ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಹೊಸ ಹೆಸರಿಗೆ ಅಂಕಿತ
ಮುನಿಯಪ್ಪ-ರಮೇಶ್ ಕುಮಾರ್ ಜಟಾಪಟಿಗೆ ಸಿಕ್ತು ಬಿಗ್ ಟ್ವಿಸ್ಟ್!
ಮುನಿಯಪ್ಪ ಒಪ್ಪಿಗೆ ನೀಡಲಿಲ್ಲ ಅಂದ್ರೆ ಕೋಲಾರ ಕದನ ನಡೆಯುತ್ತೆ
ರಾಜಕೀಯ ಅನ್ನೋದೇ ಕಾಲಚಕ್ರ.. ಆ ಚಕ್ರದಲ್ಲಿ ಯಾರಿಗೆ ಲಕ್ ಖುಲಾಯಿಸುತ್ತೆ ಅನ್ನೋದನ್ನ ಹೇಳಲು ಅಸಾಧ್ಯ. ಈಗ ಕೋಲಾರ ರಾಜಕೀಯ ಕಣದಲ್ಲಿ ಎರಡು ಬಣಗಳ ನಡುವೆ ನಡೀತಿದ್ದ ಟಿಕೆಟ್ ಬಂಡಾಟದಲ್ಲಿ 3ನೇ ವ್ಯಕ್ತಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅಂದ್ಹಾಗೆ, ಯಾರು ಅಂದಾಜಿಸದ ರೀತಿಯಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಕದನಕ್ಕೆ ಟ್ವಿಸ್ಟ್ ಸಿಕ್ಕಿದೆ.
ಗಂಡ ಹೆಂಡತಿ ನಡುವೆ ಕೂಸು ಬಡವಾಯ್ತು ಅನ್ನೋದು ಗಾದೆ.. ಆದ್ರೆ, ಇಲ್ಲಿ ಹಾಗಲ್ಲ ಬಿಡಿ.. ಕೋಲಾರದ ಸಂಸಾರಕ್ಕಾಗಿ ನಡೀತಿದ್ದ ಇಬ್ಬರ ನಡುವಿನ ನೇರ ಯುದ್ಧದಲ್ಲಿ 3ನೇ ವ್ಯಕ್ತಿಗೆ ಜಾಕ್ಪಾಟ್ ಹೊಡೆದಿದೆ. ಹೌದು, ನಿನ್ನೆ ನಡೆದ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಹೊಸ ಹೆಸರಿಗೆ ಅಂಕಿತ ಮುದ್ರೆ ಬಿದ್ದಿದೆ ಅಂತ ಹೇಳಲಾಗ್ತಿದೆ. ಮಾಜಿ ಮೇಯರ್ ವಿಜಯ್ಕುಮಾರ್ ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಗಾಳಿಗೋಪುರದಲ್ಲಿ ತೇಲ್ತಿದೆ.
ಮುನಿಯಪ್ಪ-ರಮೇಶ್ ಕುಮಾರ್ ಜಟಾಪಟಿಗೆ ಸಿಕ್ತು ಬಿಗ್ ಟ್ವಿಸ್ಟ್!
ಮಾಜಿ ಮೇಯರ್ ವಿಜಯ್ಕುಮಾರ್ ಪುತ್ರ ಗೌತಮ್ ಕೈಗೆ ಕೋಲಾರ ಟಿಕೆಟ್ ನೀಡೋ ಸಾಧ್ಯತೆ ಇದೆ.. ಸದ್ಯ ಬೆಂಗಳೂರು ಸೆಂಟ್ರಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಗೌತಮ್, ದಲಿತ ಎಡಗೈ ಸಮುದಾಯಕ್ಕೆ ಸೇರಿರುವ ಪ್ರಭಾವಿ ನಾಯಕರು.. ಸದ್ಯಕ್ಕೆ ಎರಡೂ ಬಣಗಳ ಅಭಿಪ್ರಾಯವನ್ನ ಪರಿಗಣಿಸದ ಕಾಂಗ್ರೆಸ್, ಮಧ್ಯಮ ದಾರಿಯನ್ನ ಆಯ್ದುಕೊಂಡಿದೆ.
ಇಬ್ಬರ ನಡುವೆ 3ನೇ ವ್ಯಕ್ತಿ ಲಾಟರಿ!
ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ ‘ಯುವ’ ಘರ್ಜನೆ.. ಚೊಚ್ಚಲ ಸಿನಿಮಾದಲ್ಲೇ ಫ್ಯಾನ್ಸ್ ಮನಸು ಗೆಲ್ತಾರಾ ದೊಡ್ಮನೆ ಕುಡಿ?
ಇನ್ನು, ಸಭೆ ಬಳಿಕ ಜಿಲ್ಲ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಧಾನ ಸಭೆ ಯಶಸ್ವಿಯಾಗಿದೆ ಅಂತ ಹೇಳಿದ್ರು. ಆದ್ರೆ, ಸಚಿವ ಮುನಿಯಪ್ಪ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಆದ್ರೆ, 3ನೇ ಅಭ್ಯರ್ಥಿ ಆಯ್ಕೆ ವಿಚಾರವೇ ಬರೋದಿಲ್ಲ ಅನ್ನೋ ಮೂಲಕ ಸಂಘರ್ಷದ ಸುಳಿವು ನೀಡಿದ್ದಾರೆ. ಇನ್ನು, ರಾಜೀನಾಮೆ ಪ್ರಹಸನಕ್ಕೆ ಸಚಿವ ಸುಧಾಕರ್ ವಿಷಾಧ ವ್ಯಕ್ತಪಡಿಸಿದ್ರು.
ಕೋಲಾರ ಕಗ್ಗಂಟು ಪರಿಹಾರಕ್ಕೆ ಹೊಸ ಸೂತ್ರವನ್ನ ಸಿದ್ಧಪಡಿಸಲಾಗಿದೆ.. ಆದ್ರೆ, ಈ ಸೂತ್ರಕ್ಕೆ ಮುನಿಯಪ್ಪ ಒಪ್ಪಿಗೆ ನೀಡ್ಲೇಬೇಕಿದೆ. ಇಲ್ಲದಿದ್ರೆ, ಕೋಲಾರ ಕದನದ ಎಪಿಸೋಡ್ ಮುಂದುವರೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಹೊಸ ಹೆಸರಿಗೆ ಅಂಕಿತ
ಮುನಿಯಪ್ಪ-ರಮೇಶ್ ಕುಮಾರ್ ಜಟಾಪಟಿಗೆ ಸಿಕ್ತು ಬಿಗ್ ಟ್ವಿಸ್ಟ್!
ಮುನಿಯಪ್ಪ ಒಪ್ಪಿಗೆ ನೀಡಲಿಲ್ಲ ಅಂದ್ರೆ ಕೋಲಾರ ಕದನ ನಡೆಯುತ್ತೆ
ರಾಜಕೀಯ ಅನ್ನೋದೇ ಕಾಲಚಕ್ರ.. ಆ ಚಕ್ರದಲ್ಲಿ ಯಾರಿಗೆ ಲಕ್ ಖುಲಾಯಿಸುತ್ತೆ ಅನ್ನೋದನ್ನ ಹೇಳಲು ಅಸಾಧ್ಯ. ಈಗ ಕೋಲಾರ ರಾಜಕೀಯ ಕಣದಲ್ಲಿ ಎರಡು ಬಣಗಳ ನಡುವೆ ನಡೀತಿದ್ದ ಟಿಕೆಟ್ ಬಂಡಾಟದಲ್ಲಿ 3ನೇ ವ್ಯಕ್ತಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ. ಅಂದ್ಹಾಗೆ, ಯಾರು ಅಂದಾಜಿಸದ ರೀತಿಯಲ್ಲಿ ಕೋಲಾರ ಕಾಂಗ್ರೆಸ್ ಟಿಕೆಟ್ ಕದನಕ್ಕೆ ಟ್ವಿಸ್ಟ್ ಸಿಕ್ಕಿದೆ.
ಗಂಡ ಹೆಂಡತಿ ನಡುವೆ ಕೂಸು ಬಡವಾಯ್ತು ಅನ್ನೋದು ಗಾದೆ.. ಆದ್ರೆ, ಇಲ್ಲಿ ಹಾಗಲ್ಲ ಬಿಡಿ.. ಕೋಲಾರದ ಸಂಸಾರಕ್ಕಾಗಿ ನಡೀತಿದ್ದ ಇಬ್ಬರ ನಡುವಿನ ನೇರ ಯುದ್ಧದಲ್ಲಿ 3ನೇ ವ್ಯಕ್ತಿಗೆ ಜಾಕ್ಪಾಟ್ ಹೊಡೆದಿದೆ. ಹೌದು, ನಿನ್ನೆ ನಡೆದ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ಹೊಸ ಹೆಸರಿಗೆ ಅಂಕಿತ ಮುದ್ರೆ ಬಿದ್ದಿದೆ ಅಂತ ಹೇಳಲಾಗ್ತಿದೆ. ಮಾಜಿ ಮೇಯರ್ ವಿಜಯ್ಕುಮಾರ್ ಪುತ್ರನಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಗಾಳಿಗೋಪುರದಲ್ಲಿ ತೇಲ್ತಿದೆ.
ಮುನಿಯಪ್ಪ-ರಮೇಶ್ ಕುಮಾರ್ ಜಟಾಪಟಿಗೆ ಸಿಕ್ತು ಬಿಗ್ ಟ್ವಿಸ್ಟ್!
ಮಾಜಿ ಮೇಯರ್ ವಿಜಯ್ಕುಮಾರ್ ಪುತ್ರ ಗೌತಮ್ ಕೈಗೆ ಕೋಲಾರ ಟಿಕೆಟ್ ನೀಡೋ ಸಾಧ್ಯತೆ ಇದೆ.. ಸದ್ಯ ಬೆಂಗಳೂರು ಸೆಂಟ್ರಲ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಗೌತಮ್, ದಲಿತ ಎಡಗೈ ಸಮುದಾಯಕ್ಕೆ ಸೇರಿರುವ ಪ್ರಭಾವಿ ನಾಯಕರು.. ಸದ್ಯಕ್ಕೆ ಎರಡೂ ಬಣಗಳ ಅಭಿಪ್ರಾಯವನ್ನ ಪರಿಗಣಿಸದ ಕಾಂಗ್ರೆಸ್, ಮಧ್ಯಮ ದಾರಿಯನ್ನ ಆಯ್ದುಕೊಂಡಿದೆ.
ಇಬ್ಬರ ನಡುವೆ 3ನೇ ವ್ಯಕ್ತಿ ಲಾಟರಿ!
ಇದನ್ನೂ ಓದಿ: ಇಂದಿನಿಂದ ರಾಜ್ಯಾದ್ಯಂತ ‘ಯುವ’ ಘರ್ಜನೆ.. ಚೊಚ್ಚಲ ಸಿನಿಮಾದಲ್ಲೇ ಫ್ಯಾನ್ಸ್ ಮನಸು ಗೆಲ್ತಾರಾ ದೊಡ್ಮನೆ ಕುಡಿ?
ಇನ್ನು, ಸಭೆ ಬಳಿಕ ಜಿಲ್ಲ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಂಧಾನ ಸಭೆ ಯಶಸ್ವಿಯಾಗಿದೆ ಅಂತ ಹೇಳಿದ್ರು. ಆದ್ರೆ, ಸಚಿವ ಮುನಿಯಪ್ಪ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ. ಆದ್ರೆ, 3ನೇ ಅಭ್ಯರ್ಥಿ ಆಯ್ಕೆ ವಿಚಾರವೇ ಬರೋದಿಲ್ಲ ಅನ್ನೋ ಮೂಲಕ ಸಂಘರ್ಷದ ಸುಳಿವು ನೀಡಿದ್ದಾರೆ. ಇನ್ನು, ರಾಜೀನಾಮೆ ಪ್ರಹಸನಕ್ಕೆ ಸಚಿವ ಸುಧಾಕರ್ ವಿಷಾಧ ವ್ಯಕ್ತಪಡಿಸಿದ್ರು.
ಕೋಲಾರ ಕಗ್ಗಂಟು ಪರಿಹಾರಕ್ಕೆ ಹೊಸ ಸೂತ್ರವನ್ನ ಸಿದ್ಧಪಡಿಸಲಾಗಿದೆ.. ಆದ್ರೆ, ಈ ಸೂತ್ರಕ್ಕೆ ಮುನಿಯಪ್ಪ ಒಪ್ಪಿಗೆ ನೀಡ್ಲೇಬೇಕಿದೆ. ಇಲ್ಲದಿದ್ರೆ, ಕೋಲಾರ ಕದನದ ಎಪಿಸೋಡ್ ಮುಂದುವರೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ