ಒಂದು ಗಂಗೂಲಿ ಜೆರ್ಸಿ ಬಿಚ್ಚಿದ್ದು ಆದ್ರೆ ಇನ್ನೊಂದು ಯಾವುದು?
ಲಾರ್ಡ್ಸ್ ಮೈದಾನದ ಬಾಲ್ಕನಿ ಭಾರತಕ್ಕೆ ವೆರಿ ಮೆಮರೇಬಲ್..!
ಎಂದೆಂದಿಗೂ ಸ್ಮರಣೀಯವಾದ ಆ 2 ಘಟನೆಗಳು ಯಾವವು?
ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಕ್ರಿಕೆಟ್ ಕಾಶಿ ಅಂತಾನೇ ಫೇಮಸ್. ಇಂತಹ ಐಕಾನಿಕ್ ಸ್ಟೇಡಿಯಂ ಭಾರತಕ್ಕೆ ಎಂದೆಂದೂ ಸ್ಮರಣೀಯ. ಕಾರಣ ಆ ಎರಡು ಘಟನೆಗಳು. ಅಷ್ಟಕ್ಕೂ ಆ ಘಟನೆಗಳು ಯಾವುವು?.
ಇಂಗ್ಲೆಂಡಿನ ಲಾರ್ಡ್ಸ್ ಮೈದಾನಕ್ಕೆ ದೊಡ್ಡ ಇತಿಹಾಸವಿದೆ. ಅದ್ರಲ್ಲೂ ಈ ಮೈದಾನದ ಬಾಲ್ಕನಿಯಂತೂ ಅತಿ ಸುಂದರ. ಈ ಬಾಲ್ಕನಿಯಲ್ಲಿ ಕೂತು ಪಂದ್ಯ ವೀಕ್ಷಿಸುವ ಮಜಾನೇ ಬೇರೆ ಬಿಡಿ. ಇಂತಹ ಲಾರ್ಡ್ಸ್ ಮೈದಾನದ ಬಾಲ್ಕನಿ ಟೀಮ್ ಇಂಡಿಯಾಗೆ ವೆರಿ ಮೆಮರೇಬಲ್. 2 ಘಟನೆಗಳಿಂದ ಸ್ಮರಣೀವಾಗಿ ಉಳಿದುಕೊಂಡಿದೆ. 2002ರಲ್ಲಿ ಭಾರತ ತಂಡ ನ್ಯಾಟ್ವೆಸ್ಟ್ ಟ್ರೋಫಿ ಜಯಿಸಿತ್ತು. ಅದೇ ಖುಷಿಯಲ್ಲಿ ಕ್ಯಾಪ್ಟನ್ ಸೌರವ್ ಗಂಗೂಲಿ ಬಾಲ್ಕನಿಯಲ್ಲಿ ಜರ್ಸಿ ತೆಗೆದು ಸಂಭ್ರಮಿಸಿದ್ರು.
ಇದು ನ್ಯಾಟ್ವೆಸ್ಟ್ ಸರಣಿಯ ಗೆಲುವನ್ನ ಮತ್ತಷ್ಟು ಮೆಬರೇಬಲ್ ಆಗಿ ಉಳಿಯುವಂತೆ ಮಾಡಿತು. ಇನ್ನು 1983ರಲ್ಲಿ ಭಾರತ ತಂಡ ಇದೇ ಲಾರ್ಡ್ಸ್ ಬಾಲ್ಕನಿಯಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಹಿಡಿದು ಇತಿಹಾಸ ಬರೆದಿತ್ತು. ಆಟಗಾರರು ಕಪ್ ಹಿಡಿದು ಸಂಭ್ರಮದಲ್ಲಿ ಮುಳುಗಿ ಹೋಗಿದ್ರು. ಟ್ರೋಫಿ ವಿಜಯೋತ್ಸವದ ಬಳಿಕ ಕೃಷ್ಣಮಾಚಾರಿ ಶ್ರೀಕಾಂತ್ ಬಾಲ್ಕನಿಯಲ್ಲಿ ನಿಂತು ಸಿಗರೇಟ್ ಸೇದಿದ್ದು ಭಾರೀ ಸುದ್ದಿಯಾಗಿತ್ತು. ಈ 2 ಘಟನೆಗಳು ಭಾರತಕ್ಕೆ ಲಾರ್ಡ್ಸ್ ಬಾಲ್ಕನಿಯನ್ನ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಒಂದು ಗಂಗೂಲಿ ಜೆರ್ಸಿ ಬಿಚ್ಚಿದ್ದು ಆದ್ರೆ ಇನ್ನೊಂದು ಯಾವುದು?
ಲಾರ್ಡ್ಸ್ ಮೈದಾನದ ಬಾಲ್ಕನಿ ಭಾರತಕ್ಕೆ ವೆರಿ ಮೆಮರೇಬಲ್..!
ಎಂದೆಂದಿಗೂ ಸ್ಮರಣೀಯವಾದ ಆ 2 ಘಟನೆಗಳು ಯಾವವು?
ಇಂಗ್ಲೆಂಡ್ನ ಲಾರ್ಡ್ಸ್ ಮೈದಾನ ಕ್ರಿಕೆಟ್ ಕಾಶಿ ಅಂತಾನೇ ಫೇಮಸ್. ಇಂತಹ ಐಕಾನಿಕ್ ಸ್ಟೇಡಿಯಂ ಭಾರತಕ್ಕೆ ಎಂದೆಂದೂ ಸ್ಮರಣೀಯ. ಕಾರಣ ಆ ಎರಡು ಘಟನೆಗಳು. ಅಷ್ಟಕ್ಕೂ ಆ ಘಟನೆಗಳು ಯಾವುವು?.
ಇಂಗ್ಲೆಂಡಿನ ಲಾರ್ಡ್ಸ್ ಮೈದಾನಕ್ಕೆ ದೊಡ್ಡ ಇತಿಹಾಸವಿದೆ. ಅದ್ರಲ್ಲೂ ಈ ಮೈದಾನದ ಬಾಲ್ಕನಿಯಂತೂ ಅತಿ ಸುಂದರ. ಈ ಬಾಲ್ಕನಿಯಲ್ಲಿ ಕೂತು ಪಂದ್ಯ ವೀಕ್ಷಿಸುವ ಮಜಾನೇ ಬೇರೆ ಬಿಡಿ. ಇಂತಹ ಲಾರ್ಡ್ಸ್ ಮೈದಾನದ ಬಾಲ್ಕನಿ ಟೀಮ್ ಇಂಡಿಯಾಗೆ ವೆರಿ ಮೆಮರೇಬಲ್. 2 ಘಟನೆಗಳಿಂದ ಸ್ಮರಣೀವಾಗಿ ಉಳಿದುಕೊಂಡಿದೆ. 2002ರಲ್ಲಿ ಭಾರತ ತಂಡ ನ್ಯಾಟ್ವೆಸ್ಟ್ ಟ್ರೋಫಿ ಜಯಿಸಿತ್ತು. ಅದೇ ಖುಷಿಯಲ್ಲಿ ಕ್ಯಾಪ್ಟನ್ ಸೌರವ್ ಗಂಗೂಲಿ ಬಾಲ್ಕನಿಯಲ್ಲಿ ಜರ್ಸಿ ತೆಗೆದು ಸಂಭ್ರಮಿಸಿದ್ರು.
ಇದು ನ್ಯಾಟ್ವೆಸ್ಟ್ ಸರಣಿಯ ಗೆಲುವನ್ನ ಮತ್ತಷ್ಟು ಮೆಬರೇಬಲ್ ಆಗಿ ಉಳಿಯುವಂತೆ ಮಾಡಿತು. ಇನ್ನು 1983ರಲ್ಲಿ ಭಾರತ ತಂಡ ಇದೇ ಲಾರ್ಡ್ಸ್ ಬಾಲ್ಕನಿಯಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಟ್ರೋಫಿ ಹಿಡಿದು ಇತಿಹಾಸ ಬರೆದಿತ್ತು. ಆಟಗಾರರು ಕಪ್ ಹಿಡಿದು ಸಂಭ್ರಮದಲ್ಲಿ ಮುಳುಗಿ ಹೋಗಿದ್ರು. ಟ್ರೋಫಿ ವಿಜಯೋತ್ಸವದ ಬಳಿಕ ಕೃಷ್ಣಮಾಚಾರಿ ಶ್ರೀಕಾಂತ್ ಬಾಲ್ಕನಿಯಲ್ಲಿ ನಿಂತು ಸಿಗರೇಟ್ ಸೇದಿದ್ದು ಭಾರೀ ಸುದ್ದಿಯಾಗಿತ್ತು. ಈ 2 ಘಟನೆಗಳು ಭಾರತಕ್ಕೆ ಲಾರ್ಡ್ಸ್ ಬಾಲ್ಕನಿಯನ್ನ ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ