/newsfirstlive-kannada/media/post_attachments/wp-content/uploads/2024/07/LOKAYUKTA_RAIDS.jpg)
ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಬಿಗ್ ಶಾಕ್ ಕೊಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 53 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹೃದಯ ವಿದ್ರಾವಕ ಘಟನೆ.. ನಿರಂತರ ಮಳೆಗೆ ಮನೆ ಕುಸಿದು ಅವಳಿ ಮಕ್ಕಳು, ಓರ್ವ ಮಹಿಳೆ ಸಾವು
ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಬಾಗಿಲು ತಟ್ಟಿದ್ದಾರೆ. ಮನೆಯಲ್ಲಿ ಇನ್ನು ಹಾಸಿಗೆಯಿಂದ ಎದ್ದಳೋ ಮೊದಲೇ ಅಧಿಕಾರಿಗಳು ಎಂಟ್ರಿಯಾಗಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶಿವಮೊಗ್ಗ, ಯಾದಗಿರಿ ಹಾಗೂ ತುಮಕೂರಿನಲ್ಲಿ ದಾಳಿ ಮಾಡಲಾಗುತ್ತಿದೆ.
ಇನ್ನು ನೂರಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳ ತಂಡ ಏಕ ಕಾಲಕ್ಕೆ ರೇಡ್ ಮಾಡುತ್ತಿದ್ದಾರೆ. ಒಟ್ಟು 54 ಕಡೆಗಳಲ್ಲಿ ಈ ದಾಳಿ ನಡೆಯುತ್ತಿದ್ದು ಭ್ರಷ್ಟಾಚಾರ ನಡೆಸಿದಂತಹ ಅಧಿಕಾರಿಗಳ ಮನೆಯಲ್ಲಿ ದಾಖಲೆ, ಹಣ, ಆಸ್ತಿ-ಪಾಸ್ತಿಗಳ ವಿವರಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲೂ ಭಾರೀ ಮಳೆ.. ಧರೆಗುರುಳಿದ ಮರ.. ಎರಡು ಬೈಕ್ಗಳು, ಕಾರು ಜಖಂ..!
ಲೋಕಾಯುಕ್ತ ದಾಳಿ ವಿವರ
- ಬೆಂಗಳೂರು ನಗರ: ಬಿ.ವಿ ರಾಜ FDA ಆಫೀಸರ್, ಕೆ.ಐ.ಎ.ಡಿ.ಬಿ ಬೆಂಗಳೂರು
- ಬೆಂಗಳೂರು ನಗರ: ರಮೇಶ್ ಕುಮಾರ್, ಜಂಟಿ ಆಯುಕ್ತ, ಕಮರ್ಷಿಯಲ್ ಟ್ಯಾಕ್ಸ್
- ಬೆಂಗಳೂರು ನಗರ: ಅಥರ್ ಅಲಿ, ಡೆಪ್ಯೂಟಿ ಕಂಟ್ರೋಲರ್ ಲೀಗಲ್ ಮೆಟ್ರೊಲಜಿ ಡಿಪಾರ್ಟ್ಮೆಂಟ್
- ಬೆಂಗಳೂರು ನಗರ: ಚೇತನ್ ಕುಮಾರ್, ಕಾರ್ಮಿಕ ಇಲಾಖೆ ಅಧಿಕಾರಿ, ಮಂಡ್ಯ ವಿಭಾಗ
- ಬೆಂಗಳೂರು ನಗರ: ಮಂಜುನಾಥ್ ಟಿ.ಆರ್., FDA ಆಫೀಸರ್, ಬೆಂಗಳೂರು ಉತ್ತರ ಸಬ್ ಡಿವಿಜನ್ ಕಚೇರಿ
- ಬೆಂಗಳೂರು ಗ್ರಾಮಾಂತರ: ಆರ್.ಸಿದ್ದಪ್ಪ, ಸೀನಿಯರ್ ವೆಟರ್ನರಿ ಆಫೀಸರ್, ದೊಡ್ಡಬೆಳವಂಗಲ ಹೋಬಳಿ ದೊಡ್ಡಬಳ್ಳಾಪುರ.
- ಬೆಂಗಳೂರು ಗ್ರಾಮಾಂತರ, ಕೆ.ನರಸಿಂಹಮೂರ್ತಿ, ಮುನ್ಸಿಪಲ್ ಕಮಿಷನರ್, ಹೆಬ್ಬಗೋಡಿ
ಇದನ್ನೂ ಓದಿ: ಲಕ್ಷ ಲಕ್ಷ ರೂಪಾಯಿ ಸಂಬಳ, ಇಂಜಿನಿಯರ್ ಅಂತ ನಂಬಿಸಿ ಮದುವೆ.. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
- ತುಮಕೂರು: ಸಿ.ಟಿ ಮುತ್ತುಕುಮಾರ್, ಅಡಿಷನಲ್ ಡೈರೆಕ್ಟರ್ ಆಫ್ ಇಂಡಸ್ಟ್ರಿ & ಕಮರ್ಷಿಯಲ್ ಡಿಪಾರ್ಟ್ಮೆಂಟ್.
- ಯಾದಗಿರಿ: ಬಲವಂತ್ ರಾಥೋಡ್, ಯೋಜನಾ ನಿರ್ದೇಶಕ, ಯಾದಗಿರಿ ಜಿಲ್ಲಾ ಪಂಚಾಯತಿ
- ಶಿವಮೊಗ್ಗ: ನಾಗೇಶ್ ಬಿ.ಎಸ್, ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ, ಭದ್ರಾವತಿ ತಾಲೂಕು
- ಶಿವಮೊಗ್ಗ: ಪ್ರಕಾಶ್, ಡೆಪ್ಯೂಟಿ ಡೈರೆಕ್ಟರ್, ತೋಟಗಾರಿಕೆ ಇಲಾಖೆ
- ಮಂಗಳೂರು: ಆನಂದ್, ಕೆ.ಎ.ಎಸ್ ಗ್ರೇಡ್ ಅಧಿಕಾರಿ, ಕಮಿಷನರ್ ಮಂಗಳೂರು ಮಹಾನಗರ ಪಾಲಿಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ