newsfirstkannada.com

ಗೀತಾ ಶಿವರಾಜ್​​ ಕುಮಾರ್​​ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ; ಟ್ರೋಲರ್ಸ್ ಮೇಲೆ ಮಧು ಬಂಗಾರಪ್ಪ ಗರಂ..!

Share :

Published March 13, 2024 at 7:50am

    ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಗೀತಾ ಶಿವರಾಜ್​ ಕುಮಾರ್

    ಗೀತಾ ಶಿವರಾಜ್​ ಕುಮಾರ್ ಸ್ಪರ್ಧೆ ಪ್ರಶ್ನಿಸಿ 4 ಪ್ರಶ್ನೆಗಳನ್ನು ಕೇಳಿರುವ ನೆಟ್ಟಿಗರು

    ಟ್ರೋಲರ್ಸ್​ ಮೇಲೆ ಗರಂ ಆಗಿದ್ದೇಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ..?

ಲೋಕಸಭೆ ಚುನಾವಣೆಯ ಕಾವು ರಂಗೇರುತ್ತಿದೆ. ಶಿವಮೊಗ್ಗ ಲೊಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್​​ ಕಣಕ್ಕೆ ಇಳಿದಿದ್ದಾರೆ. ಗೀತಾ ಶಿವರಾಜ್​ ಕುಮಾರ್​ಗೆ ಟಿಕೆಟ್​ ನೀಡಿರೋದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಗೀತಾ ಶಿವರಾಜ್ ಕುಮಾರ್ ಫೋಟೋ ಬಳಸಿ ಟ್ರೋಲ್ ಮಾಡಲಾಗ್ತಿದೆ. ಕೊನೆಯ ಚುನಾವಣೆಯಲ್ಲಿ ಸೋತು ಬೆಂಗಳೂರಿಗೆ ತೆರಳಿದ ಮೇಲೆ ಶಿವಮೊಗ್ಗಕ್ಕೆ ಎಷ್ಟು ಬಾರಿ ಬಂದಿದ್ದೀರಿ? ಶಿವಮೊಗ್ಗಕ್ಕೆ ಗೀತಾ ಶಿವರಾಜ್ ಕುಮಾರ್ ಕೊಡುಗೆ ಏನು? ಶಿವಮೊಗ್ಗದ ಯಾವ ಹಳ್ಳಿಗೆ ಭೇಟಿ ನೀಡಿದ್ದೀರಿ? ಶಿವಮೊಗ್ಗದ ಜನರ ಕಷ್ಟವನ್ನು ಏನಾದರೂ ಕೇಳಿದ್ದೀರಾ? ಎಂದು ಪ್ರಶ್ನೆ ಕೇಳ್ತಿದ್ದಾರೆ.

ಈ ವಿಚಾರ ಪ್ರಶ್ನೆಗಳು ಹೆಚ್ಚಾದಂತೆ ಸೋಷಿಯಲ್‌ ಮೀಡಿಯಾ ಟ್ರೋಲರ್ಸ್ ಮೇಲೆ ಶಿಕ್ಷಣ ಸಚಿವ ಮಧು ಬಂಗಾಪ್ಪ ಗರಂ ಆಗಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ. ಇವತ್ತು ಅಥವಾ ನಾಳೆ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೀತಾ ಶಿವರಾಜ್​​ ಕುಮಾರ್​​ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ; ಟ್ರೋಲರ್ಸ್ ಮೇಲೆ ಮಧು ಬಂಗಾರಪ್ಪ ಗರಂ..!

https://newsfirstlive.com/wp-content/uploads/2024/03/GEETA.jpg

    ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಗೀತಾ ಶಿವರಾಜ್​ ಕುಮಾರ್

    ಗೀತಾ ಶಿವರಾಜ್​ ಕುಮಾರ್ ಸ್ಪರ್ಧೆ ಪ್ರಶ್ನಿಸಿ 4 ಪ್ರಶ್ನೆಗಳನ್ನು ಕೇಳಿರುವ ನೆಟ್ಟಿಗರು

    ಟ್ರೋಲರ್ಸ್​ ಮೇಲೆ ಗರಂ ಆಗಿದ್ದೇಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ..?

ಲೋಕಸಭೆ ಚುನಾವಣೆಯ ಕಾವು ರಂಗೇರುತ್ತಿದೆ. ಶಿವಮೊಗ್ಗ ಲೊಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್​​ ಕಣಕ್ಕೆ ಇಳಿದಿದ್ದಾರೆ. ಗೀತಾ ಶಿವರಾಜ್​ ಕುಮಾರ್​ಗೆ ಟಿಕೆಟ್​ ನೀಡಿರೋದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಗೀತಾ ಶಿವರಾಜ್ ಕುಮಾರ್ ಫೋಟೋ ಬಳಸಿ ಟ್ರೋಲ್ ಮಾಡಲಾಗ್ತಿದೆ. ಕೊನೆಯ ಚುನಾವಣೆಯಲ್ಲಿ ಸೋತು ಬೆಂಗಳೂರಿಗೆ ತೆರಳಿದ ಮೇಲೆ ಶಿವಮೊಗ್ಗಕ್ಕೆ ಎಷ್ಟು ಬಾರಿ ಬಂದಿದ್ದೀರಿ? ಶಿವಮೊಗ್ಗಕ್ಕೆ ಗೀತಾ ಶಿವರಾಜ್ ಕುಮಾರ್ ಕೊಡುಗೆ ಏನು? ಶಿವಮೊಗ್ಗದ ಯಾವ ಹಳ್ಳಿಗೆ ಭೇಟಿ ನೀಡಿದ್ದೀರಿ? ಶಿವಮೊಗ್ಗದ ಜನರ ಕಷ್ಟವನ್ನು ಏನಾದರೂ ಕೇಳಿದ್ದೀರಾ? ಎಂದು ಪ್ರಶ್ನೆ ಕೇಳ್ತಿದ್ದಾರೆ.

ಈ ವಿಚಾರ ಪ್ರಶ್ನೆಗಳು ಹೆಚ್ಚಾದಂತೆ ಸೋಷಿಯಲ್‌ ಮೀಡಿಯಾ ಟ್ರೋಲರ್ಸ್ ಮೇಲೆ ಶಿಕ್ಷಣ ಸಚಿವ ಮಧು ಬಂಗಾಪ್ಪ ಗರಂ ಆಗಿದ್ದಾರೆ ಎನ್ನಲಾಗಿದೆ. ಇನ್ನು ಬಿಜೆಪಿಯಿಂದ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಚುನಾವಣಾ ಸ್ಪರ್ಧಾ ಕಣದಲ್ಲಿದ್ದಾರೆ. ಇವತ್ತು ಅಥವಾ ನಾಳೆ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More