newsfirstkannada.com

ಹೀರೋಯಿನ್ ಮಾಡ್ತೀನಿ ಅಂತಾ ನಂಬಿಸಿ ಮಾಡಬಾರದ್ದು ಮಾಡಿದ; ನ್ಯಾಯಕ್ಕಾಗಿ ಸಂತ್ರಸ್ತೆ 6 ತಿಂಗಳಿಂದ ಅಲೆದಾಟ

Share :

Published February 19, 2024 at 2:10pm

Update February 19, 2024 at 3:03pm

    ಕರೆದಾಗ ಬರಬೇಕಂತೆ, ಇಲ್ಲದಿದ್ರೆ ವಿಡಿಯೋ ಬಿಡ್ತೀನಿ ಎಂದು ಧಮ್ಕಿ

    6 ತಿಂಗಳ ಅಲೆದಾಟದ ನಂತರ ಫೆ 15 ರಂದು ಕೇಸ್ ದಾಖಲು

    ಲವ್, ಸೆಕ್ಸ್​, ಬ್ಲ್ಯಾಕ್​ಮೇಲ್.. ಆಮೇಲೆ ಮತ್ತೊಂದು ಮದುವೆ

ಬೆಂಗಳೂರು: ಕನ್ನಡ, ತಮಿಳು ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ, ನಂತರ ಪ್ರೀತಿಯ ನಾಟಕವಾಡಿ, ಲೈಂಗಿಕವಾಗಿ ನನ್ನನ್ನು ಬಳಸಿಕೊಂಡು.. ನನಗೆ ಗೊತ್ತಿಲ್ಲದೇ ಇನ್ನೊಂದು ಮದುವೆಯಾಗಿ ಇದೀಗ ನಿನ್ನ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡೋದಾಗಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬಳು ನ್ಯಾಯಕ್ಕಾಗಿ ಜ್ಞಾನಭಾರತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಏನಿದು ಆರೋಪ ಪ್ರಕರಣ..?
ಸಲೂನ್ ಒಂದರಲ್ಲಿ ಬ್ಯೂಟಿಷಿಯನ್ ಆಗಿರುವ ಸಂತ್ರಸ್ತ ಯುವತಿಗೆ ಆರೋಪಿ ಸಂತೋಷ್ 2019ರಲ್ಲಿ ಪರಿಚಯವಾಗಿದ್ದ. ತಾನು ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟನೆ ಮಾಡ್ತಿರೋದಾಗಿ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತಿದ್ದಂತೆಯೇ, ನಿನ್ನನ್ನು‌ ಹೀರೋಯಿನ್ ಮಾಡ್ತೀನಿ ಎಂದು ನಂಬಿಸಿದ್ದನಂತೆ.

ಇದರಿಂದ ನಂಬಿದ ಯುವತಿ, ಆತನಿಗೆ ಮತ್ತಷ್ಟು ಹತ್ತಿರ ಆಗಿದ್ದಳು. ಕೊನೆಗೆ ಆತ ನಾವಿಬ್ಬರು ಮದುವೆ ಆಗೋಣ ಎಂದು ಪ್ರೀತಿಯ ನಾಟಕವಾಡಿದ್ದ. ಮದುವೆ ಪ್ರಪೋಸಲ್​​ಗೆ ಒಪ್ಪಿದ್ದ ಯವತಿ, ಆತನ ಜೊತೆ ಸುತ್ತಾಡಳು ಶುರು ಮಾಡಿದ್ದಳು. ಈ ವೇಳೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಏಕಾಂತದ ಕ್ಷಣವನ್ನು ಮೊಬೈಲ್​ನಲ್ಲಿ ಚಿತ್ರೀಸಿಕೊಂಡಿದ್ದ ಎನ್ನಲಾಗಿದೆ.

ಈ ಎಲ್ಲಾ ಕಿತಾಪತಿ ಮಧ್ಯೆ ಯುವತಿಗೆ ತಿಳಿಯದ ಹಾಗೆ ಮತ್ತೊಂದು‌ ವಿವಾಹವಾಗಿದ್ದ. ಒಂದಿನ ವಿಚಾರ ಗೊತ್ತಾದ ಮೆಲೆ ಸಂತ್ರಸ್ತೆ ಪ್ರಶ್ನೆ ಮಾಡಿದ್ದಾಳೆ. ಆಗ ಕೋಪಿಸಿಕೊಂಡ ಆರೋಪಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆತನ ಸಹವಾಸವೇ ಸಾಕು ಅನ್ಕೊಂಡು ಬಂದಿದ್ದಳಂತೆ. ಆದರೆ ಫೆಬ್ರವರಿ 14 ರಂದು ಯುವತಿ ಮನೆ ಬಳಿ‌ ಸಂತೋಷ್ ಬಂದಿದ್ದ. ಆಕೆಯನ್ನು ಮನೆ ಮುಂದೆ ಕರೆಸಿಕೊಂಡು, ನೀನು ನಾನು ಕರೆದಾಗ ಬರಬೇಕು. ಇಲ್ಲದಿದ್ದೆ ನಿನ್ನ ಖಾಸಗಿ ಫೋಟೊ, ವಿಡಿಯೋ ವೈರಲ್ ಮಾಡ್ತೀನಿ. ಜೊತೆಗೆ ತಂದೆ, ತಾಯಿಗೆ ತೋರಿಸ್ತೀನಿ ಎಂದು ಧಮ್ಕಿ ಹಾಕಿದ್ದಾನಂತೆ ಎಂದು ಆರೋಪಿಸಿದ್ದಾಳೆ.

ಯುವತಿ ಅವನ ಜೊತೆ ಹೋಗಲು ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ನನಗೆ ಮಾತ್ರವಲ್ಲ ಇದೇ ರೀತಿ ಅನೇಕ ಹೆಣ್ಮಕ್ಕಳಿಗೆ ಈತ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಸದ್ಯ ಯುವತಿ ಸಂತೋಷ್ ಎಂಬ ವ್ಯಕ್ತಿಯ ವಿರುದ್ಧ ಸಂತ್ರಸ್ತ ಠಾಣೆ ಮೆಟ್ಟಿಲೇರಿದ್ದಾಳೆ. ಆದರೆ ಆಕೆಗೆ ಪೊಲೀಸರಿಂದ ನ್ಯಾಯ ಸಿಗುವ ಭರವಸೆ ಕಾಣ್ತಿಲ್ಲ.

ಆಕೆಯೇ ಮಾಡಿದ ಆರೋಪದ ಪ್ರಕಾರ, ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾಳೆ. ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ತಿಲ್ಲ. ನ್ಯಾಯಕ್ಕಾಗಿ‌ ಠಾಣೆ ಅಲೆದು, ಅಲೆದು ಸುಸ್ತಾಗಿದ್ದಾಳೆ. ಕೇಳಿದ್ರೆ ಕರಿತೀವಿ, ನೋಟಿಸ್ ಕೊಡ್ತೀವಿ‌ ಎನ್ನುತ್ತಿದ್ದಾರೆ ಎನ್ನಲಾಗಿದೆ. ಕಳೆದ ಆರು ತಿಂಗಳಿಂದ ಠಾಣೆ ಮೆಟ್ಟಿಲೇರಿದ್ದರೂ ಫೆಬ್ರವರಿ 15 ರಂದು ಆತನ ವಿರುದ್ಧ ಎಫ್​​ಐಆರ್ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೀರೋಯಿನ್ ಮಾಡ್ತೀನಿ ಅಂತಾ ನಂಬಿಸಿ ಮಾಡಬಾರದ್ದು ಮಾಡಿದ; ನ್ಯಾಯಕ್ಕಾಗಿ ಸಂತ್ರಸ್ತೆ 6 ತಿಂಗಳಿಂದ ಅಲೆದಾಟ

https://newsfirstlive.com/wp-content/uploads/2024/02/BNG-SANTOSH.jpg

    ಕರೆದಾಗ ಬರಬೇಕಂತೆ, ಇಲ್ಲದಿದ್ರೆ ವಿಡಿಯೋ ಬಿಡ್ತೀನಿ ಎಂದು ಧಮ್ಕಿ

    6 ತಿಂಗಳ ಅಲೆದಾಟದ ನಂತರ ಫೆ 15 ರಂದು ಕೇಸ್ ದಾಖಲು

    ಲವ್, ಸೆಕ್ಸ್​, ಬ್ಲ್ಯಾಕ್​ಮೇಲ್.. ಆಮೇಲೆ ಮತ್ತೊಂದು ಮದುವೆ

ಬೆಂಗಳೂರು: ಕನ್ನಡ, ತಮಿಳು ಸಿನಿಮಾದಲ್ಲಿ ಅವಕಾಶ ಕೊಡಿಸೋದಾಗಿ ನಂಬಿಸಿ, ನಂತರ ಪ್ರೀತಿಯ ನಾಟಕವಾಡಿ, ಲೈಂಗಿಕವಾಗಿ ನನ್ನನ್ನು ಬಳಸಿಕೊಂಡು.. ನನಗೆ ಗೊತ್ತಿಲ್ಲದೇ ಇನ್ನೊಂದು ಮದುವೆಯಾಗಿ ಇದೀಗ ನಿನ್ನ ಖಾಸಗಿ ಫೋಟೋ, ವಿಡಿಯೋ ವೈರಲ್ ಮಾಡೋದಾಗಿ ಬೆದರಿಸುತ್ತಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬಳು ನ್ಯಾಯಕ್ಕಾಗಿ ಜ್ಞಾನಭಾರತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಏನಿದು ಆರೋಪ ಪ್ರಕರಣ..?
ಸಲೂನ್ ಒಂದರಲ್ಲಿ ಬ್ಯೂಟಿಷಿಯನ್ ಆಗಿರುವ ಸಂತ್ರಸ್ತ ಯುವತಿಗೆ ಆರೋಪಿ ಸಂತೋಷ್ 2019ರಲ್ಲಿ ಪರಿಚಯವಾಗಿದ್ದ. ತಾನು ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿ ನಟನೆ ಮಾಡ್ತಿರೋದಾಗಿ ಪರಿಚಯ ಮಾಡಿಕೊಂಡಿದ್ದ. ಇಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತಿದ್ದಂತೆಯೇ, ನಿನ್ನನ್ನು‌ ಹೀರೋಯಿನ್ ಮಾಡ್ತೀನಿ ಎಂದು ನಂಬಿಸಿದ್ದನಂತೆ.

ಇದರಿಂದ ನಂಬಿದ ಯುವತಿ, ಆತನಿಗೆ ಮತ್ತಷ್ಟು ಹತ್ತಿರ ಆಗಿದ್ದಳು. ಕೊನೆಗೆ ಆತ ನಾವಿಬ್ಬರು ಮದುವೆ ಆಗೋಣ ಎಂದು ಪ್ರೀತಿಯ ನಾಟಕವಾಡಿದ್ದ. ಮದುವೆ ಪ್ರಪೋಸಲ್​​ಗೆ ಒಪ್ಪಿದ್ದ ಯವತಿ, ಆತನ ಜೊತೆ ಸುತ್ತಾಡಳು ಶುರು ಮಾಡಿದ್ದಳು. ಈ ವೇಳೆ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು, ಏಕಾಂತದ ಕ್ಷಣವನ್ನು ಮೊಬೈಲ್​ನಲ್ಲಿ ಚಿತ್ರೀಸಿಕೊಂಡಿದ್ದ ಎನ್ನಲಾಗಿದೆ.

ಈ ಎಲ್ಲಾ ಕಿತಾಪತಿ ಮಧ್ಯೆ ಯುವತಿಗೆ ತಿಳಿಯದ ಹಾಗೆ ಮತ್ತೊಂದು‌ ವಿವಾಹವಾಗಿದ್ದ. ಒಂದಿನ ವಿಚಾರ ಗೊತ್ತಾದ ಮೆಲೆ ಸಂತ್ರಸ್ತೆ ಪ್ರಶ್ನೆ ಮಾಡಿದ್ದಾಳೆ. ಆಗ ಕೋಪಿಸಿಕೊಂಡ ಆರೋಪಿ ಆತನ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ನೊಂದ ಯುವತಿ ಆತನ ಸಹವಾಸವೇ ಸಾಕು ಅನ್ಕೊಂಡು ಬಂದಿದ್ದಳಂತೆ. ಆದರೆ ಫೆಬ್ರವರಿ 14 ರಂದು ಯುವತಿ ಮನೆ ಬಳಿ‌ ಸಂತೋಷ್ ಬಂದಿದ್ದ. ಆಕೆಯನ್ನು ಮನೆ ಮುಂದೆ ಕರೆಸಿಕೊಂಡು, ನೀನು ನಾನು ಕರೆದಾಗ ಬರಬೇಕು. ಇಲ್ಲದಿದ್ದೆ ನಿನ್ನ ಖಾಸಗಿ ಫೋಟೊ, ವಿಡಿಯೋ ವೈರಲ್ ಮಾಡ್ತೀನಿ. ಜೊತೆಗೆ ತಂದೆ, ತಾಯಿಗೆ ತೋರಿಸ್ತೀನಿ ಎಂದು ಧಮ್ಕಿ ಹಾಕಿದ್ದಾನಂತೆ ಎಂದು ಆರೋಪಿಸಿದ್ದಾಳೆ.

ಯುವತಿ ಅವನ ಜೊತೆ ಹೋಗಲು ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ನನಗೆ ಮಾತ್ರವಲ್ಲ ಇದೇ ರೀತಿ ಅನೇಕ ಹೆಣ್ಮಕ್ಕಳಿಗೆ ಈತ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಸದ್ಯ ಯುವತಿ ಸಂತೋಷ್ ಎಂಬ ವ್ಯಕ್ತಿಯ ವಿರುದ್ಧ ಸಂತ್ರಸ್ತ ಠಾಣೆ ಮೆಟ್ಟಿಲೇರಿದ್ದಾಳೆ. ಆದರೆ ಆಕೆಗೆ ಪೊಲೀಸರಿಂದ ನ್ಯಾಯ ಸಿಗುವ ಭರವಸೆ ಕಾಣ್ತಿಲ್ಲ.

ಆಕೆಯೇ ಮಾಡಿದ ಆರೋಪದ ಪ್ರಕಾರ, ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾಳೆ. ದೂರು ನೀಡಿದ್ದರೂ ಪೊಲೀಸರು ಕ್ರಮ ತೆಗೆದುಕೊಳ್ತಿಲ್ಲ. ನ್ಯಾಯಕ್ಕಾಗಿ‌ ಠಾಣೆ ಅಲೆದು, ಅಲೆದು ಸುಸ್ತಾಗಿದ್ದಾಳೆ. ಕೇಳಿದ್ರೆ ಕರಿತೀವಿ, ನೋಟಿಸ್ ಕೊಡ್ತೀವಿ‌ ಎನ್ನುತ್ತಿದ್ದಾರೆ ಎನ್ನಲಾಗಿದೆ. ಕಳೆದ ಆರು ತಿಂಗಳಿಂದ ಠಾಣೆ ಮೆಟ್ಟಿಲೇರಿದ್ದರೂ ಫೆಬ್ರವರಿ 15 ರಂದು ಆತನ ವಿರುದ್ಧ ಎಫ್​​ಐಆರ್ ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More