newsfirstkannada.com

Lokayukta Raid: 15 ಅಧಿಕಾರಿಗಳು.. 62 ಕಡೆ ದಾಳಿ.. ಎಲ್ಲೆಲ್ಲೂ ಚಿನ್ನ, ಬೆಳ್ಳಿ, ದುಡ್ಡು-ದುಡ್ಡು.. ಯಾರ ಮನೆಯಲ್ಲಿ ಏನೇನು ಸಿಕ್ಕಿದೆ..!?

Share :

Published June 29, 2023 at 9:35am

Update June 29, 2023 at 2:49pm

    ಸರ್ಕಾರಿ ಅಧಿಕಾರಿಗಳ ಜನ್ಮ ಜಾಲಾಡಿದ ಲೋಕಾಯುಕ್ತ

    4 ಫಾರ್ಚ್ಯುನರ್, 4 ಥಾರ್ ಜೀಪ್, ಲ್ಯಾಂಡ್ ಕ್ರೂಜರ್ ಸೀಜ್

    ಭ್ರಷ್ಟರ ಮುಖ ಬಯಲು.. ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ

ನಿನ್ನೆ ಬೆಳ್ಳಂ ಬೆಳಗ್ಗೆ ಭ್ರಷ್ಟರ ಮನೆಗೆ ಲೋಕಾಯುಕ್ತ ಟೀಂ ಎಂಟ್ರಿ ಕೊಟ್ಟಿದ್ರು. ಅಲರಾಂ ಹೊಡೆಯೋದಕ್ಕಿಂತ ಮುಂಚೆ ಭ್ರಷ್ಟರ ಪಾಲಿನ ಸಿಂಹಸ್ವಪ್ನ ಲೋಕಾಯುಕ್ತ, ಭ್ರಷ್ಟರ ಮನೆಯ ಕದ ತಟ್ಟಿದ್ರು. ಒಂದಲ್ಲ.. ಎರಡಲ್ಲ.. ರಾಜ್ಯದ 15 ಕಡೆ ಲೋಕಾಯುಕ್ತಕ್ಕೆ ಟೀಂ ರೇಡ್ ಮಾಡಿದೆ. ಅಷ್ಟಕ್ಕೂ ದಾಳಿ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕ ಹಣವೆಷ್ಟು ಗೊತ್ತಾ?

ಸರ್ಕಾರಿ ಅಧಿಕಾರಿಗಳ ಜನ್ಮ ಜಾಲಾಡಿದ ಲೋಕಾಯುಕ್ತ

ನಿನ್ನೆ ಸರ್ಕಾರಿ ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿತ್ತು. 15 ಅಧಿಕಾರಿಗಳಿಗೆ ಸಂಬಂಧಿಸಿದ 62 ಕಡೆ ರೇಡ್ ಮಾಡಿ ಶಾಕ್ ಕೊಟ್ಟಿತ್ತು. ಆದ್ರೆ ದಾಳಿ ವೇಳೆ ಸಿಕ್ಕ.. ಕಂತೆ ಕಂತೆ ನೋಟುಗಳು.. ಆಸ್ತಿ ದಾಖಲೆಗಳು.. ಚಿನ್ನಾಭರಣಗಳನ್ನ ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಂಗಳೂರು ‘ಲೋಕಾ’ ರೇಡ್

ಬೆಂಗಳೂರಿನ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಹಾಗೂ ಕಚೇರಿ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ರು.. ಇನ್ನು ದಾಳಿ ವೇಳೆ 40 ಲಕ್ಷ ನಗದು ಸೇರಿದಂತೆ 1 ಕೋಟಿ 90 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಜಿತ್ ರೈಗೆ ಸಂಬಂಧಿಸಿದ ಸುಮಾರು 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ 4 ಫಾರ್ಚ್ಯುನರ್, 4 ಥಾರ್ ಜೀಪ್, ಒಂದು ಲ್ಯಾಂಡ್ ಕ್ರೂಜರ್ ಸೇರಿದಂತೆ ಐಷಾರಾಮಿ ಕಾರುಗಳು. ನಾಲ್ಕು ಐಶಾರಾಮಿ ಬೈಕ್ಗಳು ಪತ್ತೆಯಾಗಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಅಜಿತ್ ರೈ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ.

ಬಾಗಲಕೋಟೆ ‘ಲೋಕಾ’ ರೇಡ್

ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್​​ನಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ 32 ಲಕ್ಷ ರೂಪಾಯಿ ಹಣ ಸೇರಿದಂತೆ ಅಂದಾಜು 1.45 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನೊಬ್ಬ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ರಾಮಪ್ಪ ಶಿರೂರ್ ಎಂಬುವವರ ಮನೆಯಲ್ಲಿ ಲೋಕಾಯುಕ್ತ ಟೀಂ ದಾಳಿ ಮಾಡಲಾಗಿದೆ. ಕೃಷ್ಣಾರಿಗೆ ಸಂಬಂಧಿಸಿದ ಎಲ್ಲಾ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತ ಟೀಂಗೆ ಒಟ್ಟು 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮುದ್ದೇಬಿಹಾಳ, ಬಸವನ ಬಾಗೇವಾಡಿ ರೇಡ್

ಮುದ್ದೇಬಿಹಾಳದ ಜಿನ್ನಪ್ಪ ಪದ್ಮಣ್ಣ ಶೆಟ್ಟಿಗೆ ಸೇರಿದ 3 ಸ್ಥಳಗಳಲ್ಲಿ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ಜಿನ್ನಪ್ಪ ಪದ್ಮಣ್ಣ ಶೆಟ್ಟಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದಾಳಿ ವೇಳೆ ಒಟ್ಟು 1.42 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ಬಸವನ ಬಾಗೇವಾಡಿ ಪಿಡಬ್ಲ್ಯುಡಿ ಉಪವಿಭಾಗದ ಎಇಇ ಕಚೇರಿಯ ಕಿರಿಯ ಅಭಿಯಂತರರು ಭೀಮನಗೌಡ ಬಿರಾದಾರ್ಗೆ ಸೇರಿದ 2 ಸ್ಥಳಗಳಲ್ಲಿ ರೇಡ್ ಮಾಡಲಾಗಿದೆ. ಈ ವೇಳೆ 1.90 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮಡಿಕೇರಿ, ಸಿಂಧನೂರು ರೇಡ್

ಮಡಿಕೇರಿ ಗ್ರಾಮೀಣ ನೀರು ಮತ್ತು ಒಳಚರಂಡಿ ಎಫ್‌ಡಿಎ ಅಬ್ದುಲ್ ಬಷೀರ್ಗೆ ಸೇರಿದ ಮೂರು ಕಡೆ ದಾಳಿ ನಡೆಸಿ 14 ಲಕ್ಷ ನಗದು ಸೇರಿ 1.14 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ. ಇತ್ತ ಸಿಂಧನೂರು ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಮೆಂಬರ್ ಸೆಕ್ರೆಟರಿ ಶರಣಪ್ಪಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 14 ಲಕ್ಷ ನಗದು ಸೇರಿ 2.03 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ‌ ಮಾಡಿದ್ದಾರೆ.

ತುಮಕೂರು, ರಾಯಚೂರು ರೇಡ್

ತುಮಕೂರು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕೆ.ಹೆಚ್ ರವಿಗೆ ಸೇರಿದ ಆರು ಕಡೆ ದಾಳಿ ನಡೆಸಿ 4.27 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ರಾಯಚೂರು ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್ಗೆ ಸೇರಿದ ಎರಡು ಕಡೆ ದಾಳಿ ನಡೆಸಿ 2.71 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.

ಹಗರಿಬೊಮ್ಮನಹಳ್ಳಿ, ಗೌರಿಬಿದನೂರು ರೇಡ್

ಹಗರಿಬೊಮ್ಮನಹಳ್ಳಿ ಇಇ ಜೆಸ್ಕಾಂ ಶೇಖರ್ ಹನುಮಂತ ಬಹುರೂಪಿಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಿ 3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಗೌರಿಬಿದನೂರು ಅಬಕಾರಿ ಇನ್ಸ್‌ಪೆಕ್ಟರ್ ವಿ.ರಮೇಶ್ಗೆ ಸೇರಿದ ಐದು ಕಡೆ ದಾಳಿ ನಡೆಸಿ 2.44 ಕೋಟಿ ರೂಪಾಯಿ ಪತ್ತೆ ಮಾಡಿದ್ದಾರೆ.

ತುಮಕೂರು, ಚಿಕ್ಕಮಗಳೂರು ತಲಾಷ್

ತುಮಕೂರು ಎಇ ಗ್ರೇಡ್-2 ಕೆಆರ್ಐಡಿಎಲ್ ಕೋದಂಡರಾಮಯ್ಯಗೆ ಸೇರಿದ ಆರು ಕಡೆ ದಾಳಿ ನಡೆಸಿ 2.47 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಇತ್ತ ಚಿಕ್ಕಮಗಳೂರು ಫ್ಲಾನಿಂಗ್ ನಿರ್ಮಿತಿ ಕೇಂದ್ರ ಮ್ಯಾನೇಜರ್ ಗಂಗಾಧರ್ಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಲಾಗಿದ್ದು, 3.75 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಒಟ್ಟಾರೆ ರಾಜ್ಯದ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ 15 ಕಡೆಗಳಲ್ಲಿ ದಾಳಿ ನಡೆಸಿದ್ದು ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಪಾದಿಸಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.. ಹಾಗೆ ಭ್ರಷ್ಟರು ಗಳಿಸಿದ್ದ ಅಕ್ರಮ ಆಸ್ತಿಗಳನ್ನ ವಶಕ್ಕೆ ಪಡೆದಿದ್ದಾರೆ.

ವಿಶೇಷ ವರದಿ: ಅಂಕಿತಾ ರೈ, ಕ್ರೈಂ ಬ್ಯೂರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Lokayukta Raid: 15 ಅಧಿಕಾರಿಗಳು.. 62 ಕಡೆ ದಾಳಿ.. ಎಲ್ಲೆಲ್ಲೂ ಚಿನ್ನ, ಬೆಳ್ಳಿ, ದುಡ್ಡು-ದುಡ್ಡು.. ಯಾರ ಮನೆಯಲ್ಲಿ ಏನೇನು ಸಿಕ್ಕಿದೆ..!?

https://newsfirstlive.com/wp-content/uploads/2023/06/LOK_RAID.jpg

    ಸರ್ಕಾರಿ ಅಧಿಕಾರಿಗಳ ಜನ್ಮ ಜಾಲಾಡಿದ ಲೋಕಾಯುಕ್ತ

    4 ಫಾರ್ಚ್ಯುನರ್, 4 ಥಾರ್ ಜೀಪ್, ಲ್ಯಾಂಡ್ ಕ್ರೂಜರ್ ಸೀಜ್

    ಭ್ರಷ್ಟರ ಮುಖ ಬಯಲು.. ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ

ನಿನ್ನೆ ಬೆಳ್ಳಂ ಬೆಳಗ್ಗೆ ಭ್ರಷ್ಟರ ಮನೆಗೆ ಲೋಕಾಯುಕ್ತ ಟೀಂ ಎಂಟ್ರಿ ಕೊಟ್ಟಿದ್ರು. ಅಲರಾಂ ಹೊಡೆಯೋದಕ್ಕಿಂತ ಮುಂಚೆ ಭ್ರಷ್ಟರ ಪಾಲಿನ ಸಿಂಹಸ್ವಪ್ನ ಲೋಕಾಯುಕ್ತ, ಭ್ರಷ್ಟರ ಮನೆಯ ಕದ ತಟ್ಟಿದ್ರು. ಒಂದಲ್ಲ.. ಎರಡಲ್ಲ.. ರಾಜ್ಯದ 15 ಕಡೆ ಲೋಕಾಯುಕ್ತಕ್ಕೆ ಟೀಂ ರೇಡ್ ಮಾಡಿದೆ. ಅಷ್ಟಕ್ಕೂ ದಾಳಿ ವೇಳೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕ ಹಣವೆಷ್ಟು ಗೊತ್ತಾ?

ಸರ್ಕಾರಿ ಅಧಿಕಾರಿಗಳ ಜನ್ಮ ಜಾಲಾಡಿದ ಲೋಕಾಯುಕ್ತ

ನಿನ್ನೆ ಸರ್ಕಾರಿ ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿತ್ತು. 15 ಅಧಿಕಾರಿಗಳಿಗೆ ಸಂಬಂಧಿಸಿದ 62 ಕಡೆ ರೇಡ್ ಮಾಡಿ ಶಾಕ್ ಕೊಟ್ಟಿತ್ತು. ಆದ್ರೆ ದಾಳಿ ವೇಳೆ ಸಿಕ್ಕ.. ಕಂತೆ ಕಂತೆ ನೋಟುಗಳು.. ಆಸ್ತಿ ದಾಖಲೆಗಳು.. ಚಿನ್ನಾಭರಣಗಳನ್ನ ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಂಗಳೂರು ‘ಲೋಕಾ’ ರೇಡ್

ಬೆಂಗಳೂರಿನ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಹಾಗೂ ಕಚೇರಿ ಮೇಲೆ‌ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ರು.. ಇನ್ನು ದಾಳಿ ವೇಳೆ 40 ಲಕ್ಷ ನಗದು ಸೇರಿದಂತೆ 1 ಕೋಟಿ 90 ಲಕ್ಷಕ್ಕೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಅಜಿತ್ ರೈಗೆ ಸಂಬಂಧಿಸಿದ ಸುಮಾರು 11 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ಸಂಬಂಧಿಕರು, ಸ್ನೇಹಿತರ ಹೆಸರಲ್ಲಿ ಬೇನಾಮಿ ಆಸ್ತಿ ಮಾಡಿಟ್ಟಿರುವುದು ಪತ್ತೆಯಾಗಿದೆ. ಜೊತೆಗೆ 4 ಫಾರ್ಚ್ಯುನರ್, 4 ಥಾರ್ ಜೀಪ್, ಒಂದು ಲ್ಯಾಂಡ್ ಕ್ರೂಜರ್ ಸೇರಿದಂತೆ ಐಷಾರಾಮಿ ಕಾರುಗಳು. ನಾಲ್ಕು ಐಶಾರಾಮಿ ಬೈಕ್ಗಳು ಪತ್ತೆಯಾಗಿದೆ. ಇನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಅಜಿತ್ ರೈ ಸುಮಾರು 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ.

ಬಾಗಲಕೋಟೆ ‘ಲೋಕಾ’ ರೇಡ್

ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್​​ನಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ 32 ಲಕ್ಷ ರೂಪಾಯಿ ಹಣ ಸೇರಿದಂತೆ ಅಂದಾಜು 1.45 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನೊಬ್ಬ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ರಾಮಪ್ಪ ಶಿರೂರ್ ಎಂಬುವವರ ಮನೆಯಲ್ಲಿ ಲೋಕಾಯುಕ್ತ ಟೀಂ ದಾಳಿ ಮಾಡಲಾಗಿದೆ. ಕೃಷ್ಣಾರಿಗೆ ಸಂಬಂಧಿಸಿದ ಎಲ್ಲಾ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಲೋಕಾಯುಕ್ತ ಟೀಂಗೆ ಒಟ್ಟು 71.88 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮುದ್ದೇಬಿಹಾಳ, ಬಸವನ ಬಾಗೇವಾಡಿ ರೇಡ್

ಮುದ್ದೇಬಿಹಾಳದ ಜಿನ್ನಪ್ಪ ಪದ್ಮಣ್ಣ ಶೆಟ್ಟಿಗೆ ಸೇರಿದ 3 ಸ್ಥಳಗಳಲ್ಲಿ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ಜಿನ್ನಪ್ಪ ಪದ್ಮಣ್ಣ ಶೆಟ್ಟಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದಾಳಿ ವೇಳೆ ಒಟ್ಟು 1.42 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇನ್ನು ಬಸವನ ಬಾಗೇವಾಡಿ ಪಿಡಬ್ಲ್ಯುಡಿ ಉಪವಿಭಾಗದ ಎಇಇ ಕಚೇರಿಯ ಕಿರಿಯ ಅಭಿಯಂತರರು ಭೀಮನಗೌಡ ಬಿರಾದಾರ್ಗೆ ಸೇರಿದ 2 ಸ್ಥಳಗಳಲ್ಲಿ ರೇಡ್ ಮಾಡಲಾಗಿದೆ. ಈ ವೇಳೆ 1.90 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮಡಿಕೇರಿ, ಸಿಂಧನೂರು ರೇಡ್

ಮಡಿಕೇರಿ ಗ್ರಾಮೀಣ ನೀರು ಮತ್ತು ಒಳಚರಂಡಿ ಎಫ್‌ಡಿಎ ಅಬ್ದುಲ್ ಬಷೀರ್ಗೆ ಸೇರಿದ ಮೂರು ಕಡೆ ದಾಳಿ ನಡೆಸಿ 14 ಲಕ್ಷ ನಗದು ಸೇರಿ 1.14 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ ಮಾಡಿದ್ದಾರೆ. ಇತ್ತ ಸಿಂಧನೂರು ಟೌನ್ ಆಂಡ್ ಕಂಟ್ರಿ ಪ್ಲಾನಿಂಗ್ ಮೆಂಬರ್ ಸೆಕ್ರೆಟರಿ ಶರಣಪ್ಪಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 14 ಲಕ್ಷ ನಗದು ಸೇರಿ 2.03 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆ‌ ಮಾಡಿದ್ದಾರೆ.

ತುಮಕೂರು, ರಾಯಚೂರು ರೇಡ್

ತುಮಕೂರು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕೆ.ಹೆಚ್ ರವಿಗೆ ಸೇರಿದ ಆರು ಕಡೆ ದಾಳಿ ನಡೆಸಿ 4.27 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ. ರಾಯಚೂರು ಲೋಕೋಪಯೋಗಿ ಇಲಾಖೆ ಎಇಇ ಪ್ರಕಾಶ್ಗೆ ಸೇರಿದ ಎರಡು ಕಡೆ ದಾಳಿ ನಡೆಸಿ 2.71 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.

ಹಗರಿಬೊಮ್ಮನಹಳ್ಳಿ, ಗೌರಿಬಿದನೂರು ರೇಡ್

ಹಗರಿಬೊಮ್ಮನಹಳ್ಳಿ ಇಇ ಜೆಸ್ಕಾಂ ಶೇಖರ್ ಹನುಮಂತ ಬಹುರೂಪಿಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಿ 3 ಕೋಟಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಗೌರಿಬಿದನೂರು ಅಬಕಾರಿ ಇನ್ಸ್‌ಪೆಕ್ಟರ್ ವಿ.ರಮೇಶ್ಗೆ ಸೇರಿದ ಐದು ಕಡೆ ದಾಳಿ ನಡೆಸಿ 2.44 ಕೋಟಿ ರೂಪಾಯಿ ಪತ್ತೆ ಮಾಡಿದ್ದಾರೆ.

ತುಮಕೂರು, ಚಿಕ್ಕಮಗಳೂರು ತಲಾಷ್

ತುಮಕೂರು ಎಇ ಗ್ರೇಡ್-2 ಕೆಆರ್ಐಡಿಎಲ್ ಕೋದಂಡರಾಮಯ್ಯಗೆ ಸೇರಿದ ಆರು ಕಡೆ ದಾಳಿ ನಡೆಸಿ 2.47 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮಾಡಿದ್ದಾರೆ. ಇತ್ತ ಚಿಕ್ಕಮಗಳೂರು ಫ್ಲಾನಿಂಗ್ ನಿರ್ಮಿತಿ ಕೇಂದ್ರ ಮ್ಯಾನೇಜರ್ ಗಂಗಾಧರ್ಗೆ ಸೇರಿದ ನಾಲ್ಕು ಕಡೆ ದಾಳಿ ನಡೆಸಲಾಗಿದ್ದು, 3.75 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಒಟ್ಟಾರೆ ರಾಜ್ಯದ ಭ್ರಷ್ಟರ ಪಾಲಿನ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ 15 ಕಡೆಗಳಲ್ಲಿ ದಾಳಿ ನಡೆಸಿದ್ದು ಆದಾಯಕ್ಕಿಂತ ಹೆಚ್ಚಿನ ಸಂಪತ್ತನ್ನು ಸಂಪಾದಿಸಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.. ಹಾಗೆ ಭ್ರಷ್ಟರು ಗಳಿಸಿದ್ದ ಅಕ್ರಮ ಆಸ್ತಿಗಳನ್ನ ವಶಕ್ಕೆ ಪಡೆದಿದ್ದಾರೆ.

ವಿಶೇಷ ವರದಿ: ಅಂಕಿತಾ ರೈ, ಕ್ರೈಂ ಬ್ಯೂರೋ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More