/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
- ನಾನು ಹೇಳಿದ್ದೇ ನಡೆಯಬೇಕು ಅನ್ನೋದನ್ನ ದೂರಮಾಡಿ, ಜಯ ಇದೆ
- ಸಾಯಂಕಾಲದ ಹೊತ್ತಿಗೆ ಎಲ್ಲವೂ ಸಮಾಧಾನಕರ
- ಬೇರೆಯವರಿಂದ ಹೆಚ್ಚು ನಿರೀಕ್ಷೆ ಬೇಡ
- ಹಣದ ವಿಚಾರಕ್ಕೆ ಅಣ್ಣತಮ್ಮಂದಿರಲ್ಲಿ ಜಗಳ ಆಗಬಹುದು
- ಶತ್ರುಗಳಿಂದ ಪರೋಕ್ಷ ತೊಂದರೆ ಆಗಬಹುದು
- ಸಮಾಜದಲ್ಲ್ಲಿ ನೌಕರಿಯಲ್ಲಿ ಪ್ರಶಂಸೆ ಸಿಗಲಿದೆ
- ಮುನೇಶ್ವರನ ಪ್ರಾರ್ಥಿಸಿ
ವೃಷಭ
- ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ
- ರಿಯಲ್​ ಎಸ್ಟೇಟ್​ನವರಿಗೆ ಅನುಕೂಲವಿದೆ
- ವೃತ್ತಿಯಲ್ಲಿ ಸಮಾಧಾನ ಸಿಗುವ ದಿನ
- ಒತ್ತಡಕ್ಕೆ ಮಣಿದು ಬಂಧುತ್ವದಲ್ಲಿ ಭಿನ್ನಾಭಿಪ್ರಾಯ
- ಅನೇಕ ಅನುಮಾನಗಳಿಗೆ ಸರಿಯಾದ ಉತ್ತರ ಸಿಗುವಂತಹದ್ದು
- ವ್ಯಾಪಾರದಲ್ಲಿ ಆರ್ಥಿಕ ಲಾಭ ಸಿಗಲಿದೆ
- ಯೋಗನರಸಿಂಹನ ಆರಾಧನೆ ಮಾಡಿ
ಮಿಥುನ
- ಅಪರಿಚಿತರ ಒಡನಾಟ ಬೇಡ
- ರಸ್ತೆ ಅಪಘಾತ ಸಂಭವಿಸಬಹುದು
- ಶತ್ರುಗಳು ನಿಮ್ಮ ವಿರುದ್ಧ ತಿರುಗಿ ಬೀಳಬಹುದು
- ವಿದ್ಯಾರ್ಥಿಗಳಲ್ಲಿ ನಿರ್ಲಕ್ಷದಿಂದ ತೊಂದರೆಯಾಗಬಹುದು
- ಆರ್ಥಿಕ ಸ್ಥಿತಿ ದುರ್ಬಲವಾಗುತ್ತದೆ
- ಪ್ರೇಮಿಗಳಿಗೆ ಪರಸ್ಪರ ಜಗಳ ಆಗಬಹುದು
- ದುರ್ಗಾರಾಧನೆ ಮಾಡಿ
ಕಟಕ
- ಕೆಲಸದ ನಿಮಿತ್ತ ಚರ್ಚೆ ನಡೆಸಬಹುದು
- ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಿಸಿ
- ಪ್ರಯಾಣಕ್ಕೆ ಈ ದಿನ ಚೆನ್ನಾಗಿದೆ
- ಕಳೆದ ಹಣ ಮತ್ತೆ ಸಿಗಬಹುದು
- ಕುಟುಂಬದವರ ಜೊತೆ ಪ್ರವಾಸಕ್ಕೆ ಅವಕಾಶವಿದೆ
- ಇಂದು ಪ್ರೇಮಿಗಳಿಗೆ ಶುಭವಿದೆ
- ಶ್ರೀರಾಮನನ್ನು ಆರಾಧಿಸಿ
ಸಿಂಹ
- ನಿಮ್ಮ ಬೇಜವಾಬ್ದಾರಿ ನಿಮಗೆ ಮಾರಕ
- ಖಾಸಗಿ ಕ್ಷೇತ್ರದವರ ಆದಾಯ ಹೆಚ್ಚಾಗುತ್ತದೆ
- ಕಾನೂನು ವಿಚಾರಗಳು ನಿಮ್ಮ ಪರವಾಗುತ್ತದೆ
- ದಿನದ ಆರಂಭ ನಿಧಾನಗತಿಯಲ್ಲಿ ಸಾಗುತ್ತದೆ
- ಮಾಡಬೇಕಿದ್ದ ಕೆಲಸದಿಂದ ಹಿಂದೆ ಸರಿಯಬಾರದು
- ಕಾಲಿನ ಸಮಸ್ಯೆ ಕಾಣಬಹುದು
- ವಿಷ್ಣುಸಹಸ್ರನಾಮ ಪಠಿಸಿ
ಕನ್ಯಾ
- ಸ್ನೇಹಿತರ ಸಹಾಯ ಸಹಕಾರ ಸಿಗಲಿದೆ
- ಮಕ್ಕಳ ತಪ್ಪುಗಳ ಬಗ್ಗೆ ನಿರ್ಲಕ್ಷ್ಯ ಬೇಡ
- ಪ್ರೇಮಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆ ವಹಿಸಿ
- ಆರೋಗ್ಯದಲ್ಲಿ ಸುಧಾರಣೆ ಕಾಣ್ತೀರಿ
- ನಿಮ್ಮ ಕೆಲಸದಲ್ಲಿ ಜನರು ತಪ್ಪನ್ನು ಗುರುತಿಸಿ ಹೇಳಬಹುದು
- ಶಿವಾರಾಧನೆ ಮಾಡಿ
ತುಲಾ
- ವ್ಯಾಪಾರದಲ್ಲಿ ಅನರ್ಥದಿಂದ ಸ್ವಲ್ಪ ನಷ್ಟ ಗಲಾಟೆ ಆಗಬಹುದು
- ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿದ್ರೆ ಒಳ್ಳೆಯದು
- ಸಮಯಕ್ಕೆ ಯಾವುದೋ ಸಹಾಯ ನಿಮ್ಮ ಪರವಾಗುತ್ತದೆ
- ಬೇರೆಯವರ ವಿಚಾರದಲ್ಲಿ ಪ್ರತಿಕ್ರಿಯಿಸಬೇಡಿ
- ನಿಮ್ಮ ಕಾರ್ಯವನ್ನು ಪ್ರಶಂಸಿಸಲಾಗುತ್ತದೆ
- ಕೆಲಸಗಳು ಸಕಾಲದಲ್ಲಿ ಪೂರ್ಣವಾಗುವುದಿಲ್ಲ
- ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ
ವೃಶ್ಚಿಕ
- ಕುಟುಂಬದಲ್ಲಿ ಎಲ್ಲರೂ ಭಾವನಾತ್ಮಕವಾಗಿ ವ್ಯವಹರಿಸಬಹುದು
- ಇಂದು ನಿಮ್ಮ ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಿ
- ವ್ಯಾಪಾರ ವಿಸ್ತರಣೆಗೆ ಹೆಚ್ಚು ಅವಕಾಶ ಇರಲಿದೆ
- ಪೂರ್ವ ನಿಯೋಜಿತ ಕೆಲಸಗಳಲ್ಲಿ ಅನುಕೂಲ
- ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗುವ ಸಾಧ್ಯತೆ
- ಕಾನೂನು ವಿಚಾರದಲ್ಲಿ ಜಯ ಸಿಗಲಿದೆ
- ಸೂರ್ಯನಾರಾಯಣನ ಆರಾಧನೆ ಮಾಡಿ
ಧನುಸ್​
- ದೇಹ ವಿಶ್ರಾಂತಿಯನ್ನು ಹೆಚ್ಚಾಗಿ ಬಯಸಬಹುದು
- ಅಧಿಕಾರಿಗಳ ಕೃಪೆಗೆ ಒಳಗಾಗುತ್ತೀರಿ
- ನೀವು ಆಡುವ ಮಾತು ಮಿತವಾಗಿರಲಿ
- ವೃತ್ತಿ, ನೌಕರಿಯಲ್ಲಿ ಪೂರ್ಣ ಗಮನಹರಿಸುವುದಿಲ್ಲ
- ಆಹಾರದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
- ಇಂದು ಆಲಸ್ಯ ಬೇಡ
- ಹಳೆಯ ಅನುಭವದಿಂದ ಪಾಠ ಕಲಿಯುತ್ತೀರಿ
- ಇಂದ್ರಾಕ್ಷಿ ಸ್ತೋತ್ರ ಪಠಿಸಿ
ಮಕರ
- ದೈವಾನುಗ್ರಹಕ್ಕೆ ಪಾತ್ರರಾಗುತ್ತೀರಿ
- ಸಹೋದ್ಯೋಗಿಗಳು ಸಂತೋಷವಾಗಿರುವುದಿಲ್ಲ
- ದಾಂಪತ್ಯದಲ್ಲಿ ವ್ಯೆಮನಸು ಉಪಶಮನವಾಗುತ್ತದೆ
- ಸರ್ಕಾರಿ ಕೆಲಸಗಳು ಕಾರಣಾಂತರಗಳಿಂದ ವಿಳಂಬ
- ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ
- ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
- ಕುಲದೇವರನ್ನು ಆರಾಧನೆ ಮಾಡಿ
ಕುಂಭ
- ವಿರೋಧಿಗಳಿಗೆ ನಿಮ್ಮ ಶಕ್ತಿ ಸಾಮರ್ಥ್ಯದ ಅರಿವಾಗುತ್ತದೆ
- ಬೇರೆಯವರ ಕೆಟ್ಟದೃಷ್ಟಿ ಬೀಳದಂತೆ ಕಾಪಾಡಿಕೊಳ್ಳಿ
- ಇಂದು ನಿಮ್ಮ ಜೀವನ ಶೈಲಿ ಬದಲಾವಣೆಯಾಗಲಿದೆ
- ಅಪೂರ್ಣ ಕೆಲಸ ಪೂರ್ಣಗೊಳಿಸುವಲ್ಲಿ ತಲ್ಲೀನರಾಗಿರುತ್ತೀರಿ
- ವ್ಯಾಪಾರ ವ್ಯವಹಾರದ ಸಮಸ್ಯೆಗೆ ಪರಿಹಾರ ಸಿಗಲಿದೆ
- ವಿದ್ಯಾರ್ಥಿಗಳಿಗೆ ಉತ್ತಮವಾದ ದಿನ
- ಗಣಪತಿ ಆರಾಧನೆ ಮಾಡಿ
ಮೀನ
- ಹಣ ಹೂಡಿಕೆ ಮಾಡುವುದರಿಂದ ಲಾಭವಿದೆ
- ಆರ್ಥಿಕವಾಗಿ ಅನೂಕೂಲ ಕಾಣುವ ದಿನ
- ಇಂದಿನ ಪರಿಸರ ಧನಾತ್ಮಕವಾಗಿರುತ್ತದೆ
- ಕುಟುಂಬದವರ ಸಹಕಾರ ಸಹಾಯ ದೊರೆಯಲಿದೆ
- ಇಂದು ಹೆಚ್ಚು ಖರ್ಚು ಖರ್ಚಾಗಬಹುದು
- ಐಶ್ವರ್ಯ ಲಕ್ಮೀ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us