ಮೂಗಿನಲ್ಲಿ ರಕ್ತ ಬರುವಂತೆ ಹೊಡೆದ ಪುಂಡರು; ಘಟನೆ ಬಗ್ಗೆ ಲಾಯರ್​ ಜಗದೀಶ್​​ ಹೇಳಿದ್ದೇನು?

author-image
Ganesh Nachikethu
Updated On
ಮೂಗಿನಲ್ಲಿ ರಕ್ತ ಬರುವಂತೆ ಹೊಡೆದ ಪುಂಡರು; ಘಟನೆ ಬಗ್ಗೆ ಲಾಯರ್​ ಜಗದೀಶ್​​ ಹೇಳಿದ್ದೇನು?
Advertisment
  • ಬಿಗ್​ಬಾಸ್​ ಸ್ಪರ್ಧಿ ಲಾಯರ್​​ ಜಗದೀಶ್​ ಮೇಲೆ ಮಾರಣಾಂತಿಕ ಹಲ್ಲೆ
  • ಲಾಯರ್​​ ಜಗದೀಶ್ ಮೂಗಿನಲ್ಲಿ ರಕ್ತ ಬರುವಂತೆ ಹೊಡೆಯಲಾಗಿದೆ..!
  • ಫೇಸ್​ಬುಕ್​ ಲೈವ್​ ಬಂದು ಆಕ್ರೋಶ ಹೊರಹಾಕಿದ ಲಾಯರ್​ ಜಗದೀಶ್​​

ಬೆಂಗಳೂರು: ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿ ಆಗುತ್ತಿರೋ ಲಾಯರ್​ ಜಗದೀಶ್​ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ತಿಳಿದು ಬಂದಿದೆ. ಕಿಡಿಗೇಡಿಗಳು ಲಾಯರ್ ಜಗದೀಶ್​ ಮೇಲೆ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.

ಲಾಯರ್​ ಜಗದೀಶ್​ ಅವರಿಗೆ ಮೂಗಿನಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ. ಜಗದೀಶ್ ಮುಖದಲ್ಲಿ ರಕ್ತ ಸುರಿಯುತ್ತಿದ್ದು, ಕಿಡಿಗೇಡಿಗಳ ವಿರುದ್ಧ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಈ ಬಗ್ಗೆ ಲಾಯರ್​ ಜಗದೀಶ್​ ಏನಂದ್ರು?

ಇವತ್ತು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಪೊಲೀಸರು ಬಂದು ನಮ್ಮನ್ನು ರಕ್ಷಿಸಿದ್ದಾರೆ. ನನ್ನ ಫ್ಯಾಮಿಲಿ ಮೇಲೆ ಅಟ್ಯಾಕ್​ ಆಗಿದೆ. ಸಮಾಜಕ್ಕೆ ಧ್ವನಿ ಆಗಿದ್ದವರ ಮೇಲೆ 200 ಜನ ಅಟ್ಯಾಕ್ ಮಾಡಿದ್ದಾರೆ. ನನ್ನ ಸ್ಕಾರ್ಪಿಯೋ ಕಾರು ಧ್ವಂಸ ಮಾಡಿದ್ದಾರೆ ಎಂದರು.

ನನ್ನ ಗನ್ ಮ್ಯಾನ್​ಗೆ ಮಚ್ಚು ದೊಣ್ಣೆಯಿಂದ ಹೊಡೆದಿದ್ದಾರೆ. ನನಗೆ ರಕ್ತ ಬರುವಂತೆ ಹೊಡೆದಿದ್ದಾರೆ. ನಾನು ಸತ್ರು ಪರವಾಗಿಲ್ಲ. ಪುಡಿ ರೌಡಿಗಳು ಅಟ್ಯಾಕ್ ಮಾಡಿದ್ದಾರೆ. ನನ್ನನ್ನು ಕೊಲ್ಲಲು ಯತ್ನಿಸಿದ್ರು. ನನ್ನ ಮಗನ ಮೇಲೂ ಅಟ್ಯಾಕ್ ಆಗಿದೆ ಎಂದು ಜಗದೀಶ್ ಆರೋಪ ಮಾಡಿದ್ದಾರೆ.

ಇದನ್ನೂ ಓದಿ:ರಕ್ತ ಬರುವಂತೆ ಬಿಗ್​ಬಾಸ್​ ಸ್ಪರ್ಧಿ ಲಾಯರ್​​ ಜಗದೀಶ್​ ಮೇಲೆ ಮಾರಣಾಂತಿಕ ಹಲ್ಲೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment