newsfirstkannada.com

‘ಲೋಕ’ ಚುನಾವಣೆ ಹಿನ್ನೆಲೆ ಬಾಂಬೆ ಬಾಯ್ಸ್​ಗೆ ಗಾಳ; ಸದ್ದಿಲ್ಲದೆ ಆಪರೇಷನ್ ಹಸ್ತಕ್ಕೆ ಮುಂದಾದ್ರ ಡಿಕೆಶಿ

Share :

Published February 21, 2024 at 11:57am

    ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಮೇಲೆ ಡಿ ಕೆ ಶಿವಕುಮಾರ್​ ಕಣ್ಣು

    ಬಾಂಬೆ ಬಾಯ್ಸ್ ಜೊತೆ ಸಂಪರ್ಕದಲ್ಲಿರುವ ಡಿಸಿಎಂ ಡಿ ಕೆ ಶಿವಕುಮಾರ್

    ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಶಾಸಕರಾಗಿರುವವರ ಜೊತೆ ಸಂಪರ್ಕ

ಲೋಕ ಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಹೀಗಿರುವಾಗ ಹಸ್ತ ಪಾಳಯದಲ್ಲಿ ಸದ್ದಿಲ್ಲದೇ ಆಪರೇಷನ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಲೋಕ ಸಭಾ ಚುನಾವಣೆ ಹಿನ್ನೆಲೆ ಬಾಂಬೆ ಬಾಯ್ಸ್​ಗೆ ಗಾಳ ಹಾಕಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಅವರು ಗೆಲ್ಲುವ ಪಣ ತೊಟ್ಟಿದ್ದಾರೆ. ಹೀಗಾಗಿ ಬಾಂಬೆ ಬಾಯ್ಸ್ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಶಾಸಕರಾಗಿರುವವರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಡಿ.ಕೆ. ಶಿವಕುಮಾರ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಗೆಲ್ಲಲು ಡಿಕೆಶಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಡಿಸಿಎಂ ಡಿಕೆಶಿ ಜನ ಸಂಪರ್ಕ ಸಭೆ ನೆಪದಲ್ಲಿ ಆಯಾ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಬೈರತಿ ಬಸವರಾಜ್, ಗೋಪಾಲಯ್ಯ, ಎಸ್.ಟಿ ಸೋಮಶೇಖರ್, ಮುನಿರತ್ನ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರ ಸಮಸ್ಯೆ ಆಲಿಸೋ ಜೊತೆಗೆ ಬಾಂಬೆ ಬಾಯ್ಸ್ ಜೊತೆ ಬಾಂಧವ್ಯ ಬೆಸಯುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಕಡೆ ಎಸ್.ಟಿ ಸೋಮಶೇಖರ್ ಒಲವು ತೋರಿಸಿದ್ದು, ಬೈರತಿ, ಗೋಪಾಲಯ್ಯ, ಮುನಿರತ್ನ ಜೊತೆಗೆ ಡಿಕೆಶಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಚುನಾವಣೆ ಹಿನ್ನೆಲೆ ಬಾಂಬೆ ಬಾಯ್ಸ್​ಗೆ ಗಾಳ; ಸದ್ದಿಲ್ಲದೆ ಆಪರೇಷನ್ ಹಸ್ತಕ್ಕೆ ಮುಂದಾದ್ರ ಡಿಕೆಶಿ

https://newsfirstlive.com/wp-content/uploads/2023/06/D-K-Shivakumar.jpg

    ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಮೇಲೆ ಡಿ ಕೆ ಶಿವಕುಮಾರ್​ ಕಣ್ಣು

    ಬಾಂಬೆ ಬಾಯ್ಸ್ ಜೊತೆ ಸಂಪರ್ಕದಲ್ಲಿರುವ ಡಿಸಿಎಂ ಡಿ ಕೆ ಶಿವಕುಮಾರ್

    ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಶಾಸಕರಾಗಿರುವವರ ಜೊತೆ ಸಂಪರ್ಕ

ಲೋಕ ಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದೆ. ಹೀಗಿರುವಾಗ ಹಸ್ತ ಪಾಳಯದಲ್ಲಿ ಸದ್ದಿಲ್ಲದೇ ಆಪರೇಷನ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಲೋಕ ಸಭಾ ಚುನಾವಣೆ ಹಿನ್ನೆಲೆ ಬಾಂಬೆ ಬಾಯ್ಸ್​ಗೆ ಗಾಳ ಹಾಕಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಅವರು ಗೆಲ್ಲುವ ಪಣ ತೊಟ್ಟಿದ್ದಾರೆ. ಹೀಗಾಗಿ ಬಾಂಬೆ ಬಾಯ್ಸ್ ಜೊತೆ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿಯಲ್ಲಿ ಶಾಸಕರಾಗಿರುವವರ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ಡಿ.ಕೆ. ಶಿವಕುಮಾರ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ. ಬೆಂಗಳೂರಿನ ಎಲ್ಲಾ ಕ್ಷೇತ್ರಗಳ ಗೆಲ್ಲಲು ಡಿಕೆಶಿ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಡಿಸಿಎಂ ಡಿಕೆಶಿ ಜನ ಸಂಪರ್ಕ ಸಭೆ ನೆಪದಲ್ಲಿ ಆಯಾ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಬೈರತಿ ಬಸವರಾಜ್, ಗೋಪಾಲಯ್ಯ, ಎಸ್.ಟಿ ಸೋಮಶೇಖರ್, ಮುನಿರತ್ನ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಜನರ ಸಮಸ್ಯೆ ಆಲಿಸೋ ಜೊತೆಗೆ ಬಾಂಬೆ ಬಾಯ್ಸ್ ಜೊತೆ ಬಾಂಧವ್ಯ ಬೆಸಯುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಕಡೆ ಎಸ್.ಟಿ ಸೋಮಶೇಖರ್ ಒಲವು ತೋರಿಸಿದ್ದು, ಬೈರತಿ, ಗೋಪಾಲಯ್ಯ, ಮುನಿರತ್ನ ಜೊತೆಗೆ ಡಿಕೆಶಿ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More