟಿಂಬರ್ ಸಾಗಿಸುತ್ತಿದ್ದರು. ಲಾರಿ ಚಲಾಯಿಸುವ ವೇಳೆ ಶಿರೂರು ಬಳಿ ಲಾರಿ ನಿಲ್ಲಿಸಿದ್ದಾರೆ. ಆದರೆ ಮಳೆಗೆ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿದಿದೆ ಪರಿಣಾಮ ಲಾರಿ ಜೊತೆಗೆ ಅರ್ಜುನ್ ನಾಪತ್ತೆಯಾಗಿದ್ದಾರೆ.
ಅರ್ಜುನ್ ಗೆ ಜುಲೈ 15ರಂದು ರಾತ್ರಿ 2.47 ಕ್ಕೆ ಮತ್ತೊಂದು ಲಾರಿ ಚಾಲಕ ಕರೆ ಮಾಡಿದ್ದನು. 3.45 ರ ವೇಳೆಗೆ ನಿದ್ದೆ ಬರುತ್ತಿದೆ ಎಂದು ಶಿರೂರಿನಲ್ಲಿ ಲಾರಿ ನಿಲ್ಲಿಸಿ ಅರ್ಜುನ್ ಮಲಗಿದ್ದಾರೆ. ಆದರೆ ಜುಲೈ 16ರಂದು ಬೆಳಗ್ಗೆ 8:30 ಸುಮಾರಿಗೆ ಗುಡ್ಡ ಕುಸಿದಿದೆ. ಸದ್ಯ ಅರ್ಜುನ್ ಲಾರಿ ನದಿಯೊಳಗೆ ಸಿಲುಕಿದೆ ಎಂದು ತಿಳಿದುಬಂದಿದೆ. ಗಂಗಾವಳಿ ನದಿಯಲ್ಲಿ ಲಾರಿ ತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ.
ಅರ್ಜುನ್ ಕೊನೆಯ ವಿಡಿಯೋ
ಅರ್ಜುನ್ ಜೋಯಿಡಾದ ರಾಮನಗರದಲ್ಲಿ ಸ್ನೇಹಿತರ ಜೊತೆ ಇದ್ದ ವಿಡಿಯೋ ವೈರಲ್ ಆಗಿದೆ. ಟಿಂಬರ್ ತುಂಬಲು ರಾಮನಗರಕ್ಕೆ ಅರ್ಜುನ್ ಬಂದಿದ್ದರು. ಈ ವೇಳೆ ಕಾಡಿನಲ್ಲಿ ಅಡುಗೆ ಮಾಡುವಾಗ ಸ್ನೇಹಿತರು ರೀಲ್ಸ್ ಮಾಡಿದ್ದರು. ಎರಡು ಲಾರಿಯಲ್ಲಿ ಟಿಂಬರ್ ತೆಗೆದುಕೊಂಡು ಹೋಗಲು ಕೇರಳದಿಂದ ಬಂದಿದ್ದರು. ಸದ್ಯ ಅರ್ಜುನ್ ಕೊನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ
ಕೋಯಿಕ್ಕೋಡ್ ಮೂಲದ ಅರ್ಜುನ್ ನಾಪತ್ತೆಯಾಗಿ ಇಂದಿಗೆ 10 ದಿನ
ಸ್ನೇಹಿತರ ಜೊತೆಗಿರುವ ಅರ್ಜುನ್ ರೀಲ್ಸ್ ವಿಡಿಯೋ ವೈರಲ್
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಲಾರಿ ಚಾಲಕ ಅರ್ಜುನ್ ಕೊನೆಯ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ಹರಿದಾಡುತ್ತಿದೆ.
ಕೇರಳದ ಕೋಯಿಕ್ಕೋಡ್ ಕಂಡ್ಯಕ್ಕಲ್ ಮೂಲದ ಅರ್ಜುನ್ (30) ಲಾರಿ ಮೂಲಕ ಟಿಂಬರ್ ಸಾಗಿಸುತ್ತಿದ್ದರು. ಲಾರಿ ಚಲಾಯಿಸುವ ವೇಳೆ ಶಿರೂರು ಬಳಿ ಲಾರಿ ನಿಲ್ಲಿಸಿದ್ದಾರೆ. ಆದರೆ ಮಳೆಗೆ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡೆ ಕುಸಿದಿದೆ ಪರಿಣಾಮ ಲಾರಿ ಜೊತೆಗೆ ಅರ್ಜುನ್ ನಾಪತ್ತೆಯಾಗಿದ್ದಾರೆ.
ಅರ್ಜುನ್ ಗೆ ಜುಲೈ 15ರಂದು ರಾತ್ರಿ 2.47 ಕ್ಕೆ ಮತ್ತೊಂದು ಲಾರಿ ಚಾಲಕ ಕರೆ ಮಾಡಿದ್ದನು. 3.45 ರ ವೇಳೆಗೆ ನಿದ್ದೆ ಬರುತ್ತಿದೆ ಎಂದು ಶಿರೂರಿನಲ್ಲಿ ಲಾರಿ ನಿಲ್ಲಿಸಿ ಅರ್ಜುನ್ ಮಲಗಿದ್ದಾರೆ. ಆದರೆ ಜುಲೈ 16ರಂದು ಬೆಳಗ್ಗೆ 8:30 ಸುಮಾರಿಗೆ ಗುಡ್ಡ ಕುಸಿದಿದೆ. ಸದ್ಯ ಅರ್ಜುನ್ ಲಾರಿ ನದಿಯೊಳಗೆ ಸಿಲುಕಿದೆ ಎಂದು ತಿಳಿದುಬಂದಿದೆ. ಗಂಗಾವಳಿ ನದಿಯಲ್ಲಿ ಲಾರಿ ತೆಗೆಯಲು ಕಾರ್ಯಾಚರಣೆ ನಡೆಯುತ್ತಿದೆ.
ಅರ್ಜುನ್ ಕೊನೆಯ ವಿಡಿಯೋ
ಅರ್ಜುನ್ ಜೋಯಿಡಾದ ರಾಮನಗರದಲ್ಲಿ ಸ್ನೇಹಿತರ ಜೊತೆ ಇದ್ದ ವಿಡಿಯೋ ವೈರಲ್ ಆಗಿದೆ. ಟಿಂಬರ್ ತುಂಬಲು ರಾಮನಗರಕ್ಕೆ ಅರ್ಜುನ್ ಬಂದಿದ್ದರು. ಈ ವೇಳೆ ಕಾಡಿನಲ್ಲಿ ಅಡುಗೆ ಮಾಡುವಾಗ ಸ್ನೇಹಿತರು ರೀಲ್ಸ್ ಮಾಡಿದ್ದರು. ಎರಡು ಲಾರಿಯಲ್ಲಿ ಟಿಂಬರ್ ತೆಗೆದುಕೊಂಡು ಹೋಗಲು ಕೇರಳದಿಂದ ಬಂದಿದ್ದರು. ಸದ್ಯ ಅರ್ಜುನ್ ಕೊನೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ