ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ PSI ಜಗದೀಶ್ ಬರ್ಬರ ಹತ್ಯೆ ಕೇಸ್; ಅಪರಾಧಿಗೆ ಜೀವಾವಧಿ ಶಿಕ್ಷೆ

author-image
Ganesh
Updated On
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ PSI ಜಗದೀಶ್ ಬರ್ಬರ ಹತ್ಯೆ ಕೇಸ್; ಅಪರಾಧಿಗೆ ಜೀವಾವಧಿ ಶಿಕ್ಷೆ
Advertisment
  • ​​​ದೊಡ್ಡಬಳ್ಳಾಪುರ ಟೌನ್​​ ಪಿಎಸ್​ಐ ಜಗದೀಶ್ ಬರ್ಬರ ಹತ್ಯೆ
  • ಅಪರಾಧಿಗೆ ಮಧುಗೆ 7 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ದಂಡ
  • ಮುಖ್ಯ ಅಪರಾಧಿ ಹರೀಶ್ ಬಾಬುಗೆ ಜೀವಾವಧಿ ಶಿಕ್ಷೆ

ದೊಡ್ಡಬಳ್ಳಾಪುರ ಟೌನ್​​ ಪಿಎಸ್​ಐ ಜಗದೀಶ್ ಬರ್ಬರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಅಪರಾಧಿ ಮಧುಗೆ 7 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ದಂಡ ವಿಧಿಸಿದ್ರೆ, ಪ್ರಕರಣದ ಮುಖ್ಯ ಅಪರಾಧಿ ಹರೀಶ್ ಬಾಬುಗೆ ಜೀವಾವಧಿ ಶಿಕ್ಷೆ ಹಾಗೂ 3 ಲಕ್ಷ ದಂಡವನ್ನು ವಿಧಿಸಿ ಬೆಂಗಳೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಚೆಪಾಕ್​​ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟ ರವಿಂದ್ರ ಜಡೇಜಾ -Video

2015ರಲ್ಲಿ ಪಿಎಸ್​ಐ ಜಗದೀಶ್ ಕೊಲೆ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ರಾಬರಿ ಕೇಸ್ ಸಂಬಂಧ ಮಧು ಹಾಗೂ ಹರೀಶ್ ಬಾಬುನನ್ನು ಹಿಡಿಯಲು ಪಿಎಸ್​ಐ ಜಗದೀಶ್ ಬಂದಿದ್ದರು. ಈ ವೇಳೆ ಚರಂಡಿಯಲ್ಲಿ ಆಯತಪ್ಪಿ ಪಿಎಸ್​ಐ ಜಗದೀಶ್ ಬಿದ್ದಿದ್ದರು. ಆಗ ಪಿಎಸ್​ಐ ಜಗದೀಶ್​ಗೆ ಚಾಕು ಇರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಜಗದೀಶ್ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್​; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?

ಈ ಸಂಬಂಧ ನೆಲಮಂಗಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು. ಸುದೀರ್ಘ 8 ವರ್ಷಗಳ ವಿಚಾರಣೆ ಬಳಿಕ ಕೋರ್ಟ್​ ತೀರ್ಪು ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ನ್ಯಾಯಮೂರ್ತಿ ರಘುನಾಥ್​​ರಿಂದ ಮಹತ್ವದ ತೀರ್ಪು ನೀಡಿದೆ. ಮೀನಾಕುಮಾರಿ ಹಾಗೂ ಎಸ್​ವಿ ಭಟ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment